ಆ್ಯಪ್ನಗರ

ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲಿರುವ ಸ್ಪರ್ಧಿ ಇವರೇನಾ?

ಈ ವಾರ ಬಿಗ್ ಬಾಸ್ ಮನೆಯಿಂದ ಯಾರಿಗೆ ಗೇಟ್ ಪಾಸ್ ಸಿಗಲಿದೆ, ಇನ್ಯಾರು ಸೇಫ್ ಆಗಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದೇ ಬಿಟ್ಟಿದೆ. ಈ ಸಲ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಬಹುತೇಕ ಬಿಗ್ ಬಾಸ್ ಅಭಿಮಾನಿಗಳು ಸುಜಾತಾ ಅವರೇ ಈ ಸಲ ಮನೆಯಿಂದ ಹೊರಹೋಗಲಿದ್ದಾರೆ ಎನ್ನುತ್ತಿದ್ದಾರೆ.

Vijaya Karnataka Web 23 Nov 2019, 5:12 pm
ಆಗಲೇ ಇನ್ನೊಂದು ವಾರ ಕಳೆದಿದೆ. ನೋಡು ನೋಡುತ್ತಿದ್ದಂತೆ ಎಲಿಮಿನೇಷನ್ ಬಂದೇ ಬಿಡ್ತು. ಈ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಯಾರು ಸೇಫ್ ಇನ್ಯಾರು ಮನೆಗೆ ಹೋಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಈ ವಾರ ಐದು ಮಂದಿ ಸದಸ್ಯರು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ.
Vijaya Karnataka Web ಬಿಗ್ ಬಾಸ್ ಕನ್ನಡ


ವಾರದ ಆರಂಭದಲ್ಲಿ ಕುರಿ ಪ್ರತಾಪ್ ತಾನು ಸೇಫ್ ಎಂದುಕೊಂಡು ಮನೆಯಲ್ಲಿ ಓಡಾಡಿಕೊಂಡಿದ್ದರು. ಆದರೆ ಶೈನ್ ಶೆಟ್ಟಿಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಬಿಗ್ ಬಾಸ್ ನೀಡಿದ್ದರು. ಆಗ ಕುರಿ ಪ್ರತಾಪ್‌ರನ್ನು ನಾಮಿನೇಟ್ ಮಾಡಿದ್ದಾರೆ ಶೈನ್.

ಇದಕ್ಕೂ ಮುನ್ನ ಜೈ ಜಗದೀಶ್ ಅವರು ಕಳೆದ ವಾರ ಎಲಿಮಿನೇಟ್ ಆದಾಗ ಸುಜಾತಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಹೋಗಿದ್ದರು. ಇದಕ್ಕೆ ಅವರು ನೀಡಿದ ಕಾರಣ, ಬಹುಶಃ ಅವರ ಕಾಲಿಗೆ ಪೆಟ್ಟಾಗಿದೆ. ಹೆಚ್ಚು ದಿನ ಅವರು ಮನೆಯಲ್ಲಿರುವುದು ಕಷ್ಟ. ಹಾಗಾಗಿ ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತಿರುವುದಾಗಿ ಬಿಗ್ ಬಾಸ್‌ಗೆ ತಿಳಿಸಿದ್ದರು.

ಈ ಮಾತನ್ನು ಸುಜಾತಾ ಸಹ ಒಪ್ಪಿದ್ದರು. ಮನೆಯ ಸದಸ್ಯರ ಜೊತೆಗೆ ಮಾತನಾಡುತ್ತಾ, ಈ ಸಲ ಖಂಡಿತ ನಾನೇ ಎಲಿಮಿನೇಷನ್ ಆಗುತ್ತೇನೆ ಎಂದಿದ್ದರು. ಬಹುಶಃ ಅದು ನಿಜವಾಗಲೂ ಬಹುದು. ಯಾಕೆಂದರೆ ನಾಮಿನೇಟ್ ಆಗಿರುವ ಉಳಿದ ಸದಸ್ಯರೆಲ್ಲರೂ ಸ್ಟ್ರಾಂಗ್ ಆಗಿದ್ದಾರೆ.

Episode 40 Highlights: ವಾಸುಕಿ ಮೇಲೆ ಹಲ್ಲೆ, ಚಂದನ್ ಆಚಾರ್ ಜೈಲಿಗೆ

ಈ ವಾರ ನಾಮಿನೇಟ್ ಆಗಿರುವ ಐದು ಮಂದಿ ಹೆಸರುಗಳು ಇಂತಿವೆ, ಚಂದನ್ ಆಚಾರ್, ಕಿಶನ್, ಪ್ರತಾಪ್, ದೀಪಿಕಾ ದಾಸ್ ಹಾಗೂ ಸುಜಾತಾ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಪೋಲ್‌ನಲ್ಲೂ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಸುಜಾತಾ ಅವರಿಗೇ ಹೆಚ್ಚು ಮತಗಳು ಬೀಳುತ್ತಿವೆ.

ಬಿಗ್ ಬಾಸ್ ಮನೆಯೊಳಗೊಬ್ಬ 'ಕಿಸ್ಸಿಂಗ್ ಸ್ಟಾರ್'

ಹಾಗಾಗಿ ಈ ಸಲ ಸುಜಾತಾ ಅವರೇ ಮನೆಯಿಂದ ಹೊರಬೀಳುವ ಸ್ಪರ್ಧಿ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಅಂತಿಮವಾಗಿ ಬಿಗ್ ಬಾಸ್ ಮನೆಯಲ್ಲಿ ಏನು ಬೇಕಾದರೂ ಸಂಭವಿಸಬಹುದು. ಈ ಸಲ ನಾಮಿನೇಷನ್ನೇ ಇಲ್ಲ ಎನ್ನಬಹುದು. ಒಟ್ಟಿಗೆ ಇಬ್ಬರು ಸದಸ್ಯರನ್ನೂ ಮನೆಯಿಂದ ಕಳುಹಿಸಬಹುದು. ಖಚಿತ ಉತ್ತರ ಸಿಗಬೇಕಾದರೆ ಕಾಯಲೇಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ