ಆ್ಯಪ್ನಗರ

Sujatha Elimination: ಬಿಗ್ ಬಾಸ್ ಮನೆಯ ಅನ್ನಪೂರ್ಣೇಶ್ವರಿ ಸುಜಾತಾ ಹೇಳಿದ್ದೇನು?

ಸಾರ್ ನಿಮ್ಮ ಜೊತೆ ಸಿನಿಮಾದಲ್ಲಿ ನಟಿಸಬೇಕು ಎಂದಿದೆ. ಯಾವುದಾದರೂ ಪಾತ್ರ ಇದ್ದರೆ ಹೇಳಿ ಸಾರ್ ಎಂದಿದ್ದಕ್ಕೆ, ಸುದೀಪ್ ಮಾತನಾಡುತ್ತಾ ಅಡುಗೆ ಮಾಡುವುದು, ಸೇಬು ಕದಿಯುವವರನ್ನು ಹಿಡಿಯುವ ಪಾತ್ರಗಳಿವೆ ಎಂದು ತಮಾಷೆ ಮಾಡಿದರು.

Vijaya Karnataka Web 24 Nov 2019, 10:47 pm
ಬಿಗ್ ಬಾಸ್ ಕನ್ನಡ 7ನೇ ಸೀಸನ್‌ನಲ್ಲಿ ಮತ್ತೊಂದು ವಿಕೆಟ್ ಪತನವಾಗಿದೆ. ಎಲ್ಲರೂ ಊಹಿಸಿದಂತೆಯೇ ಈ ವಾರ ಸುಜಾತಾ ಅಕ್ಷಯ್ ಒಟ್ಟು 42 ದಿನಗಳ ತಮ್ಮ ಪಯಣ ಮುಗಿಸಿದ್ದಾರೆ. ಈ ವಾರ ಒಟ್ಟು ಐದು ಮಂದಿ ನಾಮಿನೇಟ್ ಆಗಿದ್ದರು. ಕುರಿ ಪ್ರತಾಪ್, ದೀಪಿಕಾ ದಾಸ್, ಕಿಶನ್, ಚಂದನ್ ಆಚಾರ್ ಹಾಗೂ ಸುಜಾತಾ.
Vijaya Karnataka Web ಸುಜಾತಾ


"ನನಗೆ ಮುಖವಾಡ ಹಾಕ್ಕೊಂಡು ಬದುಕೋದು ಇಷ್ಟವಿಲ್ಲ, ಕಿರುಚೋದೆ. ನಾನು ಇರೋದೆ ಹೀಗೆ" ಎಂದು ಬಿಗ್ ಬಾಸ್ ಮನೆಯಲ್ಲಿ ಮಾತಿನ ಪಟಾಕಿ ತರಹ ಇದ್ದ ಸುಜಾತಾ ನಗುನಗುತ್ತಲೇ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯ ಅನ್ನಪೂರ್ಣೇಶ್ವರಿ ಎನ್ನಿಸಿಕೊಂಡಿದ್ದರು.

ಈ ವಾರ ಮನೆಯಿಂದ ಹೊರಹೋಗುವ ಕಂಟೆಸ್ಟೆಂಟ್ ಯಾರಿರಬಹುದು ಎಂದು ಸುದೀಪ್ ಕೇಳಿದ ಪ್ರಶ್ನೆಗೆ ಮನೆಯ ಬಹುತೇಕ ಸದಸ್ಯರು ಸುಜಾತಾ ಅವರ ಹೆಸರು ಪ್ರಸ್ತಾಪಿಸಿದರು. ಕೊನೆಗೆ ಸುಜಾತಾ ಅವರು ಎಲಿಮಿನೇಟ್ ಆಗಿರುವ ಸಂಗತಿಯನ್ನು ಸುದೀಪ್ ಘೋಷಿಸುತ್ತಿದ್ದಂತೆ ಖುಷಿಯಿಂದಲೇ ಮನೆಯಿಂದ ಹೊರಬಂದಿದ್ದಾರೆ.

ಮನೆಯಿಂದ ಹೊರಬರಬೇಕಾದರೆ ಅವರು ನೇರವಾಗಿ ನಾಮಿನೇಟ್ ಮಾಡಿದ ಸ್ಪರ್ಧಿ ರಾಜು ತಾಳಿಕೋಟಿ. ಅಲ್ಲಿಂದ ಹೊರಬಂದ ಬಳಿಕ ಸುದೀಪ್ ಜೊತೆಗೆ ಮಾತನಾಡಿರುವ ಸುಜಾತಾ, "ಬಿಗ್ ಬಾಸ್ ಮನೆಯ ನನ್ನ ಜರ್ನಿ ನೋಡುತ್ತಿದ್ದರೆ ಖುಷಿಯಾಗುತ್ತಿದೆ. ಆದರೆ ನಾನು ಅಲ್ಲಿಂದ ಹೊರಬರಲೇಬೇಕಾಗಿತ್ತು. ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಈಗ ತುಂಬಾ ಸಂತಸವಾಗುತ್ತಿದೆ" ಎಂದಿದ್ದಾರೆ.

ಎಂದೂ ಮರೆಯದ ಹಾಡು ಹಾಗೂ ಬೆಳದಿಂಗಳಲ್ಲಿ ಕೈತುತ್ತು ಊಟ, ಕಳ್ಳ ಪೊಲೀಸ್ ಟಾಸ್ಕ್ ನನಗೆ ಖುಷಿ ನೀಡಿತು. ಇಲ್ಲಿಂದ ಹೋದ ಬಳಿಕ ಬಿಗ್ ಬಾಸ್ ಬಗ್ಗೆ ಬುಕ್ ಬರೆಯಬೇಕು ಎಂದಿದ್ದೇನೆ ಎಂದಿದ್ದಾರೆ. ಶೈನ್ ಶೆಟ್ಟಿ ಬಿಗ್ ಬಾಸ್ ಟೈಟಲ್ ಗೆಲ್ತಾರೆ ಎಂದಿದ್ದಾರೆ. ಅದೇ ರೀತಿ ಬಿಗ್ ಬಾಸ್ ಟೈಟಲನ್ನು ಕಿಶನ್‍ಗೆ ಸಿಗಲ್ಲ ಎಂದೂ ಹೇಳಿದ್ದಾರೆ.

ಸಾರ್ ನಿಮ್ಮ ಜೊತೆ ಸಿನಿಮಾದಲ್ಲಿ ನಟಿಸಬೇಕು ಎಂದಿದೆ. ಯಾವುದಾದರೂ ಪಾತ್ರ ಇದ್ದರೆ ಹೇಳಿ ಸಾರ್ ಎಂದಿದ್ದಕ್ಕೆ, ಸುದೀಪ್ ಮಾತನಾಡುತ್ತಾ ಅಡುಗೆ ಮಾಡುವುದು, ಸೇಬು ಕದಿಯುವವರನ್ನು ಹಿಡಿಯುವ ಪಾತ್ರಗಳಿವೆ ಎಂದು ತಮಾಷೆ ಮಾಡಿದರು.

ರಾಜು ತಾಳಿಕೋಟೆ ಅವರ ಜೋಕ್ಸ್ ಮಿಸ್ ಮಾಡಿಕೊಳ್ತೇನೆ ಎಂದಿದ್ದಾರೆ ಸುಜಾತಾ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನವೂ ಸುಜಾತಾ ಅವರು ಹೆಚ್ಚು ಸಲುಗೆಯಿಂದ ಇರುತ್ತಿದ್ದದ್ದು ಜೈ ಜಗದೀಶ್ ಹಾಗೂ ರಾಜು ತಾಳಿಕೊಟೆ ಜೊತೆಗೆ. ಈಗ ಮನೆಯಲ್ಲಿ ರಾಜು ತಾಳಿಕೋಟೆ ಒಬ್ಬರೇ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ