ಆ್ಯಪ್ನಗರ

ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಸೇಫ್? ಇನ್ಯಾರು ಔಟ್?

ಈ ವಾರ ಏಳು ಮಂದಿ ನಾಮಿನೇಟ್ ಆಗಿದ್ದು ಕುರಿ ಪ್ರತಾಪ್, ಕಿಶನ್, ಚಂದನಾ ಹಾಗೂ ದೀಪಿಕಾ ದಾಸ್ ಸೇಫ್ ಆಗಿದ್ದಾರೆ. ಅಲ್ಲಿಗೆ ವಾರದ ಕಥೆ ಕಿಚ್ಚನ್ ಜೊತೆ ಮುಗಿದಿದೆ. ಇನ್ನು ಉಳಿದ ಸ್ಪರ್ಧಿಗಳು ಎಂದರೆ ಹರೀಶ್ ರಾಜ್, ಚಂದನ್ ಆಚಾರ್ ಹಾಗೂ ಚೈತ್ರಾ ಕೋಟೂರ್. ಇವರ ಭವಿಷ್ಯ ಭಾನುವಾರ ರಾತ್ರಿ ನಿರ್ಧಾರವಾಗಲಿದೆ.

Vijaya Karnataka Web 21 Dec 2019, 11:45 pm
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಯಾರನ್ನು ಮೀಟ್ ಆಗಕ್ಕೆ ಇಷ್ಟ ಆಗಲ್ಲ ಎಂದು ಸುದೀಪ್ ಈ ವಾರದ ಕಥೆ ಕಿಚ್ಚನ್ ಜೊತೆಯಲ್ಲಿ ಚಂದನ್ ಆಚಾರ್ ಅವರನ್ನು ಕೇಳಿದಾಗ. ಅವರು ಪ್ರಸ್ತಾಪಿಸಿದ ಹೆಸರು ದೀಪಿಕಾ ದಾಸ್. ಅವರ ಡಾಮಿನೇಟ್ ಕ್ಯಾರೆಕ್ಟರ್ ನನಗೆ ಇಷ್ಟ ಆಗಲ್ಲ ಎಂದಿದ್ದಾರೆ.
Vijaya Karnataka Web ಬಿಗ್ ಬಾಸ್ ಕನ್ನಡ 7


ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಒಂದು ವೇಳೆ ನೀವು ಹೀರೋ ಆದರೆ ಬಿಗ್ ಬಾಸ್ ಮನೆಯ ಯಾರನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳುತ್ತೀರ ಎಂದು ಕಿಸಾನ್‌ರನ್ನು ಕೇಳಿದಾಗ ಪ್ರಿಯಾಂಕಾ ಎಂದರು. ವಿಲನ್ ಆಗಿ ಶೈನ್ ಶೆಟ್ಟಿಯನ್ನು ಆಯ್ಕೆ ಮಾಡಿಕೊಳ್ಳುತ್ತೀನಿ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೇನರ್ ಆಗಿರುತ್ತದೆ ಎಂದು ಹೇಳಿದರು.

ಬಿಗ್ ಬಾಸ್ ಮನೆಯಲ್ಲಿ 67 ಕ್ಯಾಮೆರಾ ಇದ್ದರೆ 68ನೇ ಕ್ಯಾಮೆರಾ ನಾನು ಎಂದು ಹೇಳುವ ಮೂಲಕ ಈ ವಾರ ಹಲವರ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಸುದೀಪ್. ಮುಖ್ಯವಾಗಿ ಶೈನ್ ಶೆಟ್ಟಿ, ದೀಪಿಕಾ ದಾಸ್ ಹಾಗೂ ಕಿಶನ್ ಸೇರಿದಂತೆ ಕುರಿ, ಪ್ರಿಯಾಂಕಾ ಅವರನ್ನು ಎಚ್ಚರಿಸಿದರು. ನೀವು ನೀವಾಗಿರುವಂತೆ ಇರಿ ಎಂದು ಬುದ್ಧಿವಾದ ಹೇಳಿದರು. ಏನೇ ಜಗಳ, ಮನಸ್ತಾಪ ಇದ್ದರೂ ಅಲ್ಲೇ ಬಗೆಹರಿಸಿಕೊಳ್ಳಿ, ಮನಸ್ಸಿನಲ್ಲೇ ಅದನ್ನು ಮುಂದುವರೆಸಿಕೊಂಡು ಹೋಗುವುದು, ಮೇಲೆ ಇಲ್ಲ ಇದೆಲ್ಲಾ ಮುಗೀತು ಎನ್ನುವುದು, ಈ ರೀತಿಯ ಡಬಲ್ ಗೇಮ್ ಬೇಡ ಎಂದು ಹೇಳಿದ್ದಾರೆ.

ಈ ವಾರ ಏಳು ಮಂದಿ ನಾಮಿನೇಟ್ ಆಗಿದ್ದು ಕುರಿ ಪ್ರತಾಪ್, ಕಿಶನ್, ಚಂದನಾ ಹಾಗೂ ದೀಪಿಕಾ ದಾಸ್ ಸೇಫ್ ಆಗಿದ್ದಾರೆ. ಅಲ್ಲಿಗೆ ವಾರದ ಕಥೆ ಕಿಚ್ಚನ್ ಜೊತೆ ಮುಗಿದಿದೆ. ಇನ್ನು ಉಳಿದ ಸ್ಪರ್ಧಿಗಳು ಎಂದರೆ ಹರೀಶ್ ರಾಜ್, ಚಂದನ್ ಆಚಾರ್ ಹಾಗೂ ಚೈತ್ರಾ ಕೋಟೂರ್. ಇವರ ಭವಿಷ್ಯ ಭಾನುವಾರ ರಾತ್ರಿ ನಿರ್ಧಾರವಾಗಲಿದೆ.

ಈ ವಾರ ಕಿಚ್ಚನ ಚಪ್ಪಾಳೆ ವಾಸುಕಿ ವೈಭವ್ ಅವರಿಗೆ ಸಿಕ್ಕಿದೆ. ಕ್ಯಾಪ್ಟನ್ ಆಗಿದ್ದಾಗ ನಡೆದುಕೊಂಡ ರೀತಿ, ಸ್ಪರ್ಧಿಗಳಲ್ಲಿ ಉತ್ಸಾಹ ತುಂಬಿದ ರೀತಿ, ಹಾಡಿನಲ್ಲಿ ಜೋಡಿಗಳನ್ನು ಹೊಗಳಿದ ಮೋಡಿ ಎಲ್ಲವನ್ನೂ ನೋಡಿ ಅವರಿಗೆ ಈ ಚಪ್ಪಾಳೆ ಎಂದರು ಸುದೀಪ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ