ಆ್ಯಪ್ನಗರ

ಶೈನ್ ಶೆಟ್ಟಿ ಅತಿರೇಕಕ್ಕೆ ಕಣ್ಣೀರು ಹಾಕಿದ ಚಂದನಾ; ಲದ್ದಿ ವಿಚಾರಕ್ಕೂ ಕಿತ್ತಾಡಿದ ಬಿಗ್ ಬಾಸ್ ಸ್ಪರ್ಧಿಗಳು!!!

ವಾಸುಕಿ ವೈಭವ್, ಚಂದನಾ, ಶೈನ್ ಶೆಟ್ಟಿ ಮೂವರು ಬಿಗ್ ಬಾಸ್ ಮನೆಯಲ್ಲಿ ತುಂಬ ಆತ್ಮೀಯರು. ಇಲ್ಲಿಯವರೆಗೂ ಚಂದನಾ ವಿರುದ್ಧವಾಗಿ ಮಾತನಾಡದ ಶೈನ್ ಶೆಟ್ಟಿ ಏಕಾ ಏಕಿ ಅವರ ವಿರುದ್ಧವೇ ವಾದಕ್ಕಿಳಿದಿದ್ದಾರೆ. ಇದರಿಂದಾಗಿ ಚಂದನಾ ಅತ್ತಿದ್ದಾರೆ.

Vijaya Karnataka Web 14 Nov 2019, 3:05 pm
ಬಿಗ್ ಬಾಸ್ ಮನೆಯಲ್ಲಿ ಚಂದನಾ ಮತ್ತು ಶೈನ್ ಶೆಟ್ಟಿ, ವಾಸುಕಿ ವೈಭವ್ ಮೂವರು ಗೆಳೆಯರು. ಚಂದನಾ ವಿರುದ್ಧವಾಗಿ ಶೈನ್ ಶೆಟ್ಟಿ ಮತ್ತು ವಾಸುಕಿ ಇಲ್ಲಿಯವರೆಗೂ ಮಾತನಾಡಿಲ್ಲ. ಆದರೆ ಈಗ ಶೈನ್ ಶೆಟ್ಟಿ ಮಾತನಾಡಿದ ಬಗೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಸುಖಾಸುಮ್ಮನೆ ನೀರು ಸಿಗೋದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಚಂದನಾ ಸ್ನಾನ ಮಾಡಿದ್ದನ್ನು ಶೈನ್ ವಿರೋಧಿಸಿದ್ದಾರೆ.
Vijaya Karnataka Web shine shetty and chandana verbal fight
ಶೈನ್ ಶೆಟ್ಟಿ ಅತಿರೇಕಕ್ಕೆ ಕಣ್ಣೀರು ಹಾಕಿದ ಚಂದನಾ; ಲದ್ದಿ ವಿಚಾರಕ್ಕೂ ಕಿತ್ತಾಡಿದ ಬಿಗ್ ಬಾಸ್ ಸ್ಪರ್ಧಿಗಳು!!!


ಶೈನ್ ಮತ್ತು ಚಂದನಾ ಮಧ್ಯೆ ಜಗಳ ಯಾಕೆ?
ಟಾಸ್ಕ್ ಮಾಡಿದವರ ಮೈ ಹಾಗೂ ತಲೆಗೆಲ್ಲ ಮರಳು ಮೆತ್ತಿಕೊಂಡಿದ್ದರು. ಈ ವೇಳೆ ಚಂದನಾ ಸ್ನಾನ ಮಾಡಿದ್ದಾರೆ. ನಮ್ಮ ಮೈ ಕೂಡ ಮರಳಿನಿಂದ ಗಲೀಜಾಗಿತ್ತು, ನಾವು ಸ್ನಾನ ಮಾಡಿಲ್ಲ, ಆದರೆ ಚಂದನಾ ಒಬ್ಬರೇ ಸ್ನಾನ ಮಾಡಿದ್ದಾರೆ ಎಂಬುದು ಶೈನ್ ಶೆಟ್ಟಿ ಆರೋಪವಾಗಿತ್ತು. ಬಿಗ್ ಬಾಸ್ ನೀಡಿದ ಆದೇಶದ ಆಧಾರದ ಮೇಲೆ ನಾನು ಸ್ನಾನ ಮಾಡಿಕೊಂಡು ಬಂದೆ ಎಂದಿದ್ದಾರೆ ಚಂದನಾ. ಇಲ್ಲ ಬಿಗ್ ಬಾಸ್ ಬೇರೆ ಆದೇಶ ನೀಡಿದ್ದಾರೆ ಎಂದು ಶೈನ್ ಮತ್ತು ಕಿಶನ್ ವಿರೋಧಿಸಿದ್ದಾರೆ. ಈ ವಿಚಾರದ ಮೇಲೆಯೇ ಶೈನ್ ಶೆಟ್ಟಿ ಮತ್ತು ಚಂದನಾ ನಡುವೆ ಸಾಕಷ್ಟು ವಾದಗಳು ನಡೆದಿವೆ.
Episode 27 Highlights: ನಾನು ವಿಶ್ವಮಾನವಳು, 'ಅಸ್ಪೃಶ್ಯರು' ಬಳಕೆ ಬಗ್ಗೆ ಚೈತ್ರಾ ಕೋಟೂರ್

ಶೈನ್ ಹೇಳಿದ್ದೇನು?
ಶೈನ್ ತಲೆಯಿರಬೇಕು ಎಂದಿದ್ದಾರೆ. ಆಗ ಚಂದನಾ ನಮಗೆ ತಲೆಯಿಲ್ಲ, ಬ್ರೇನ್ ಇಲ್ಲ, ಲದ್ದಿಯಿದೆ ಎಂದಿದ್ದಾರೆ. ಲದ್ದಿಯನ್ನು ಆನೆಗೆ, ಎಮ್ಮೆ ವಿಚಾರಕ್ಕೆ ಬಳಕೆ ಮಾಡುತ್ತಾರೆ ಎಂಬ ಬಗ್ಗೆಯೇ ಸಾಕಷ್ಟು ಚರ್ಚೆ ನಡೆಯಿತು. "ಗಾರ್ಡನ್ ಪ್ರದೇಶಕ್ಕೆ ಬರುವಂತೆ ಬಿಗ್ ಬಾಸ್ ಆದೇಶ ನೀಡಿದ್ದರು. ಅವರು ಬೇರೆ ಆದೇಶ ನೀಡಿರಲಿಲ್ಲ. ಹಾಗಿದ್ದರೆ ನಾವು ಬ್ಯಾಗ್ ಎತ್ತಿಕೊಂಡು ಬಂದು ಗಾರ್ಡನ್‌ಗೆ ಬಂದು ಕೂರುತ್ತಿದ್ದೆವು ಎಂದರು ಶೈನ್. ಆಗ ನೀವು ಮಾಡಬೇಕಿತ್ತು ಎಂದಿದ್ದಾರೆ ಚಂದನಾ."

Episode 32 Highlights: ಮನಸ್ಸಿನಲ್ಲಿದ್ದ ರೋಷ ಹೊರಹಾಕಿದ ಜೈ ಜಗದೀಶ್

ಶೈನ್ ಮಾತಿಗೆ ಕಣ್ಣೀರು ಹಾಕಿದ ಚಂದನಾ
ಶೈನ್ ಶೆಟ್ಟಿ "ಹೋಗಮ್ಮ ಕಂಡಿದೀನಿ, ನಿನ್ನ ವಯಸ್ಸಿಗೆ ತಕ್ಕಂತೆ ಮಾತನಾಡು, ಗಾಂಚಾಲಿ ಮಾಡಬೇಡಿ, ಇದೆಲ್ಲ ನನ್ನ ಹತ್ತಿರ ಇಟ್ಟುಕೊಳ್ಳಬೇಡಿ, ಯಾರ ಹತ್ತಿರ ಇಟ್ಟುಕೊಳ್ಳಬೇಕೋ ಅವರ ಹತ್ತಿರ ಇಟ್ಟುಕೊಳ್ಳಿ" ಎಂದು ಆವಾಜ್ ಹಾಕಿದ್ದಾರೆ. ಶೈನ್ ಮಾತಿಗೆ ಪ್ರತಿ ಉತ್ತರ ಕೊಡುತ್ತಿದ್ದ ಚಂದನಾ ಕೊನೆಯಲ್ಲಿ ಅಳುತ್ತ ಹೊರ ನಡೆದಿದ್ದಾರೆ. ಆಗ ಶೈನ್ ಶೆಟ್ಟಿ ನಾನು ತಮಾಷೆ ಮಾಡಿದ್ದು, ಸೀರಿಯಸ್ ಆಗಿ ತಗೋಬೇಡಿ ಎಂದು ಚಂದನಾರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ.

Episode 30 Highlights: ಎಲ್ಲರನ್ನೂ ಮನೆಯಿಂದ ಹೊರಹಾಕಿದ ಬಿಗ್ ಬಾಸ್!

ಸಗಣಿಗೂ, ಎಮ್ಮೆಗೂ ವ್ಯತ್ಯಾಸ ತಿಳಿದಿಲ್ಲ.

ಆನೆ ವಿಚಾರಕ್ಕೆ ಲದ್ದಿ ಅಂತಾರೆ ಎಂದಿದ್ದಾರೆ ಚಂದನಾ. ಶೈನ್ ಶೆಟ್ಟಿ ಇಲ್ಲ, ಆನೆ ಜೊತೆಗೆ ಎಮ್ಮೆಗೂ ಲದ್ದಿ ಅಂತಾರೆ ಅನ್ನೋದು ಶೈನ್ ಶೆಟ್ಟಿ ವಾದ. ಇವರೆಡನ್ನೂ ಗಮನಿಸಿದರೆ ಇವರ ತಲೆಯಲ್ಲಿ ಏನಿದೆ ಅಂತ ವೀಕ್ಷಕರು ಯೋಚಿಸಬೇಕಾಗಿದೆ.

Episode 30 Highlights: ಎಲ್ಲರನ್ನೂ ಮನೆಯಿಂದ ಹೊರಹಾಕಿದ ಬಿಗ್ ಬಾಸ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ