ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ವೈಷ್ಣವಿ ಗೌಡ ಮನೆಯವರ ಪ್ರೀತಿ ಸಂಪಾದಿಸಿರುವುದು ಮಾತ್ರವಲ್ಲ, ವೀಕ್ಷಕರಿಂದಲೂ ಅವರಿಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಹಲವು ಬಾರಿ ನಾಮಿನೇಟ್ ಆಗಿದ್ರೂ ಅವರನ್ನು ವೀಕ್ಷಕರು ವೋಟ್ ಹಾಕಿ ಉಳಿಸಿದ್ದಾರೆ. ಮನೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುತ್ತ, ಸಖತ್ ತಾಳ್ಮೆಯಿಂದ ಇರುವವರು ವೈಷ್ಣವಿ. ಇದೀಗ ಅವರು ಮದುವೆ ಕುರಿತಾಗಿ ಬಿಗ್ ಬಾಸ್ ಮನೆಯೊಳಗೆ ಮಾತನಾಡಿದ್ದಾರೆ. ಅಷ್ಟಕ್ಕೂ ವಿಚಾರ ಯಾಕೆ ಬಂತು? ಯಾರೊಂದಿಗೆ ಈ ಬಗ್ಗೆ ಮಾತನಾಡಿದ್ರು? 'ನಿನ್ ಗಂಡ ಓಡಿ ಹೋಗ್ತಾನೆ' ಅಂತ ಶುಭಾ ಯಾಕೆ ಹೇಳಿದ್ರು? ಮುಂದೆ ಓದಿ.. ಗಾರ್ಡನ್ ಏರಿಯಾದಲ್ಲಿ ಮದುವೆ ಬಗ್ಗೆ ಮಾತನಾಡಿದ ದಿವ್ಯಾ ಸುರೇಶ್ ಮತ್ತು ವೈಷ್ಣವಿ ಗೌಡ
ದಿವ್ಯಾ: ಇವಾಗ ಸದ್ಯ ಮದುವೆ ಇಲ್ವಲ್ಲಾ?
ವೈಷ್ಣವಿ: ನಾನು ತುದಿಗಾಲಲ್ಲಿ ನಿಂತಿದ್ದೀನಿ..
ದಿವ್ಯಾ: ಮದುವೆ ಅಂದಾಗ ಏನ್ ಎಕ್ಸೈಟ್ ನಿಮಗೆ..? ನಿಮ್ಮ ಕಣ್ಣಮುಂದೆ ಬರುವ ಒಂದು ವಿಷಯ ಯಾವುದು?
ವೈಷ್ಣವಿ: ಮದುವೆ ಅನ್ನೋ ಕಾನ್ಸೆಪ್ಟ್ ನನಗೆ ತುಂಬ ಇಷ್ಟ ಇಷ್ಟ.. ಪ್ರೀತಿ, ಜಗಳ, ಸಂಬಂಧ ಇರಬಹುದು.. ನಿಮ್ಮ ಜೊತೆಗೆ ಒಬ್ಬರು ಜೋಡಿ ಇರ್ತಾರೆ. ನಮ್ಮವರು ಅಂತ ಹೇಳಿಕೊಳ್ಳುವುದಕ್ಕೆ ಒಂದು ಫ್ಯಾಮಿಲಿ ಇರುತ್ತದೆ. ಪೋಷಕರ ಬಳಿ ಎಲ್ಲವನ್ನು ಶೇರ್ ಮಾಡುವುದಕ್ಕೆ ಆಗಲ್ಲ. ಅಣ್ಣ-ತಮ್ಮಂದಿರ ಜೊತೆ ಪ್ರತಿಯೊಂದನ್ನು ಶೇರ್ ಮಾಡುವುದಕ್ಕೆ ಆಗಲ್ಲ. ಹಾಗಂತ, ಗಂಡನ ಜೊತೆಗೂ ಪ್ರತಿಯೊಂದು ಶೇರ್ ಮಾಡವುದಕ್ಕೆ ಆಗಲ್ಲ…
ವೈಷ್ಣವಿ: ನನ್ನ ಜೀವನದಲ್ಲಿ ಸ್ನೇಹಿತರು ತುಂಬ ಕಡಿಮೆ. ನಾನು ಜಾಸ್ತಿ ಯಾರೊಂದಿಗೆ ಮಾತನಾಡುವುದಿಲ್ಲ.
ದಿವ್ಯಾ: ಯಾಕೆ ಆ ಥರ..? ಯಾರ್ ಜೊತೆಗೂ ಯಾಕೆ ಜಾಸ್ತಿ ಮಾತನಾಡಲ್ಲ..
ವೈಷ್ಣವಿ: ನಾನು ಒಬ್ಬರನ್ನು ತುಂಬ ನಂಬ್ತೀನಿ. ನನಗೆ ದೊಡ್ಡ ಗ್ಯಾಂಗ್ ಇರಲ್ಲ. 2-3 ಜನ ಅಷ್ಟೇ ನನ್ನ ಫ್ರೆಂಡ್ಸ್.
ದಿವ್ಯಾ ಮತ್ತು ವೈಷ್ಣವಿ ನಡುವೆ ಈ ಮಾತುಕತೆ ಆದ ಬಳಿಕ ಲಿವಿಂಗ್ ಏರಿಯಾದಲ್ಲಿ ಶುಭಾ, ರಘು, ಅರವಿಂದ್ ಎಲ್ಲರೂ ಇದ್ದರು. ಅಲ್ಲಿಗೆ ಬಂದ ವೈಷ್ಣವಿ, ಏನೋ ಹೇಳುವುದಕ್ಕೆ ಹೋಗಿ, 'ಜೀವನವು ಹಾಗೇ ಅಲ್ವಾ...' ಅಂತ ಶುರು ಮಾಡಿದರು. ಆಗ ಎಲ್ಲರೋ 'ಹೋ...' ಎಂದು ಕಿರುಚಿದರು.
ಬಿಗ್ ಬಾಸ್ನಿಂದ ಹೊರಗಡೆ ಬಂದ್ಮೇಲೆ 1 ವಾರ ಸಂದರ್ಶನ ಕೊಡಲ್ಲ, ನನ್ನನ್ನು ಬಿಟ್ಟುಬಿಡಿ: ಶುಭಾ ಪೂಂಜಾ!
ಶುಭಾ: ನಂಗೆ ಅನ್ನಿಸುತ್ತೆ, ನಿನ್ನ (ವೈಷ್ಣವಿ) ಗಂಡ ಎರಡನೇ ವಾರಕ್ಕೆ ಮನೆ ಬಿಟ್ಟು ಹೊರಗೆ ಹೋಗಿಬಿಡ್ತಾನೆ ಅಂತ.. ಜೀವನ ಶೂನ್ಯ ಶೂನ್ಯ ಅಂದ್ಕೊಂಡು...
ವೈಷ್ಣವಿ: ಜೀವನಪೂರ್ತಿ ನನ್ನ ಜೊತೆಗೇ ಇರ್ತಾನೆ. ಮುಂದಿನ ಜನ್ಮದಲ್ಲೂ ನಿನ್ನ ಜೊತೆಗೇ ಇರ್ತಿನಿ ಅಂತ ಬರ್ತಾನೆ..
ಶುಭಾ: ಅದು ನಿನ್ನ ಭ್ರಮೆ!!
ರಘು: ಈ ಜನ್ಮಕ್ಕೆ ಬೇಡ ಮುಂದಿನ ಜನ್ಮದಲ್ಲಿ ಬರ್ತಿನಿ ಅಂತ ಹೇಳಿ ಹೋಗ್ತಾನೆ...
ಮದುವೆ ವಿಚಾರ ಬಂದಾಗ ನನ್ನನ್ನು ಪ್ರೀತಿಸುವವರು ಹೊರಗಡೆ ಇದ್ದಾರೆ ಎಂದ ಪ್ರಿಯಾಂಕಾ ತಿಮ್ಮೇಶ್!
ದಿವ್ಯಾ: ಇವಾಗ ಸದ್ಯ ಮದುವೆ ಇಲ್ವಲ್ಲಾ?
ವೈಷ್ಣವಿ: ನಾನು ತುದಿಗಾಲಲ್ಲಿ ನಿಂತಿದ್ದೀನಿ..
ದಿವ್ಯಾ: ಮದುವೆ ಅಂದಾಗ ಏನ್ ಎಕ್ಸೈಟ್ ನಿಮಗೆ..? ನಿಮ್ಮ ಕಣ್ಣಮುಂದೆ ಬರುವ ಒಂದು ವಿಷಯ ಯಾವುದು?
ವೈಷ್ಣವಿ: ಮದುವೆ ಅನ್ನೋ ಕಾನ್ಸೆಪ್ಟ್ ನನಗೆ ತುಂಬ ಇಷ್ಟ ಇಷ್ಟ.. ಪ್ರೀತಿ, ಜಗಳ, ಸಂಬಂಧ ಇರಬಹುದು.. ನಿಮ್ಮ ಜೊತೆಗೆ ಒಬ್ಬರು ಜೋಡಿ ಇರ್ತಾರೆ. ನಮ್ಮವರು ಅಂತ ಹೇಳಿಕೊಳ್ಳುವುದಕ್ಕೆ ಒಂದು ಫ್ಯಾಮಿಲಿ ಇರುತ್ತದೆ. ಪೋಷಕರ ಬಳಿ ಎಲ್ಲವನ್ನು ಶೇರ್ ಮಾಡುವುದಕ್ಕೆ ಆಗಲ್ಲ. ಅಣ್ಣ-ತಮ್ಮಂದಿರ ಜೊತೆ ಪ್ರತಿಯೊಂದನ್ನು ಶೇರ್ ಮಾಡುವುದಕ್ಕೆ ಆಗಲ್ಲ. ಹಾಗಂತ, ಗಂಡನ ಜೊತೆಗೂ ಪ್ರತಿಯೊಂದು ಶೇರ್ ಮಾಡವುದಕ್ಕೆ ಆಗಲ್ಲ…
ವೈಷ್ಣವಿ: ನನ್ನ ಜೀವನದಲ್ಲಿ ಸ್ನೇಹಿತರು ತುಂಬ ಕಡಿಮೆ. ನಾನು ಜಾಸ್ತಿ ಯಾರೊಂದಿಗೆ ಮಾತನಾಡುವುದಿಲ್ಲ.
ದಿವ್ಯಾ: ಯಾಕೆ ಆ ಥರ..? ಯಾರ್ ಜೊತೆಗೂ ಯಾಕೆ ಜಾಸ್ತಿ ಮಾತನಾಡಲ್ಲ..
ವೈಷ್ಣವಿ: ನಾನು ಒಬ್ಬರನ್ನು ತುಂಬ ನಂಬ್ತೀನಿ. ನನಗೆ ದೊಡ್ಡ ಗ್ಯಾಂಗ್ ಇರಲ್ಲ. 2-3 ಜನ ಅಷ್ಟೇ ನನ್ನ ಫ್ರೆಂಡ್ಸ್.
ದಿವ್ಯಾ ಮತ್ತು ವೈಷ್ಣವಿ ನಡುವೆ ಈ ಮಾತುಕತೆ ಆದ ಬಳಿಕ ಲಿವಿಂಗ್ ಏರಿಯಾದಲ್ಲಿ ಶುಭಾ, ರಘು, ಅರವಿಂದ್ ಎಲ್ಲರೂ ಇದ್ದರು. ಅಲ್ಲಿಗೆ ಬಂದ ವೈಷ್ಣವಿ, ಏನೋ ಹೇಳುವುದಕ್ಕೆ ಹೋಗಿ, 'ಜೀವನವು ಹಾಗೇ ಅಲ್ವಾ...' ಅಂತ ಶುರು ಮಾಡಿದರು. ಆಗ ಎಲ್ಲರೋ 'ಹೋ...' ಎಂದು ಕಿರುಚಿದರು.
ಬಿಗ್ ಬಾಸ್ನಿಂದ ಹೊರಗಡೆ ಬಂದ್ಮೇಲೆ 1 ವಾರ ಸಂದರ್ಶನ ಕೊಡಲ್ಲ, ನನ್ನನ್ನು ಬಿಟ್ಟುಬಿಡಿ: ಶುಭಾ ಪೂಂಜಾ!
ಶುಭಾ: ನಂಗೆ ಅನ್ನಿಸುತ್ತೆ, ನಿನ್ನ (ವೈಷ್ಣವಿ) ಗಂಡ ಎರಡನೇ ವಾರಕ್ಕೆ ಮನೆ ಬಿಟ್ಟು ಹೊರಗೆ ಹೋಗಿಬಿಡ್ತಾನೆ ಅಂತ.. ಜೀವನ ಶೂನ್ಯ ಶೂನ್ಯ ಅಂದ್ಕೊಂಡು...
ವೈಷ್ಣವಿ: ಜೀವನಪೂರ್ತಿ ನನ್ನ ಜೊತೆಗೇ ಇರ್ತಾನೆ. ಮುಂದಿನ ಜನ್ಮದಲ್ಲೂ ನಿನ್ನ ಜೊತೆಗೇ ಇರ್ತಿನಿ ಅಂತ ಬರ್ತಾನೆ..
ಶುಭಾ: ಅದು ನಿನ್ನ ಭ್ರಮೆ!!
ರಘು: ಈ ಜನ್ಮಕ್ಕೆ ಬೇಡ ಮುಂದಿನ ಜನ್ಮದಲ್ಲಿ ಬರ್ತಿನಿ ಅಂತ ಹೇಳಿ ಹೋಗ್ತಾನೆ...
ಮದುವೆ ವಿಚಾರ ಬಂದಾಗ ನನ್ನನ್ನು ಪ್ರೀತಿಸುವವರು ಹೊರಗಡೆ ಇದ್ದಾರೆ ಎಂದ ಪ್ರಿಯಾಂಕಾ ತಿಮ್ಮೇಶ್!