ಆ್ಯಪ್ನಗರ

ಬಿಗ್‌ಬಾಸ್‌ಗೆ ಸುದೀಪ್ ಅವರೇ ಯಾಕೆ ನಿರೂಪಕರಾಗಬೇಕು ಎನ್ನೋದಿಕ್ಕೆ ಪರಮೇಶ್ವರ್ ಗುಂಡ್ಕಲ್ ನೀಡಿದ್ರು 7 ಕಾರಣ

'ಬಿಗ್‌ ಬಾಸ್‌' ಕನ್ನಡ ಸೀಸನ್‌ಗಳಲ್ಲಿ ಕಳೆದ ಆರೂ ಸೀಸನ್‌ಗಳನ್ನು ಸುದೀಪ್ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿ ಬಾರಿಯೂ ಬಿಗ್‌ಬಾಸ್‌ಗೆ ಸುದೀಪ್ ಹೋಸ್ಟ್ ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇದೆ. ಇದಕ್ಕೆ ಬಿಗ್‌ಬಾಸ್‌ ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್ ಗುಂಡ್ಕಲ್ ಉತ್ತರ ನೀಡಿದ್ದಾರೆ.

Vijaya Karnataka Web 10 Oct 2019, 7:26 pm
ಬಿಗ್‌ಬಾಸ್‌ ಶೋದಲ್ಲಿ ಎಲ್ಲವೂ ಬಿಗ್ ಇದೆ. ಈ ಶೋ ಆರಂಭವಾಗುವಾಗ ಎಷ್ಟು ನಿರೀಕ್ಷೆ, ಉತ್ಸಾಹ ಇರತ್ತೋ ಅಷ್ಟೇ ನರ್ವಸ್‌ನೆಸ್, ಟೆನ್ಶನ್ ವಾಹಿನಿಗೆ ಇರಲಿದೆ. ಈ ಬಿಗ್‌ಬಾಸ್‌ನಲ್ಲಿ ಯಾರಾದ್ರೂ ರಿಯಾಲಿಟಿಶೋದಲ್ಲಿ ಯಾರಾದ್ರೂ ಸೀನಿಯರ್ ಇದ್ದರೆ ಅದು ಸುದೀಪ್. ಏಳು ಸೀಸನ್‌ನಿಂದ ಅವರು ಈ ಶೋದಲ್ಲಿದ್ದಾರೆ, ಎರಡನೇ ಸೀನಿಯರ್ ನಾನು ಎನ್ನಬಹುದು. ಜನರಿಗೆ ಮನರಂಜನೆ ಕೊಡುವಲ್ಲಿ ಕಮ್ಮಿಯಾಗದೆ, ನಿರಂತರವಾಗಿರಬೇಕು ಎನ್ನೋದು ನಮ್ಮ ಆಶಯ.
Vijaya Karnataka Web parameshwar gundkal


ಸುದೀಪ್ ಅವರೇ ಬಿಗ್‌ಬಾಸ್‌ಗೆ ನಿರೂಪಕರಾಗಬೇಕು ಎನ್ನೋದಿಕ್ಕೆ ಪರಮೇಶ್ವರ್ ಗುಂಡ್ಕಲ್ ನೀಡಿದ ಕಾರಣಗಳು.
1. ಸೂಕ್ಷ್ಮ ಸಂವೇದನೆ
ಈ ಶೋ ನಡೆಸಿಕೊಡುವ ವ್ಯಕ್ತಿಗೆ ಸೂಕ್ಷ್ಮ ಸಂವೇದನೆ ಬೇಕೇ ಬೇಕು. ಈ ಗುಣ ಸುದೀಪ್ ಅವರಲ್ಲಿ ಬಹಳ ಧಾರಾಳವಾಗಿ ಇದೆ.

2. ಬುದ್ಧಿವಂತಿಕೆ (sensibility, sensitivity )
ಈ ಶೋ ನಡೆಸಿಕೊಡೋಕೆ ಬುದ್ಧಿವಂತಿಕೆ ಜೊತೆಗೆ sensibility, sensitivity ಎರಡನ್ನೂ ಸುದೀಪ್ ಎಂದಿಗೂ ಬಿಟ್ಟುಕೊಟ್ಟಿಲ್ಲ.

ಬಿಗ್‌ಬಾಸ್‌ನಲ್ಲಿ ಕುಡಿಯೋಕೆ ಬಿಯರ್ ಕೊಡ್ತಾರಾ? ಈ ಪ್ರಶ್ನೆ ಕೇಳಿ ಸಿಟ್ಟಾದ ಕಿಚ್ಚ ಸುದೀಪ್ ಹೇಳಿದ್ದೇನು?

3. ಸಹಜವಾಗಿ ಪ್ರತಿಕ್ರಿಯಿಸುವ ಜಾಣ್ಮೆ(spontaneity)
ಒಂದು ಶೋ ನಡೆಯುವಾಗ ಅಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ. ಸ್ಕ್ರಿಫ್ಟ್ ಮಾಡಿ ಈ ಶೋ ಮಾಡೋಕಾಗಲ್ಲ. ಕೇಳಿದ ಪ್ರಶ್ನೆಗೆ ಸ್ಥಳದಲ್ಲಿಯೇ ಉತ್ತರಿಸಿ, ಸಮಯ, ಘಟನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬೇಕು. ಯಾರೋ ಮಾತನಾಡುತ್ತಿರುತ್ತಾರೆ, ಲೈವ್ ನಡೆಯುತ್ತಿರುತ್ತದೆ. ಆ ಸಮಯದಲ್ಲಿ ಸುಮ್ಮನಿದ್ದರೆ ಆಗೋದಿಲ್ಲ.

'ಬಿಗ್‌ಬಾಸ್ ರಿಯಾಲಿಟಿ ಶೋ' ನಿಲ್ಲಿಸೋಕೆ ಸೂಚನೆ ನೀಡುತ್ತಾ ಕೇಂದ್ರ ಸರ್ಕಾರ?

4. ಅನುಭವಗಳ ಮೂಟೆ (towering personality)
ಸುದೀಪ್ ಆರಡಿ ಅಂತ ಒಂದು ಕಡೆಯಾದರೆ, ಇನ್ನೊಂದು ಕಡೆ ಅನುಭವ ಬೇಕಾಗುತ್ತದೆ. ಈ ಗುಣ ಸುದೀಪ್‌ಗಿದೆ

5. ಶುದ್ಧ ಕನ್ನಡ ಬಳಸುವ ಗುಣ (language)
ಶುದ್ಧ ಕನ್ನಡ ಬಳಸಬಲ್ಲರು. ಭಾಷೆಯನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು, ಹೇಗೆ ಬಳಸಬಾರದು ಎಂಬುದು ಸುದೀಪ್‌ಗೆ ತಿಳಿದಿದೆ. ಭಾಷೆಯ ಬಳಕೆ ಖಾರವೂ ಆಗಬಾರದು, ಸ್ವೀಟ್ ಕೂಡ ಆಗಬಾರದು. ಎಲ್ಲಿ ಖಾರ ಆಗಬೇಕೋ ಭಾಷೆ ಖಾರ ಆಗಬೇಕು, ಸ್ವೀಟ್‌ ಆಗುವಲ್ಲಿ ಸ್ವೀಟ್ ಆಗಬೇಕು.

ಮೊಟ್ಟ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಬಿಗ್‌ಬಾಸ್' ನೋಡೋ ಅವಕಾಶ!! 'ಬಿಗ್‌ಬಾಸ್' ನೀಡಿದ ಬಿಗ್ ಬ್ರೇಕಿಂಗ್ ನ್ಯೂಸ್‌ ಏನು?

6. ಅಪಾರ ಜನಪ್ರಿಯತೆ ಮತ್ತು ಜೀವನಾನುಭವ (popularity)
ಈ ಶೋದಿಂದ ಯಾರಿಗೆ ಏನಾಯ್ತು ಅನ್ನೋದಕ್ಕಿಂತ ಕಲಾವಿದನಾಗಿ ಅವರು ಈ 20 ವರ್ಷಗಳಲ್ಲಿ ಬಹಳ ಸಾಧನೆ ಮಾಡಿದ್ದಾರೆ. ಅವರು ಈ ಶೋ ನಡೆಸಿಕೊಡೋದರಿಂದ ಈ ಶೋದ ಘನತೆ ಹೆಚ್ಚಾಗಿದೆ.

'ಬಿಗ್‌ಬಾಸ್‌' ಮನೆಗೆ ಎಂಟ್ರಿ ನೀಡಲಿದ್ದಾರೆ ಕಿರುತೆರೆಯ ಈ ಖ್ಯಾತ ಲೇಡಿ ವಿಲನ್?!!

7. ಎಲ್ಲ ಕ್ಷೇತ್ರದಿಂದ ಬಂದ ಸ್ಪರ್ಧಿಗಳ ಜತೆ ಮಾತನಾಡುವ ಸಾಮರ್ಥ್ಯ ಹೊಂದಿದ ವ್ಯಕ್ತಿ
ಸಂಗೀತ, ನಟ, ನಟಿ, ನಿರ್ಮಾಪಕ, ಕ್ರೀಡೆ ಮುಂತಾದ ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿರುತ್ತಾರೆ. ರಾಜಕೀಯ ಕ್ಷೇತ್ರದ ಬಗ್ಗೆ ನಾನು ಹೇಳೋದಿಲ್ಲ. ಈ ರಂಗದಿಂದ ಬಂದವರಲ್ಲಿ ಯಾರು ಏನೇ ಹೇಳಿದರೂ ಕೂಡ ಮಾತನಾಡುವ ವ್ಯಕ್ತಿ ಇದ್ದರೆ ಅದು ಕಿಚ್ಚ ಸುದೀಪ್ ಅಂತ ಹೇಳುತ್ತೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ