ಆ್ಯಪ್ನಗರ

ಬಿಗ್ ಬಾಸ್ ಕನ್ನಡ ಸೀಸನ್ 8: ನಾಯಿ ಮಾಲೀಕರ ಮೇಲೆ ಹರಿಹಾಯ್ದ ಪ್ರಶಾಂತ್ ಸಂಬರಗಿ!

ಬಿಗ್ ಬಾಸ್ ಮನೆಯಲ್ಲಿ ರಾಷ್ಟ್ರೀಯವಾದಿ, ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಪ್ರಶಾಂತ್ ಸಂಬರಗಿ ಅವರು ನಾಯಿ ಮಾಲೀಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಕೋರ್ಟ್‌ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ದರಂತೆ. ಏನದು?

Authored byಟೀನಾ | Vijaya Karnataka Web 3 Mar 2021, 1:29 pm

ಹೈಲೈಟ್ಸ್‌:

ನಾಯಿ ಮಾಲೀಕರಿಗೆ ಸ್ವಲ್ಪವೂ ಸಾಮಾಜಿಕ ಕಳಕಳಿ ಇಲ್ವೇ ಎಂದು ಪ್ರಶ್ನಿಸಿದ ಪ್ರಶಾಂತ್ ಸಂಬರಗಿ
ಬಿಗ್ ಬಾಸ್ ಮನೆಯಲ್ಲಿ ನಾಯಿ ಮಾಲೀಕರ ವಿರುದ್ಧ ಹರಿಹಾಯ್ದ ರಾಷ್ಟ್ರೀಯವಾದಿ
ನಾಯಿಗಳ ಮಲದ ವಿಚಾರಕ್ಕಾಗಿ ಆಕ್ರೋಶ ಹೊರಹಾಕಿದ ಪ್ರಶಾಂತ್ ಸಂಬರಗಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬಿಗ್ ಬಾಸ್ ಮನೆಯಲ್ಲಿ ಅನೇಕ ವಿಚಾರಗಳು ಹೊರ ಬರುತ್ತವೆ, ಅಂತೆಯೇ ಈಗಾಗಲೇ ದೊಡ್ಮನೆ ಹೊರಗಡೆ ಸದ್ದು ಮಾಡಿರುವ ರಾಷ್ಟ್ರೀಯವಾದಿ, ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಪ್ರಶಾಂತ್ ಸಂಬರಗಿ ಅವರು ನಾಯಿ ಮಾಲೀಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ವಿಶೇಷವಾಗಿ ಬೆಂಗಳೂರಿನಲ್ಲಿ ನಾಯಿ ಮಾಲೀಕರು ಫುಟ್‌ಬಾತ್‌ನಲ್ಲಿ ಮಲವನ್ನು ಮಾಡಿಸುತ್ತಿರುತ್ತಾರಂತೆ, ಇದರಿಂದ ಜನರು ಫುಟ್‌ಬಾತ್‌ನಲ್ಲಿ ಓಡಾಡಾಲು ಕಷ್ಟವಾಗುವುದು. ನಾಯಿಯ ಮಲದಲ್ಲಿ ಸಿಕ್ಕಾಪಟ್ಟೆ ಬ್ಯಾಕ್ಟೀರಿಯ ಇರುತ್ತದೆ ಎಂಬುದು ಪ್ರಶಾಂತ್ ಅವರ ಕಳಕಳಿ, ಹೀಗಾಗಿ ಕೋರ್ಟ್‌ನಲ್ಲಿ ಅವರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಅವರು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.

"ನಾನು ಹೇಳುವ ವಿಚಾರ ನಾಯಿ ಪ್ರಿಯರಿಗೆ ಬೇಸರ ತರಿಸಬಹುದು. ನಾನು ಒಂದು ವರ್ಷ ಸಿಂಗಾಪುರದಲ್ಲಿದ್ದೆ. ಅಲ್ಲಿ ನಾಯಿಗಳ ಮಲವನ್ನು ಸ್ವಚ್ಛವಾಗಿ ತೆಗೆಯುತ್ತಾರೆ. ಅಧ್ಯಯನವನ್ನು ಮಾಡಿದ್ದೇನೆ, ವಿಶ್ಲೇಷಣೆ ಮಾಡಿದ್ದೇನೆ. ನಾಯಿಗಳು ಮಾಡುವ ಮಲವನ್ನು ಅವರೇ ಎತ್ತಬೇಕು, ದಂಡ ಎತ್ತಬೇಕು ಅಂತ ಅರ್ಜಿ ಸಲ್ಲಿಸಿದ್ದೆ. ನಾನು ಹೊರಗಡೆ ನೋಡುವಾಗ ಯಾರಿಗಾದರೂ ಹೇಳಿದಾಗ ಕೂಡ ನಮ್ಮ ನಾಯಿ ಅಲ್ಲ ಅದು, ಬೇರೆಯವರ ನಾಯಿ ಅಂತಾರೆ. 5% ಜನರು ಮಾತ್ರ ಅದನ್ನು ಸ್ವಚ್ಛ ಮಾಡುತ್ತಾರೆ. ನಾಯಿ ಮಲದಿಂದ ಸಿಕ್ಕಾಪಟ್ಟೆ ರೋಗಗಳು ಬರುತ್ತವೆ" ಎಂದು ಪ್ರಶಾಂತ್ ಹೇಳಿದ್ದಾರೆ.

Also Read-bigg boss 8: ನಟಿ ದಿವ್ಯಾ ಉರುಡುಗ ಕೈ ಹಿಡಿದು ಭವಿಷ್ಯ ಹೇಳಿದ ಪ್ರಶಾಂತ್ ಸಂಬರ್ಗಿ: ಕರ್ಮಫಲಗಳ ಲೆಕ್ಕಾಚಾರವಂತೆ!

"ನಾಯಿ ಮಾಲೀಕರಿಗೆ ಸಾಮಾಜಿಕ ಕಳಕಳಿ ಸ್ವಲ್ಪವೂ ಇಲ್ವಾ? ಒಂದು ಮನೆಗೆ ಎರಡು ನಾಯಿ ಅಂತ ನೋಂದಣಿ ಮಾಡಿಸಲಾಯ್ತು, ಆದರೆ 100 ನಾಯಿಗಳಿಗೆ 2 ನಾಯಿಯಾದರೂ ಕೂಡ ನೋಂದಣಿ ಆಗಬೇಕಿತ್ತು. ಬೆಂಗಳೂರಿನಲ್ಲಿ ಕೋರಮಂಗಲದಲ್ಲಿ ನಾಯಿಗಳ ಸಂಖ್ಯೆ ಜಾಸ್ತಿ ಇದೆ ಅಂತ ಅಂತಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ. ತುಂಬ ಧಾರಾಳವಾಗಿ ಫುಟ್‌ಬಾತ್‌ನಲ್ಲಿ ನಾಯಿಯನ್ನು ಮಲ ಮಾಡಿಸಲು ಕರೆದುಕೊಂಡು ಹೋಗುತ್ತಾರೆ, ವಾಕ್ ಮಾಡುತ್ತಾರೆ. ನನಗೂ ನಾಯಿಯೆಂದರೆ ಇಷ್ಟ. ಆದರೆ ಅದಕ್ಕೆ ಕ್ರಮವಿದೆ. ಬೀದಿ ನಾಯಿಗಳ ಸಂತತಿ ಕಡಿಮೆ ಮಾಡಬೇಕು ಎಂದು ಎಬಿಸಿ ಮಾಡಿಸಲಾಗುತ್ತಿದೆ. ಕೆಲವರು ನಾಯಿಗಳಿಗೆ ಟಾಯ್ಲೆಟ್ ಮಾಡಿಸೋದನ್ನು ರೂಢಿ ಮಾಡಿಸುತ್ತಿರುತ್ತಾರೆ" ಎಂದು ಪ್ರಶಾಂತ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ