ಆ್ಯಪ್ನಗರ

Jai Jagadish Elimination: ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿದ ಜೈ ಜಗದೀಶ್

ಬಿಗ್ ಬಾಸ್ ಮನೆಯಿಂದ ಹೊರಬಂದ ಜೈ ಜಗದೀಶ್ ಮಾತನಾಡುತ್ತಾ, "ಇದು ನನ್ನ ಪಾಲಿಗೆ ಗ್ರೇಟ್ ಎಕ್ಸ್‌ಪೀರಿಯನ್ಸ್. ಈ ರೀತಿಯ ಅನುಭವ ಎಲ್ಲರಿಗೂ ಆಗಬೇಕು. ನಿಮ್ಮಲ್ಲಿ ಖಂಡಿತ ದೊಡ್ಡ ಬದಲಾವಣೆ ಬರುತ್ತದೆ" ಎಂದಿದ್ದಾರೆ.

Vijaya Karnataka Web 18 Nov 2019, 12:10 pm

ಈ ವಾರ ಬಿಗ್ ಬಾಸ್ ಮನೆಯಲ್ಲಿ ಅತ್ಯಧಿಕ ಮಂದಿ ನಾಮಿನೇಶ್ ಆಗಿದ್ದರು. ಒಟ್ಟು ಹನ್ನೊಂದು ಮಂದಿ ನಾಮಿನೇಟ್ ಆಗಿದ್ದು, ಶನಿವಾರ ಆರು ಮಂದಿ ಸೇಫ್ ಆಗಿದ್ದರೆ ಭಾನುವಾರ "ಸೂಪರ್ ಸಂಡೇ ವಿತ್ ಸುದೀಪ" ಕಾರ್ಯಕ್ರಮದಲ್ಲಿ ಒಬ್ಬರು ಮನೆಯಿಂದ ಹೊರಬಂದಿದ್ದಾರೆ.
Vijaya Karnataka Web ಜೈ ಜಗದೀಶ್


ಒಟ್ಟು 35 ದಿನಗಳ ಕಾಲದ ತನ್ನ ಜರ್ನಿಯನ್ನು ಮುಗಿಸಿದ್ದಾರೆ ಜೈ ಜಗದೀಶ್. ಬಿಗ್ ಬಾಸ್ ಮನೆಯಲ್ಲಿದ್ದ ಅತ್ಯಂತ ಹಿರಿಯ ಸ್ಪರ್ಧಿ ಎಂದರೆ ಜೈ ಜಗದೀಶ್. ಇದ್ದದ್ದನ್ನು ಇದ್ದಂಗೆ ಹೇಳುವ, ಕೋಪ ಬಂದರೆ ತಕ್ಷಣ ವ್ಯಕ್ತಪಡಿಸುವ ಅವರ ವ್ಯಕ್ತಿತ್ವ ಮನೆಯ ಸದಸ್ಯರಿಗೆ ಸ್ಪಲ್ಪ ಕಿರಿಕಿರಿ ತಂದಿತ್ತು.

ಜೈ ಜಗದೀಶ್ ಮೊದಲನೇ ಪತ್ನಿ, ಮಗಳು ಯಾರು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿದ್ದಾಗ ಅತ್ಯಂತ ಸಲುಗೆಯಿಂದ ರಾಜು ತಾಳಿಕೋಟೆ ಹಾಗೂ ಸುಜಾತಾ ಅವರೊಂದಿಗೆ ಬೆರೆಯುತ್ತಿದ್ದರು ಜೈ ಜಗದೀಶ್. ಬಿಗ್ ಬಾಸ್ ವೇದಿಕೆಗೆ ಅವರನ್ನು ಕರೆತರಲು ಅವರ ಮೊದಲನೇ ಹೆಂಡತಿ ಪುತ್ರಿ ಅರ್ಪಿತಾ ಹಾಗೂ ಎರಡನೇ ಪತ್ನಿ ವಿಜಯ ಲಕ್ಷ್ಮಿ ಸಿಂಗ್ ಸೇರಿದಂತೆ ಇನ್ನೊಬ್ಬ ಪುತ್ರಿಯೂ ಬಂದಿದ್ದರು.

ಈ ವಾರ ಬಿಗ್ ಬಾಸ್ ಎಲಿಮಿನೇಷನ್ ಜೊತೆಗೆ ಜೊತೆಗೆ ಕೇಕ್ ಸಹ ಕಳುಹಿಸಿದ್ದರು. ಅದನ್ನು ಬಹುಶಃ ಬಿಗ್ ಬಾಸ್ ಕಳುಹಿಸಿದ್ದರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕಾರ್ಯಕ್ರಮದ ಕೊನೆಗೆ ಕೇಕ್ ತಯಾರಿಸಿದ್ದು ಸ್ವತಃ ನಾನೇ ಎಂದು ಸುದೀಪ್ ಹೇಳಿದಾಗ ಮನೆಯ ಮಂದಿಯ ಸಂತಸಕ್ಕೆ ಪಾರವೇ ಇರಲಿಲ್ಲ.

ಜೈ ಜಗದೀಶ್ ಕುರಿತು ಮೊದಲ ಪತ್ನಿಯ ಮಗಳು ಏನು ಹೇಳಿದ್ದಾರೆ ಗೊತ್ತಾ?

ಬಿಗ್ ಬಾಸ್ ಮನೆಯಿಂದ ಹೊರಬಂದ ಜೈ ಜಗದೀಶ್ ಮಾತನಾಡುತ್ತಾ, "ಇದು ನನ್ನ ಪಾಲಿಗೆ ಗ್ರೇಟ್ ಎಕ್ಸ್‌ಪೀರಿಯನ್ಸ್. ಈ ರೀತಿಯ ಅನುಭವ ಎಲ್ಲರಿಗೂ ಆಗಬೇಕು. ಬಿಗ್ ಬಾಸ್ ನಿಮ್ಮಲ್ಲಿ ಖಂಡಿತ ದೊಡ್ಡ ಬದಲಾವಣೆ ಬರುತ್ತದೆ" ಎಂದಿದ್ದಾರೆ. "ನನ್ನಷ್ಟು ವಯಸ್ಸಾದವರು ಯಾರೂ ಮನೆಯಲ್ಲಿರಲಿಲ್ಲ. ಅವರು ಜೋರಾಗಿ ಮಾತನಾಡುತ್ತಿದ್ದಾಗ ವಯಸ್ಸಿನಲ್ಲಿ ಚಿಕ್ಕವರು ನನಗೆ ಈ ರೀತಿ ಮಾತಾಡ್ತೀರಾ ಎಂದು ಕೋಪಿಸಿಕೊಳ್ಳುತ್ತಿದ್ದೆ" ಎಂದಿದ್ದಾರೆ.

ಮನೆಯಲ್ಲಿದ್ದಾಗ ಆಗಾಗ ಇಲ್ಲಿಂದ ಹೋದರೆ ಸಾಕು ಎಂದು ಬೇಸರಿಸಿಕೊಳ್ಳುತ್ತಿದ್ದರು ಜೈ ಜಗದೀಶ್. ಈ ವಾರ ಅವರಿಗೆ ಬಿಗ್ ಬಾಸ್ ಮನೆಯಿಂದ ರಿಲೀಫ್ ಸಿಕ್ಕಿದೆ. ನಗುನಗುತ್ತಲೇ ಮನೆಯಿಂದ ಹೊರಬಂದಿದ್ದಾರೆ ಜೈ ಜಗದೀಶ್.

ಕ್ಷಮೆ ಕೋರುವ ಟಾಸ್ಕ್‌ನಲ್ಲಿ ಜೈ ಜಗದೀಶ್ ತಮ್ಮ ಮೊದಲ ಪತ್ನಿ ರೂಪಾ ಬಗ್ಗೆ ಹಾಗೂ ಈ ದಂಪತಿಗಳ ಪ್ರೀತಿಯ ಫಲ ಅರ್ಪಿತಾರಿಗೆ ಕ್ಷಮೆ ಕೋರುತ್ತಾ ಕಣ್ಣೀರಿಟ್ಟಿದ್ದರು. ಬಳಿಕ ಈ ದಂಪತಿಗಳು ಭಿನ್ನಾಭಿಪ್ರಾಯಗಳ ಕಾರಣ ದೂರ ಸರಿದಿದ್ದರು. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅಂತಾರಲ್ಲಾ ಹಾಗೆ ನಾವು ಮಾಡಿದ ತಪ್ಪಿಗೆ ನಮ್ಮ ಮಗಳು ಯಾಕೆ ಶಿಕ್ಷೆ ಅನುಭಿಸಬೇಕು ಎಂದು ನೆನೆದು ಕಣ್ಣೀರಿಟ್ಟಿದ್ದರು ಜೈ ಜಗದೀಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ