ಆ್ಯಪ್ನಗರ

ಕಳೆದ ಬಿಗ್‌ಬಾಸ್‌ ಸೀಸನ್‌ ಕಿಚ್ಚನಿಗೆ ಎಂಜಾಯ್ ಮಾಡುವಂತಿರಲಿಲ್ಲ; ಸುದ್ದಿಗೋಷ್ಠಿಯಲ್ಲಿ ಕಾರಣ ಬಿಚ್ಚಿಟ್ಟ ಸುದೀಪ್

ಅಕ್ಟೋಬರ್ 13ರಿಂದ ಬಿಗ್‌ಬಾಸ್ ಪ್ರಾರಂಭವಾಗುತ್ತಿದೆ. ಈ ನಿಮಿತ್ತ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್‌ಬಾಸ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Vijaya Karnataka Web 10 Oct 2019, 8:32 pm
"ಬಿಗ್‌ಬಾಸ್ ಬಗ್ಗೆ ಜನರಿಗೆ ಇರುವಷ್ಟೇ ಕುತೂಹಲ ನನಗೂ ಇದೆ. ನನಗೆ ಇದರ ಹಿಂದೆ, ಮುಂದೆ ಈಗ ಗೊತ್ತಿಲ್ಲ, ನಾನೂ ಪ್ರಶ್ನೆಯನ್ನೂ ಮಾಡೋದಿಲ್ಲ. ಸ್ಪರ್ಧಿಗಳ ಹೆಸರು ಕೂಡ ನಾನು ವಾಹಿನಿಯವರ ಬಳಿ ಮೊದಲೇ ಕೇಳಿ ತಿಳಿಯುವುದಿಲ್ಲ. ಶೂಟಿಂಗ್ ದಿನವೇ ನನಗೆ ಸ್ಪರ್ಧಿಗಳ ಬಗ್ಗೆ ಗೊತ್ತಾಗುತ್ತದೆ. ಒಮದುವೇಳೆ ಲೀಕ್ ಆದರೆ ಆಮೇಲೆ ನಾನೇ ಯಾರಿಗೋ ಹೇಳಿದೆ ಅಂತ ಆಗಬಾರದು. ನನಗೆ ಗೊತ್ತಾಗದೆ ಬಿಗ್‌ಬಾಸ್‌ ಪಯಣದಲ್ಲಿ 7 ವರ್ಷ ಕಳೆದಿದೆ. ಬಿಗ್‌ಬಾಸ್‌ನಲ್ಲಿ ಕೊನೆಯವರೆಗೆ ನೆನಪಿನಲ್ಲಿ ಉಳಿಯೋದು ಆ ಜರ್ನಿಯಷ್ಟೇ" ಎಂದು ಹೇಳಿದ್ದಾರೆ.
Vijaya Karnataka Web sudeep ambareesh


ಬಿಗ್‌ಬಾಸ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಸುದೀಪ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅವು ಇಲ್ಲಿವೆ.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸುದೀಪ್ ಮಾತು, ಜೋಕ್, ಡ್ರೆಸ್, ಬಿಹೇವಿಯರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬಿಗ್‌ಬಾಸ್‌ ಸುದೀಪ್‌ರಿಂದಾನೇ ನಡೆಯುತ್ತಿದೆ ಎನ್ನುವ ಸಾಕಷ್ಟು ಕಾಮೆಂಟ್ ಬಂದಿದೆ, ನಿಮ್ಮ ಪ್ರತಿಕ್ರಿಯೆ ಏನು?
ಬಿಗ್‌ಬಾಸ್‌ ನನ್ನಿಂದಾನೇ ನಡೆಯುತ್ತೆ ಎಂದಿದ್ರೆ ನಾನು ಪೇಮೆಂಟ್ ಜಾಸ್ತಿ ತೆಗೆದುಕೊಳ್ಳುತ್ತಿದ್ದೆ, ಹ್ಹ ಹ್ಹ ಹ್ಹ. ಒತ್ತಡ ಮತ್ತು ಜವಾಬ್ದಾರಿ ಇಲ್ಲದಿರುವ ಕೆಲಸಕ್ಕೆ ಬೆಲೆ ಇರುವುದಿಲ್ಲ. ಇದರಲ್ಲಿ ಒತ್ತಡ ಬರಲ್ಲ. ಇಷ್ಟ ಪಟ್ಟು ಮಾಡುವ ಕೆಲಸ ನಮಗೆ ಒತ್ತಡ ಎನಿಸುವುದಿಲ್ಲ. ಸಿನಿಮಾದಲ್ಲಿ ಆರು ತಿಂಗಳು ಇದೇ ರೀತಿ ಕಾಸ್ಟ್ಯೂಮ್‌ ಹಾಕಬೇಕು ಎಂದಿರತ್ತೆ. ಕೆಲವೊಮ್ಮೆ ಮುಜುಗರ ಕೂಡ ಆಗತ್ತೆ. ನಾನು ಮನೆಯಿಂದ ಹೊರಡುವಾಗಲೂ ನಾನು ಅಷ್ಟೊಂದು ರೆಡಿಯಾಗೋದಿಲ್ಲ. ಆಗ ನನಗೆ ಕಂಡ ಡ್ರೆಸ್ ಹಾಕಿಕೊಂಡು ಬರ್ತೀನಿ. ಈ ಬಿಗ್‌ಬಾಸ್ ಜಾಗದಲ್ಲಿ ಮಾತ್ರ ನನಗೆ ಇಷ್ಟ ಬಂದ ಕಾಸ್ಟ್ಯೂಮ್ ಹಾಕಿಕೊಳ್ಳಬಹುದು. ಅದು ಖುಷಿ ನೀಡುವ ಸಂಗತಿ.

ಮೊಟ್ಟ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಬಿಗ್‌ಬಾಸ್' ನೋಡೋ ಅವಕಾಶ!! 'ಬಿಗ್‌ಬಾಸ್' ನೀಡಿದ ಬಿಗ್ ಬ್ರೇಕಿಂಗ್ ನ್ಯೂಸ್‌ ಏನು?

ಕಳೆದ ಸೀಸನ್‌ನಲ್ಲಿ ನೀವು ತುಂಬ ಸಣ್ಣಗೆ ಕಾಣಿಸ್ತಿದ್ದೀರಿ, ಅಭಿಮಾನಿಗಳು ನೋಡಿ ಬೇಸರ ಪಟ್ಟಿದ್ರು
ಹೌದು, 'ಪೈಲ್ವಾನ್‌'ನಲ್ಲಿ ಬಾಡಿ ಬಿಲ್ಡ್‌ ಮಾಡಬೇಕಾಗಿತ್ತು. ಇದಕ್ಕೂ ಮೊದಲು ನಾವು ತೂಕವನ್ನು ಕಳೆದುಕೊಳ್ಳಬೇಕಾಗಿತ್ತು. ಮೊದಲು ತುಂಬ ಚೆನ್ನಾಗಿ ಎಲ್ಲರೂ ತಿನ್ನಿಸುತ್ತಿದ್ದರು, ನಾನೂ ಚೆನ್ನಾಗಿ ತಿಂತಿದ್ದೆ. ಎಕ್ಸ್ಟ್ರಾ ವೇಟ್ ಹೋಗಬೇಕು ಅಂದಾಗ ಸಣ್ಣ ಆಗಲೇಬೇಕಿತ್ತು. ವಿಲನ್‌ ಸಿನಿಮಾಕ್ಕಾಗಿ ಕೂದಲು ಕಟ್ ಮಾಡಿ, ಬೇರೆ ಹೇರ್‌ಸ್ಟೈಲ್ ಮಾಡಬೇಕಿತ್ತು. ಕೆಲವೊಮ್ಮೆ ನಮ್ಮ ಫೇಸ್ ಚೆನ್ನಾಗಿಯೂ ಕಾಣಲ್ಲ, ಕೆಟ್ಟದಾಗಿಯೂ ಇರಲ್ಲ. ಯಾವ ನಿರ್ದೇಶಕರಿಗೂ ಆ ಫೇಸ್ ಇರಲ್ಲ. ನಾನು ಆ ರೀತಿ ಸಣ್ಣ ಆಗೋದಿಕ್ಕೆ ಕಾರಣ ಯಾರೂ ಊಟ ಹಾಕಿಲ್ಲ ಅಂತಲ್ಲ.

ಬಿಗ್‌ಬಾಸ್‌ಗೆ ಸುದೀಪ್ ಅವರೇ ಯಾಕೆ ನಿರೂಪಕರಾಗಬೇಕು ಎನ್ನೋದಿಕ್ಕೆ ಪರಮೇಶ್ವರ್ ಗುಂಡ್ಕಲ್ ನೀಡಿದ್ರು 7 ಕಾರಣ

ಈ ಬಾರಿ ಕಿಚ್ಚನ ಅಡುಗೆ ಇರತ್ತಾ?

ಅಡುಗೆ ನನಗೆ ಇಷ್ಟ. ಎಲ್ಲರೂ ನನ್ನ ಬಳಿ ರೆಸಿಪಿ ಬಗ್ಗೆ ಕೇಳೋದಿಕ್ಕೆ ಶುರು ಮಾಡಿದ್ರು, ಅಡುಗೆ ಮಾಡುತ್ತ ಹೋದ್ರೆ ಅದು ಬಿಗ್‌ಬಾಸ್ ಶೋ ಹೋಗಿ ಅಡುಗೆ ಶೋ ಆಗತ್ತೆ ಅಂತ ನಿಲ್ಲಿಸಿಬಿಟ್ರು. ಯಾವುದೋ ಹಂತದಲ್ಲಿ ಈ ಸೀಸನ್‌ನಲ್ಲಿ ಕುಕಿಂಗ್ ಎಪಿಸೋಡ್ ಇರತ್ತೆ.

ಬಿಗ್‌ಬಾಸ್‌ನಲ್ಲಿ ಕುಡಿಯೋಕೆ ಬಿಯರ್ ಕೊಡ್ತಾರಾ? ಈ ಪ್ರಶ್ನೆ ಕೇಳಿ ಸಿಟ್ಟಾದ ಕಿಚ್ಚ ಸುದೀಪ್ ಹೇಳಿದ್ದೇನು?

ಯಾವ ಸೀಸನ್‌ ತುಂಬ ಎಂಜಾಯ್ ಮಾಡಿದ್ರಿ?
ಹಲವು ಕಾರಣದಿಂದ ನನಗೆ ಕೊನೇ ಸೀಸನ್ ಖುಷಿ ಕೊಡಲಿಲ್ಲ. ಅದೊಂದೇ ನನಗೆ ಎಂಜಾಯ್ ಮಾಡೋಕೆ ಆಗಲಿಲ್ಲ. ಕೆಲವೊಮ್ಮೆ ಸುಸ್ತಾಗ್ತಿತ್ತು. ಶೋ ನಡೆಯುವಾಗ ಅಂಬರೀಶ್ ಮಾಮ ತೀರಿಕೊಂಡ್ರು. ಕಂಟೆಂಟ್ ಕೂಡ ಹೌದು. ನಿಧನದ ನೋವು ಇದ್ದ ಸಂದರ್ಭದಲ್ಲಿ ಬಿಗ್‌ಬಾಸ್ ಶೂಟಿಂಗ್‌ನಲ್ಲಿ ಭಾಗವಹಿಸಿದಾಗ ಮನಸಿಗೆ ಕಸಿವಿಸಿ ಆಗಿತ್ತು.

ಸಂಚಲನ ಮೂಡಿಸಿತು ಬಿಗ್‌ಬಾಸ್‌ನಲ್ಲಿ ಸುದೀಪ್ ಪಡೆಯುವ ಸಂಭಾವನೆ ! ಹಾಗಿದ್ರೆ ಎಷ್ಟು ರೂಪಾಯಿ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ