ಆ್ಯಪ್ನಗರ

ಕಲರ್ಸ್‌ ಸೂಪರ್‌ನಲ್ಲಿ ಫಸ್ಟ್‌ ಬರೋಕೆ ಸೆಕೆಂಡ್‌ ಚಾನ್ಸ್‌

ಎರಡು ಸೀಸನ್‌ಗಳ ಯಶಸ್ವಿ ಪ್ರಯಾಣದ ನಂತರ ಕನ್ನಡ ಕೋಗಿಲೆ ಈಗ ಹೊಸ ಅವತಾರದಲ್ಲಿಬರಲು ಸಜ್ಜಾಗಿದ್ದು, ಇದೇ ಶನಿವಾರದಿಂದ ಪ್ರಸಾರ ಆರಂಭಿಸಲಿದೆ ಎಂದು ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬಿಸ್ನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ತಿಳಿಸಿದ್ದಾರೆ.

Vijaya Karnataka 30 Aug 2019, 12:01 pm
ಹರೀಶ್‌ ಬಸವರಾಜ್‌
Vijaya Karnataka Web colors super


ಎರಡು ಸೀಸನ್‌ಗಳ ಯಶಸ್ವಿ ಪ್ರಯಾಣದ ನಂತರ ಕನ್ನಡ ಕೋಗಿಲೆ ಈಗ ಹೊಸ ಅವತಾರದಲ್ಲಿಬರಲು ಸಜ್ಜಾಗಿದ್ದು, ಇದೇ ಶನಿವಾರದಿಂದ ಪ್ರಸಾರ ಆರಂಭಿಸಲಿದೆ ಎಂದು ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬಿಸ್ನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ತಿಳಿಸಿದ್ದಾರೆ.

'ಎರಡು ಸೀಸನ್‌ ಮುಗಿಸಿದ ನಂತರ ನಾವು ಇದೇ ಆಗಸ್ಟ್‌ 31ರಿಂದ ಕನ್ನಡ ಕೋಗಿಲೆ ಸೂಪರ್‌ ಸೀಸನ್‌ ಎಂಬ ಹೆಸರಿನಲ್ಲಿಈ ಹೊಸ ಶೋ ಆರಂಭಿಸುತ್ತಿದ್ದೇವೆ. ಈ ಶೋ ವಿಶೇಷ ಏನೆಂದರೆ ಇದರಲ್ಲಿಭಾಗವಹಿಸುವ ಪ್ರತಿಯೊಬ್ಬರೂ ಬೇರೆ ಬೇರೆ ಹಾಡಿನ ರಿಯಾಲಿಟಿ ಶೋಗಳಲ್ಲಿಭಾಗವಹಿಸಿ ರನ್ನರ್‌ ಅಪ್‌ ಪ್ರಶಸ್ತಿಗಳನ್ನು ಪಡೆದು, ಕೂದಲೆಳೆಯ ಅಂತರದಲ್ಲಿವಿಜಯದಿಂದ ವಂಚಿತರಾಗಿರುತ್ತಾರೆ. ಇಂತಹವರನ್ನು ರಾಜ್ಯದ ನಾನಾ ಭಾಗಗಳಿಂದ ಆರಿಸಲಾಗಿದ್ದು, ಒಟ್ಟು 14 ಹಾಡುಗಾರರಿಗೆ ಪ್ರಶಸ್ತಿ ಗೆಲ್ಲಲು ಸೂಪರ್‌ ಸೀಸನ್‌ ಮೂಲಕ ನಾವು ಅವಕಾಶ ನೀಡುತ್ತಿದ್ದೇವೆ' ಎನ್ನುತ್ತ್ತಾರæ ಅವರು.

'ಕನ್ನಡ ಕೋಗಿಲೆ ಮೊದಲನೇ ಸೀಸನ್‌ನ ಫೈನಲಿಸ್ಟ್‌ಗಳಾದ ಪುತ್ತೂರಿನ ಅಖಿಲಾ ಪಜಿಮಣ್ಣು ಮತ್ತು ರಾಯಚೂರಿನ ಕರಿಬಸವ ಹಾಗೂ ಎರಡನೇ ಸೀಸನ್‌ನ ರನ್ನರ್ಸ್ ಅಪ್‌ಗಳಾದ ಶಿವಮೊಗ್ಗದ ಪಾರ್ಥ ಚಿರಂತನ್‌ ಮತ್ತು ಬೆಂಗಳೂರಿನ ನೀತೂ ಸುಬ್ರಹ್ಮಣ್ಯಂ ಮತ್ತು ಇದೇ ರೀತಿ ರೀತಿ ಬೇರೆ ಬೇರೆ ಶೋಗಳಲ್ಲಿಕೊನೆ ಕ್ಷಣದಲ್ಲಿಪ್ರಶಸ್ತಿ ಪಡೆಯಲು ಸಾಧ್ಯವಾಗದೆ ಇದ್ದ ಬೆಂಗಳೂರಿನ ಮನೋಜವಂ ಆತ್ರೇಯ, ಮಂಡ್ಯದ ಪುರುಷೋತ್ತಮ, ಬೆಂಗಳೂರಿನ ಸ್ಪರ್ಶ ಆರ್‌.ಕೆ., ಬೆಳಗಾವಿಯ ನಿಹಾರಿಕಾ, ಮೈಸೂರಿನ ನಿತಿನ್‌ರಾಜಾರಾಂ ಶಾಸ್ತ್ರಿ, ಅಂಕೋಲಾದ ದರ್ಶಿನಿ ಶೆಟ್ಟಿ, ಕಲಬುರ್ಗಿಯ ಅನಂತರಾಜ್‌ಮಿಸ್ತ್ರಿ, ಸಿದ್ದಾಪುರದ ಅರುಂಧತಿ ವಸಿಷ್ಠ, ಮುಂಬಯಿಯ ಅದಿತಿ ಖಂಡೆಗಳ ಮತ್ತು ಮಂಗಳೂರಿನ ತನುಷ್‌ರಾಜ್‌ ಕೂಡ ಸೂಪರ್‌ ಸೀಸನ್‌ನಲ್ಲಿರಲಿದ್ದಾರೆ' ಎಂದು ಹೇಳುತ್ತಾರೆ ಪರಮೇಶ್ವರ ಗುಂಡ್ಕಲ್‌.

ಕನ್ನಡ ಕೋಗಿಲೆ ಸೂಪರ್‌ ಸೀಸನ್‌ನ ತೀರ್ಪುಗಾರರಾಗಿ ಸಾಧು ಕೋಕಿಲಾ, ಅರ್ಚನಾ ಉಡುಪ ಮತ್ತು ಚಂದನ್‌ ಶೆಟ್ಟಿಇರಲಿದ್ದಾರೆ. ಈ ಬಾರಿಯೂ ಸಿರಿಯ ನಿರೂಪಣೆ ಇರಲಿದ್ದು, ಅವರ ಜತೆ ಹಾಡಲು ಮತ್ತುಕುಣಿಯಲು ಅರ್ಜುನ್‌ ಇಟಗಿ ಸಹ ಇರಲಿದ್ದಾರೆ. ಆಗಸ್ಟ್‌ 31ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ಕನ್ನಡ ಕೋಗಿಲೆ ಸೂಪರ್‌ ಸೀಸನ್‌' ನಿಮ್ಮ ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿಪ್ರಸಾರವಾಗಲಿದೆ.

---
ಕನ್ನಡ ಕೋಗಿಲೆ ಎರಡು ಸೀಸನ್‌ಗಳ ಮೂಲಕ ಜನ ಮನ ಗೆದ್ದಿದೆ. ಈಗ ಹೊಸ ರೂಪದಲ್ಲಿಸೂಪರ್‌ ಸೀಸನ್‌ ಎಂಬ ಹೆಸರಿನಿಂದ ಕನ್ನಡದ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.
-ಪರಮೇಶ್ವರ ಗುಂಡ್ಕಲ್‌, ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬಿಸ್ನೆಸ್‌ ಹೆಡ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ