ಆ್ಯಪ್ನಗರ

'ಬಿಗ್ ಬಾಸ್' ಮನೆಗೆ ಬರುವ ಹುಡುಗಿಯರಿಗೆಲ್ಲ ಹರೀಶ್ ರಾಜ್‌ ಹೇಳೋದು ಇಂದೊಂದೇ ಮಾತು!!

'ಬಿಗ್‌ ಬಾಸ್‌' ಮನೆಯಲ್ಲೀಗ ದೀಪಿಕಾ ದಾಸ್‌, ವಾಸುಕಿ ವೈಭವ್, ಕುರಿ ಪ್ರತಾಪ್‌, ಭೂಮಿ ಶೆಟ್ಟಿ, ಶೈನ್ ಶೆಟ್ಟಿ ಫಿನಾಲೆ ತಲುಪಿದ್ದಾರೆ. ಮಂಗಳವಾರ ನಟ ಹರೀಶ್‌ ರಾಜ್ ಈಗಾಗಲೇ ಮನೆಯಿಂದ ಹೊರಬಂದಿದ್ದಾರೆ. ಮಿಡ್‌ನೈಟ್ ಎಲಿಮಿನೇಷನ್‌ ಮೂಲಕ ಅವರನ್ನು ಮನೆಯಿಂದ ಹೊರಗೆ ಕರೆತರಲಾಗಿದೆ.

Vijaya Karnataka Web 29 Jan 2020, 2:04 pm
'ಬಿಗ್‌ ಬಾಸ್‌' ಮನೆಯಲ್ಲೀಗ ದೀಪಿಕಾ ದಾಸ್‌, ವಾಸುಕಿ ವೈಭವ್, ಕುರಿ ಪ್ರತಾಪ್‌, ಭೂಮಿ ಶೆಟ್ಟಿ, ಶೈನ್ ಶೆಟ್ಟಿ ಫಿನಾಲೆ ತಲುಪಿದ್ದಾರೆ. ಮಂಗಳವಾರ ನಟ ಹರೀಶ್‌ ರಾಜ್ ಈಗಾಗಲೇ ಮನೆಯಿಂದ ಹೊರಬಂದಿದ್ದಾರೆ. ಮಿಡ್‌ನೈಟ್ ಎಲಿಮಿನೇಷನ್‌ ಮೂಲಕ ಅವರನ್ನು ಮನೆಯಿಂದ ಹೊರಗೆ ಕರೆತರಲಾಗಿದೆ. ಆದರೆ, ಅದಕ್ಕೂ ಮೊದಲು ಮನೆಯಲ್ಲಿದ್ದಾಗ ಒಂದಷ್ಟು ತರಲೆ, ತಮಾಷೆಗಳು ನಡೆದಿವೆ. ಅಂದಹಾಗೆ, ಮನೆಗೆ ಬರುವ ಹೊಸ ಹುಡುಗಿಯರಿಗೆ ಹರೀಶ್ ರಾಜ್‌, ಕಾಮನ್ ಆಗಿ ಒಂದು ಮಾತನ್ನು ಹೇಳುತ್ತಾರಂತೆ! ಅದೇನು ಅನ್ನೋದನ್ನು ಕುರಿ ಪ್ರತಾಪ್‌ ಹೇಳಿದ್ದಾರೆ.
Vijaya Karnataka Web singer varijashree enter bigg boss house
'ಬಿಗ್ ಬಾಸ್' ಮನೆಗೆ ಬರುವ ಹುಡುಗಿಯರಿಗೆಲ್ಲ ಹರೀಶ್ ರಾಜ್‌ ಹೇಳೋದು ಇಂದೊಂದೇ ಮಾತು!!



​ನಿಮ್ಮನ್ನ ಎಲ್ಲೋ ನೋಡಿದೀನ್ರಿ?

ಕುರಿ ಪ್ರತಾಪ್ ಹೇಳೋ ಪ್ರಕಾರ, ಮನೆಗೆ ಬರುವ ಪ್ರತಿಯೊಬ್ಬ ಹುಡುಗಿಗೂ ಹರೀಶ್ ರಾಜ್ ಹೀಗೆ ಹೇಳುತ್ತಾರಂತೆ. 'ನಿಮ್ಮನ್ನ ಎಲ್ಲೋ ನೋಡಿದೀನ್ರಿ?' ಅಂತ ಅವರು ಹೇಳುತ್ತಾರಂತೆ. 'ಬಿಗ್‌ ಬಾಸ್' ಮನೆಗೆ ಗಾಯಕಿ ವಾರಿಜಾಶ್ರೀ ಎಂಟ್ರಿ ನೀಡಿದ್ದರು. ಆಗ ಅವರನ್ನು ನೋಡಿ, ಈ ಮಾತನ್ನು ಹರೀಶ್ ಹೇಳಿದರು. ತಕ್ಷಣವೇ ಪಕ್ಕದಲ್ಲೇ ಇದ್ದ ಕುರಿ ಪ್ರತಾಪ್‌, 'ಮನೆಗೆ ಯಾವುದೇ ಹೊಸ ಹುಡುಗಿ ಬಂದ್ರು ಇದೇ ಡೈಲಾಗ್ ಹೇಳ್ತೀರಾ' ಅಂತ ಹರೀಶ್ ಅವರ ಕಾಲೆಳೆದರು.

​ಹಾಡಿನ ಬದಲು, ಗಾಯಕಿಯೇ ಬಂದ್ರು

ಪ್ರತಿ ಬಾರಿಯೂ ಬಿಗ್‌ ಬಾಸ್ ಮನೆಯಲ್ಲಿ ಒಂದು ಹಾಡನ್ನು ಹಾಕುವ ಮೂಲಕ ದಿನದ ಪ್ರಾರಂಭವಾಗುತ್ತಿತ್ತು. ಆದರೆ, ಕಲರ್ಸ್‌ ಕನ್ನಡದಲ್ಲಿ 'ಹಾಡು ಕರ್ನಾಟಕ' ಶೋ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಗಾಯಕಿ ವಾರಿಜಾಶ್ರೀ ಮನೆಯೊಳಗೆ ಎಂಟ್ರಿ ನೀಡಿದ್ದರು. ಬೆಳ್‌ಬೆಳಗ್ಗೆಯೇ ತಮ್ಮ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದರು. 'ಪಲ್ಲವಿ ಅನು ಪಲ್ಲವಿ' ಸಿನಿಮಾದ 'ನಗುವ ನಯನ..' ಹಾಡನ್ನು ಹಾಡಿದರು.

​ಎಲ್ಲದಕ್ಕೂ ಒಂದೇ ಪದ ಬಳಸುವ ಕುರಿ

ವಾರಿಜಾಶ್ರೀ ಮನೆಯೊಳಗೆ ಪ್ರವೇಶ ಮಾಡಿದ ಮೇಲೆ ಅವರೊಂದಿಗೆ ಉಭಯಕುಶಲೋಪರಿ ಮಾತನಾಡಿದರು. ಆಗ ನೀವು ನಟನೆ ಮಾಡಿದೀರಾ ಎಂಬ ಪ್ರಶ್ನೆ ಅವರಿಗೆ ಎದುರಾಯ್ತು. ವಾರಿಜಾಶ್ರೀ, ತುಂಬ ನಾಟಕದಲ್ಲಿ ಮಾಡಿದ್ದೆ ಎಂದರು. ಅದಕ್ಕೆ 'ಬೈ ಬರ್ತ್ ನಟಿ ನೀವು' ಎಂದರು. ಅದಕ್ಕೆ ಮನೆಯಲ್ಲಿದ್ದವರು, 'ಕುರಿ ಸಂದರ್ಭಗಳಲ್ಲೂ ಒಂದೇ ಪದ ಬಳಸುತ್ತಾರೆ' ಎಂದು ಛೇಡಿಸಿದರು.

​ಮನೆಯವರಿಗಾಗಿ ಮತ್ತೊಂದು ಹಾಡು ಹೇಳಿದ ವಾರಿಜಾಶ್ರೀ

ಮನೆಯೊಳಗೆ ಕೆಲಹೊತ್ತು ಸಮಯ ಕಳೆದ ಮೇಲೆ ವಾರಿಜಾಶ್ರೀಗೆ ಬಿಗ್ ಬಾಸ್ ಕಡೆಯಿಂದ, 'ಕೂಡಲೇ ಮನೆಯಿಂದ ಹೊರಡಬೇಕು' ಎಂಬ ಆದೇಶ ಬಂತು. ಆಗ ಮನೆಯ ಸದಸ್ಯರು ಇನ್ನೊಂದು ಹಾಡು ಹಾಡುವಂತೆ ಕೇಳಿಕೊಂಡರು. ಎಲ್ಲರ ಕೋರಿಕೆ ಮೇಲೆ 'ಕೃಷ್ಣ ನೀ ಬೇಗನೇ ಬಾರೋ..' ಹಾಡು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ