ಆ್ಯಪ್ನಗರ

'ಕಾಮಿಡಿ ಕಿಲಾಡಿ' ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಬಿಗ್‌ಬಾಸ್‌ ಹೋಗೋದು ನಿಜಾನಾ? ಶಿವರಾಜ್ ಹೇಳಿದ್ದೇನು?

'ಬಿಗ್‌ಬಾಸ್ ಕನ್ನಡ ಸೀಸನ್ 7' ಆರಂಭವಾಗುತ್ತಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಒಂದೋಂದೇ ಹೆಸರು ಕೂಡ ಹೊರಬರುತ್ತಿದೆ. 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಬಿಗ್‌ಬಾಸ್ ಮನೆ ಪ್ರವೇಶಿಸುವುದು ನಿಜಾನಾ?

Vijaya Karnataka Web 25 Sep 2019, 3:28 pm
ಕನ್ನಡ ಬಿಗ್ ಬಾಸ್‌ನ 6 ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ‌‌. ಏಳನೇ ಸೀಸನ್ ಅಕ್ಟೋಬರ್ 20ರಿಂದ ಆರಂಭವಾಗುತ್ತಿದೆ‌. ಈಗಾಗಲೇ ಸ್ಪಧಿ೯ಗಳು ಯಾರು ಯಾರು ಭಾಗವಹಿಸಬಹುದು ಎಂಬ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ಆ ಹೀರೋಯಿನ್ ಬತಾ೯ರೆ, ಈ ಹೀರೋ ಬತಾ೯ರೆ ಎಂಬ ಅಂದಾಜು, ಊಹೆ ಎಲ್ಲವೂ ಪ್ರೇಕ್ಷಕರ ತಲೆಯಲ್ಲಿರತ್ತೆ. ಹಾಗೆಯೇ ಯಾರು ಯಾರು ಹೋಗಬಹುದು ಎಂಬ ಸಂಭಾವ್ಯ ಪಟ್ಟಿಯೂ ಸುದ್ದಿಯಾಗುತ್ತದೆ.
Vijaya Karnataka Web shiv


ಈಗ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶಿವರಾಜ ಕೆ.ಆರ್.ಪೇಟೆ ಬಿಗ್ ಬಾಸ್‌ಗೆ ಹೋಗ್ತಾರೆ ಎಂಬ ಸುದ್ದಿಯಿದೆ. 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋದಲ್ಲಿ ಶಿವರಾಜ್ ಕೆ.ಆರ್.ಪೇಟೆ ಪ್ರೇಕ್ಷಕರ ಮೆಚ್ಚಿಗೆ ಗಳಿಸಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಲೀಡ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಬಿಗ್ ಬಾಸ್‌ ಕನ್ನಡ ಸೀಸನ್‌ 7'ಗೆ ಎಂಟ್ರಿ ಕೊಡ್ತಾರಂತೆ ದರ್ಶನ್ ನಾಯಕಿ, ಪ್ರಖ್ಯಾತ ಹಾಸ್ಯ ನಟ

ರಾಬರ್ಟ್, ಭಜರಂಗಿ-2, ಬ್ರಹ್ಮಚಾರಿ, ಜೇಕಬ್ ವರ್ಗೀಸ್ ಅವರ ರಿಷಿ ಸಿನಿಮಾದ ಡಬ್ಬಿಂಗ್ ಮಾಡಬೇಕಿದೆ. ಗುರುನಂದನ್ ಅವರ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನವೆಂಬರ್‌ನಿಂದ 'ಮದಗಜ' ಸಿನಿಮಾ ಶೂಟಿಂಗ್ ನಡಿತಿದೆ. ಇನ್ನು ಕೆಲವು ರಿಮೇಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ, ಆ ಸಿನಿಮಾಗಳಲ್ಲಿ ಲೀಡ್ ಕಾಮಿಡಿ ಪಾತ್ರದಲ್ಲಿ ನಟಿಸಬೇಕಿದೆ. ಕೆಲವೊಂದು ಸಿನಿಮಾಗಳ ಡಬ್ಬಿಂಗ್ ಮಾಡಬೇಕಿದೆ, ಶೂಟಿಂಗ್ ಕೂಡ ಇದೆ. ಇಷ್ಟೆಲ್ಲ ಕೆಲಸಗಳ ನಡುವೆ 'ಬಿಗ್‌ಬಾಸ್' ಹೋಗುವುದು ಶಿವರಾಜ್ ಅವರಿಗೆ ಕಷ್ಟವಾಗುತ್ತದೆ.

" ಬಿಗ್‌ಬಾಸ್‌ನಿಂದ ಆಫರ್ ಬಂದಿದ್ದು ನಿಜ. ಎಲ್ಲರಂತೆ ನನಗೂ ಕೂಡ ಬಿಗ್‌ಬಾಸ್ ಹೋಗೋದಕ್ಕೆ ಇಷ್ಟವಿದೆ. ಆದರೆ ಈಗ ನಾನಿರುವ ಪರಸ್ಥಿತಿಯಲ್ಲಿ ಮೂರು ತಿಂಗಳು ಟೈಮ್ ಕೊಡೋದು ಕಷ್ಟವಾಗಿದೆ. ನವೆಂಬರ್‌ ಅಂತ್ಯದವರೆಗೂ ಒಂದಷ್ಟು ಡಬ್ಬಿಂಗ್ ಕೆಲಸ, ಆಮೇಲೆ ಶುರುವಾಗುವ ಮೂರು ಸಿನಿಮಾಗಳು ಸಿನಿಮಾ ಕೆಲಸ ಒಪ್ಪಿಕೊಂಡಾಗ ಬಿಗ್‌ಬಾಸ್ ಹೋಗೋದು ಹೇಗೆ? ಅಲ್ವಾ? ಈಗಾಗಲೇ ಮಾತು ಕೊಟ್ಟಿರುವ ಸಿನಿಮಾ ಕೆಲಸಗಳನ್ನು ನಾನು ಮುಗಿಸಬೇಕಿದೆ" ಎಂದು ವಿಜಯಕರ್ನಾಟಕ ವೆಬ್‌ಸೈಟ್ ಜೊತೆ ಮಾತನಾಡಿದ್ದಾರೆ ಶಿವರಾಜ್ ಕೆ.ಆರ್.ಪೇಟೆ.

'ಬಿಗ್‌ಬಾಸ್‌ ಕನ್ನಡ ಸೀಸನ್ 7'ಗೆ ಎಂಟ್ರಿ ಕೊಡಲಿರುವ ಕನ್ನಡದ ನಟಿ ಇವರೇನೆ!!!

ನಿಯಮದ ಪ್ರಕಾರ ಬಿಗ್‌ಬಾಸ್ ಹೋಗುತ್ತಿರುವವರು ತಾವು ಬಿಗ್ ಮನೆಗೆ ಪ್ರವೇಶ ಮಾಡುವುದರ ಬಗ್ಗೆ ಏನನ್ನೂ ಹೇಳುವಂತಿಲ್ಲ. ಹೀಗಾಗಿ ಸಂಭಾವ್ಯ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಕೆಲವರು ಬಿಗ್‌ಬಾಸ್‌ಗೆ ಹೋಗೋದು ನಿಜ ಎಂದಾದರೆ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎನ್ನುತ್ತಾರೆ, ಹೋಗೋದಿಲ್ಲ ಎಂದಾದರೆ ಇಲ್ಲ ಎಂದು ಖಚಿತವಾಗಿ ಹೇಳುತ್ತಾರೆ. ಶಿವರಾಜ್‌ ಕೆ.ಆರ್.ಪೇಟೆ ಹೇಳುವಂತೆ ಬಿಗ್‌ಬಾಸ್‌ಗೆ ಅವರು ಹೋಗುತ್ತಿಲ್ಲ.

'ಬಿಗ್ ಬಾಸ್ ಕನ್ನಡ ಸೀಸನ್ 7'ನಿಂದ ಹೊರಬಿತ್ತು ಇಂಟರೆಸ್ಟಿಂಗ್ ವಿಚಾರ: ಭಾಗವಹಿಸುವ ಸ್ಪರ್ಧಿಗಳು ಯಾರು?

ಶಿವರಾಜ್ ಕೆ.ಆರ್.ಪೇಟೆ 'ಸಿಂಗ, ಯಜಮಾನ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಧೀರೇಂದ್ರ ಗೋಪಾಲ್ ಅವರ ಧ್ವನಿಯನ್ನು ಅನುಕರಣೆ ಮಾಡುವಲ್ಲಿ ಶಿವರಾಜ್ ಕೆ.ಆರ್.ಪೇಟೆ ನಿಸ್ಸೀಮರು. ಇವರ ಈ ಧ್ವನಿಯನ್ನು ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದಾರೆ. ಎಂದಿನಂತೆ ಈ ಬಾರಿ ಕೂಡ ಸುದೀಪ್ ಈ ರಿಯಾಲಿಟಿ ಶೋದ ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದಿನ ಸೀಸನ್ ಕಲರ್ಸ್ ಸೂಪರ್ ಅಲ್ಲಿ ಈ ಶೋ ಪ್ರಸಾರವಾಗಿತ್ತು. ಮತ್ತೆ ಈ ಬಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಹಿಂದಿನಬಾರಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿತ್ತು, ಆದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳೇ ಸ್ಪರ್ರ್ಧಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ