ಆ್ಯಪ್ನಗರ

ಸತತ ಮೂರು ವಾರಗಳಿಂದ ಸುದೀಪ್ ಚಪ್ಪಾಳೆ ಯಾರಿಗೆ ಗೊತ್ತಾ?

ಈ ಸಲ ಆರು ಮಂದಿ ನಾಮಿನೇಟ್ ಆಗಿದ್ದು "ವಾರದ ಕಥೆ ಕಿಚ್ಚನ ಜೊತೆ"ಯಲ್ಲಿ ಮೂರು ಮಂದಿ ಸೇಫ್ ಆಗಿದ್ದಾರೆ. ಉಳಿದ ಮೂರು ಮಂದಿ ಭವಿಷ್ಯ ಭಾನುವಾರದ ಪಂಚಾಯಿತಿಯಲ್ಲಿ ಗೊತ್ತಾಗಲಿದೆ. ಸೇಫ್ ಆದವರು ಶೈನ್ ಶೆಟ್ಟಿ, ಚಂದನ್ ಆಚಾರ್ ಹಾಗೂ ಕಿಶನ್.

Vijaya Karnataka Web 1 Dec 2019, 12:44 pm
ಬಿಗ್ ಬಾಸ್ ಕನ್ನಡ ಸೀಸನ್ 7 ಅರ್ಧ ಶತಕ ಬಾರಿಸಿದೆ. ಅಂದರೆ 50 ದಿನ ಪೂರೈಸಿದೆ. ಈ ಬಗ್ಗೆ ಸುದೀಪ್ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಅದೇ ರೀತಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಇಬ್ಬರು ಅತಿಥಿಗಳನ್ನೂ ಸ್ವಾಗತಿಸಿದರು.
Vijaya Karnataka Web ಬಿಗ್ ಬಾಸ್ ಕನ್ನಡ


ರಕ್ಷಾ ಅವರೇ ಸ್ವಿಮ್ಮಿಂಗ್ ಫೂಲ್‌ಗೆ ನೀವು ಧುಮುಕಿ ಅಂದ ತಕ್ಷಣ ಧುಮುಕಿದ್ದು ನೋಡಿದರೆ ನೀವು ಬಿಗ್ ಬಾಸ್‌ನ ಎಪಿಸೋಡ್‌ಗಳನ್ನು ನೋಡಿಯೇ ಇಲ್ಲ ಅನ್ನಿಸುತ್ತದೆ ಎಂದಾಗ. ಹೌದು ಸಾರ್, ಸೋಷಿಯಲ್ ಮೀಡಿಯಾದಲ್ಲಿ ಚೂರುಪಾರು ನೋಡಿದ್ದೀನಿ ಎಂದರು.

ಬಳಿಕ ಬಿಗ್ ಬಾಸ್ ಮನೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಚೈತ್ರಾ ಕೋಟೂರ್ ಅವರನ್ನು ಮಾತನಾಡುತ್ತಾ, ಚೈತ್ರಾ ಅವರೇ ನೀವು ಒಂದೂ ಎಪಿಸೋಡ್ ಬಿಡದೆ ನೋಡ್ಕೊಂಡು ಬಂದಿದ್ದೀರಿ ಅಂತ ನಮಗೆ ಗೊತ್ತು ಎಂದರು. ಬಳಿಕ ನಿಮ್ಮ ಡ್ರೆಸ್ ಸಹ ತುಂಬಾ ಚಿಕ್ಕದಾಗಿದೆ. ಈಗ ತುಂಬಾ ಹಗುರ ಅನ್ನಿಸುತ್ತದೆ ಅಲ್ಲವೇ ಎಂದು ಮಾತಿನಲ್ಲೇ ಕೆಣಕಿದರು.

ಈ ಸಲ ಆರು ಮಂದಿ ನಾಮಿನೇಟ್ ಆಗಿದ್ದು "ವಾರದ ಕಥೆ ಕಿಚ್ಚನ ಜೊತೆ"ಯಲ್ಲಿ ಮೂರು ಮಂದಿ ಸೇಫ್ ಆಗಿದ್ದಾರೆ. ಉಳಿದ ಮೂರು ಮಂದಿ ಭವಿಷ್ಯ ಭಾನುವಾರದ ಪಂಚಾಯಿತಿಯಲ್ಲಿ ಗೊತ್ತಾಗಲಿದೆ. ಸೇಫ್ ಆದವರು ಶೈನ್ ಶೆಟ್ಟಿ, ಚಂದನ್ ಆಚಾರ್ ಹಾಗೂ ಕಿಶನ್.

ಭಾನುವಾರದ ತನಕ ಉಳಿದವರು ಭೂಮಿ ಶೆಟ್ಟಿ, ರಾಜು ತಾಳಿಕೋಟೆ ಹಾಗೂ ಪೃಥ್ವಿ. ಈ ಮೂವರಲ್ಲಿ ಒಬ್ಬರು ಮನೆಯಿಂದ ಹೊರಬೀಳಲಿದ್ದಾರೆ. ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್‍ ಈ ವಾರ ಹೆಚ್ಚು ಎಂಟರ್‌ಟೇನ್‍ಮೆಂಟ್ ನೀಡಿರುವ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದರು.

ಸತತವಾಗಿ ಕಿಚ್ಚನ ಚಪ್ಪಾಳೆ ಶೈನ್ ಶೆಟ್ಟಿಗೆ ಸಿಗುತ್ತಿದೆ. ಈ ವಾರ ಟಾಸ್ಕ್‌ಗಳು ಅಷ್ಟು ಚೆನ್ನಾಗಿ ಇರಲಿಲ್ಲ ಆದರೂ ಶೈನ್ ಶೆಟ್ಟಿ ಸಮಯ ಸಿಕ್ಕಾಗಲೆಲ್ಲಾ ರಂಜಿಸಿದ್ದಾರೆ ಎಂದು ಹೇಳಿ ಈ ವಾರವೂ ಚಪ್ಪಾಳೆ ನೀಡಿದರು.

"ಆರವಂ ನಿರ್ಜಿತ ಕಂಠೀರವಂ..." ಎಂಬ ಸುದೀಪ್ ನೀಡಿರುವ ಟಾಸ್ಕ್‌ನಲ್ಲಿ ಕುರಿ ಪ್ರತಾಪ್ ಈ ವಾರವೂ ಸಫಲವಾಗಲಿಲ್ಲ. ಮುಂದಿನ ವಾರಕ್ಕೆ ಅವರ ಟಾಸ್ಕ್ ಮುಂದುವರೆದಿದೆ.

ಚೈತ್ರಾ ಕೋಟೂರ್ ಅವರಿಗೆ ಲೈಟ್ ಆಗಿ ಸುದೀಪ್ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆಯಿತು. ಈ ಮಿಸ್ಟೇಕ್ ಮತ್ತೆ ಮಾಡ ಬೇಡಿ ಚೈತ್ರಾ ಕೋಟೂರ್. ನೀವು ಮಾತನಾಡುವಾಗ ಅವರು ಸುಮ್ಮನೆ ಕುಳಿತಿರುತ್ತಾರೆ, ಆದರೆ ನೀವು ಆ ರೀತಿ ಇಲ್ಲ. ನಿಮಗೆ ತಾಳ್ಮೆ ಇಲ್ಲ. ಭಗವಂತ ನಿಮಗೆ ಆ ತಾಳ್ಮೆ ಕೊಡಲಿ ಅಂತ ನಾನು ಈವತ್ತಿನಿಂದ ಪ್ರಾರ್ಥನೆ ಮಾಡ್ತೀನಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ