ಆ್ಯಪ್ನಗರ

ಮೊದಲ ಬಾರಿಗೆ ಲವ್ವರ್ ಬಗ್ಗೆ ಬಾಯಿಬಿಟ್ಟ ಬಿಗ್ ಬಾಸ್ ಚಂದನ್ ಆಚಾರ್; ಯಾರು ಆ ಹುಡುಗಿ ?


Vijaya Karnataka Web 20 Jan 2020, 5:38 pm
'ಬಿಗ್ ಬಾಸ್ ಕನ್ನಡ ಸೀಸನ್ 7'ರಲ್ಲಿ 98 ದಿನ ಪೂರೈಸಿ ಚಂದನ್ ಆಚಾರ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. 14ನೇ ವಾರ ಡಬಲ್ ಎಲಿಮಿನೇಶನ್‌ನಲ್ಲಿ ಕಿಶನ್ ಮತ್ತು ಚಂದನ್ ಆಚಾರ್ ಬಿಗ್ ಮನೆಯಿಂದ ಹೊರಬಂದಿದ್ದಾರೆ. ನೇರವಾದ, ಖಾರವಾದ ಮಾತಿನಿಂದ ಚಂದನ್ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಕೋಪಕ್ಕೆ, ಬೇಸರಕ್ಕೆ ಕಾರಣವಾಗಿದ್ದರು. ಯಾವಾಗಲೂ ಏಕಾಂಗಿಯಾಗಿಯೇ ಇರುತ್ತಿದ್ದ ಚಂದನ್ ಅವರಿಗೆ 'ಬಿಗ್ ಬಾಸ್ ಮನೆಯ ಒಂಟಿ ಸಲಗ' ಎಂಬ ಖ್ಯಾತಿಯಿದೆ. ಚಂದನ್ ಆಚಾರ್‌ ಅವರನ್ನು ಹೊರಜಗತ್ತು ಇಷ್ಟಪಡುತ್ತಿದೆ. ಚಂದನ್ ಆಚಾರ್ ನಡವಳಿಕೆಯನ್ನು ಸಂಬಂಧಿಕರು, ಬಂಧುಮಿತ್ರರು ಇಷ್ಟಪಟ್ಟಿದ್ದಾರಂತೆ.
Vijaya Karnataka Web who is chandan achar lover in bigg boss kannada season 7
ಮೊದಲ ಬಾರಿಗೆ ಲವ್ವರ್ ಬಗ್ಗೆ ಬಾಯಿಬಿಟ್ಟ ಬಿಗ್ ಬಾಸ್ ಚಂದನ್ ಆಚಾರ್; ಯಾರು ಆ ಹುಡುಗಿ ?


ಚಂದನ್‌ಗೆ ಮದುವೆ ಯಾವಾಗ ಆಗ್ತೀರಾ ಎಂದು ಪ್ರಶ್ನಿಸಿದ ಸುದೀಪ್

ಚಂದನ್ ಮೇಕಪ್ ವಿಚಾರದ ಬಗ್ಗೆ ಮಾತನಾಡಿ ಟ್ರೋಲ್ ಆಗಿದ್ದರು. ಅಷ್ಟೇ ಅಲ್ಲದೆ ಸೇಬಿನ ವಿಚಾರಕ್ಕೆ ಚೈತ್ರಾ ಕೋಟೂರ್ ಜೊತೆ, ಪ್ರೈವೇಟ್ ಪಾರ್ಟ್ ಬಗ್ಗೆ ಮಾತನಾಡಿ ವಾಸುಕಿ ವೈಭವ್ ಜೊತೆ, ಅಡುಗೆ ವಿಚಾರಕ್ಕೆ ದೀಪಿಕಾ ಜೊತೆ ಜಗಳ ಆಡಿದ್ದರು ಚಂದನ್ ಆಚಾರ್.

ಚಂದನ್ ಆಚಾರ್ ಅವರು 'ಸೂಪರ್ ಸಂಡೇ ವಿಥ್ ಸುದೀಪ' ಕಾರ್ಯಕ್ರಮದಲ್ಲಿ ಲವ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಮದುವೆಯಾಗುತ್ತೀರಾ ನೀವು? ಎಂದು ಸುದೀಪ್ ಅವರು ಚಂದನ್‌ರನ್ನು ಪ್ರಶ್ನಿಸಿದ್ದಾರೆ. ಚಂದನ್ ಅವರು ಆಗ ಸದ್ಯಕ್ಕಿಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು "ಸದ್ಯಕ್ಕೆ ಬೇಕಾಗಿಲ್ಲ" ಎಂದಿದ್ದಾರೆ. "ಕಷ್ಟ ಇದೆ, ಎಲ್ಲ ಒಬ್ಬರೇ ಮಾಡೋದು ಇವರು, ಸಂಸಾರ ಕೂಡ ಒಬ್ಬರೇ ಮಾಡ್ತಾರೆ. ಏನೂ ಮಾಡೋದಿಲ್ಲ, ಈತನಿಗೆ ನಾಳೆ ಮದುವೆ ಮಾಡಿದ್ರೆ..ಕಷ್ಟ ಇದೆ. ಚಂದನ್ ಒಮ್ಮೆ ಗುರಾಯಿಸಿದರೆ ಆ ಹುಡುಗಿ ಓಡಿ ಹೋಗುತ್ತಾಳೆ" ಎಂದಿದ್ದಾರೆ ಸುದೀಪ್.

ಶೃಂಗಾರ ರಸದ ಬಗ್ಗೆ ಈಗ ಗಮನ ಬೇಡ ಎಂದ ಚಂದನ್ ಆಚಾರ್

"ಯಾವಾಗಲೂ ಒಂಟಿಯಾಗಿರುವ ನೀವು ಮದುವೆ ಆದರೆ ಹೇಗೆ ಕಥೆ ?" ಎಂದು ಸುದೀಪ್ ಕೇಳಿದಾಗ, ಚಂದನ್ ಅವರು "ಲವ್ ಮಾಡಿದ್ದೆ, ಆದರೆ ನಾನು ಲವ್ ಮಾಡಿದಾಗ ಬ್ರೇಕಪ್ ಮಾಡಿದ್ದು ತಾಯಿ" ಎಂದಿದ್ದಾರೆ. ಪ್ರೀತಿಯನ್ನು ಸೀರಿಯಸ್ ಆಗಿ ಲವ್ ಮಾಡಿದ್ದರಂತೆ, ಪ್ರೇಮ ನಿವೇದನೆ ಮಾಡಿದ್ದೆ, ಕಲಾವಿದನಿಗೆ ಶೃಂಗಾರ ರಸ ಮುಖ್ಯ. ಆದರೆ ಈಗ ಶೃಂಗಾರ ರಸದ ಬಗ್ಗೆ ಈಗ ಗಮನ ಬೇಡ ಎಂದುಕೊಂಡಿದ್ದೇನೆ" ಎಂದಿದ್ದಾರೆ ಚಂದನ್ ಆಚಾರ್.

ಚಂದನ್ ಲವ್ ಬಗ್ಗೆ ಅವರ ತಾಯಿ ಹೇಳಿದ್ದೇನು?

"ಸಂಪಾದನೆ ಮಾಡಿ ಅವನ ಕಾಲಮೇಲೆ ನಿಂತುಕೊಂಡಾಗ ಆಯ್ಕೆ ಅವನಿಗೆ ಬಿಡುತ್ತೇವೆ, ಅವನಿಗೆ ಯಾವಾಗ ಆಸಕ್ತಿ ಬರತ್ತೋ ಆಗ ಮದುವೆಯಾಗಲಿ" ಎಂದಿದ್ದಾರೆ ಚಂದನ್ ತಾಯಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ