ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಮತ್ತೆ ವಸಂತ' ಧಾರಾವಾಹಿ ನಟಿ ಅಕ್ಷತಾ ದೇಶಪಾಂಡೆ ಅವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಟಿ ದೀಪಾ ಜಗದೀಶ್ ಅವರು ನಿಭಾಯಿಸುತ್ತಿದ್ದ ಪಾತ್ರಕ್ಕೆ ಅಕ್ಷತಾ ಬಂದಿದ್ದಾರೆ. ಹಾಗಾದರೆ 'ಮತ್ತೆ ವಸಂತ'ದಲ್ಲಿ ಅಕ್ಷತಾ ಕಾಣಿಸಿಕೊಳ್ಳುವುದಿಲ್ಲವೇ? ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಅಕ್ಷತಾ ದೇಶಪಾಂಡೆ, "ಮತ್ತೆ ವಸಂತ ಧಾರಾವಾಹಿ ಬಿಡುತ್ತಿದ್ದೀರಾ ಅಂತ ನನಗೆ ಸಾಕಷ್ಟು ಜನರು ಫೋನ್ ಕರೆ, ಮೆಸೇಜ್ ಮಾಡುತ್ತಿದ್ದಾರೆ. ನಾನು ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದಮಾತ್ರಕ್ಕೆ ನಾನು ಮತ್ತೆ ವಸಂತ ಧಾರಾವಾಹಿ ಬಿಡುತ್ತೀನಿ ಎಂದರ್ಥವಲ್ಲ. ನಾನು ಈ ಎರಡೂ ಪ್ರಾಜೆಕ್ಟ್ಗಳನ್ನು ನಿಭಾಯಿಸಿಕೊಂಡು ಹೋಗುವೆ" ಎಂದು ನಟಿ ಅಕ್ಷತಾ ದೇಶಪಾಂಡೆ ಹೇಳಿದ್ದಾರೆ.
"ಮತ್ತೆ ವಸಂತ ಧಾರಾವಾಹಿಯಲ್ಲಿ ಅಪರ್ಣಾ ನನಗೆ ಕೇವಲ ಪಾತ್ರವಲ್ಲ, ಬದಲಾಗಿ ಅದೊಂದು ಭಾವನಾತ್ಮಕತೆ. ಅಕ್ಷತಾಳಲ್ಲಿ ಅಪರ್ಣಾ ಜೀವಿಸುತ್ತಿದ್ದಾಳೆ. ಈ ರೀತಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ, ಅಪರ್ಣಾ ಪಾತ್ರವನ್ನು ಮೆಚ್ಚಿರುವಂತೆ ಅಂಜಲಿ ಪಾತ್ರಕ್ಕೂ ಪ್ರೀತಿ ಕೊಡಿ. ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ" ಎಂದು ನಟಿ ಅಕ್ಷತಾ ದೇಶಪಾಂಡೆ ಹೇಳಿದ್ದಾರೆ.
'ಕಾವ್ಯಾಂಜಲಿ' ಧಾರಾವಾಹಿಯಿಂದ ಹೊರನಡೆದ ನಟಿ ದೀಪಾ ಜಗದೀಶ್; ಮೂರು ಬಾರಿ ನಾಯಕಿ ಬದಲಾವಣೆ!
'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಮೂರನೇ ಬಾರಿ ನಾಯಕಿಯ ಆಯ್ಕೆಯಾಗಿದೆ. ಆರಂಭದಲ್ಲಿ ಸುಷ್ಮಿತಾ ಭಟ್, ದೀಪಾ ಜಗದೀಶ್ ಅವರು ಈ ಪಾತ್ರ ಮಾಡುತ್ತಿದ್ದರು. ಯಾವ ಕಾರಣಕ್ಕೆ ದೀಪಾ ಜಗದೀಶ್ ಅವರು ಧಾರಾವಾಹಿಯನ್ನು ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿಲ್ಲ. ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ 'ಕಾವ್ಯಾಂಜಲಿ' ಧಾರಾವಾಹಿಯು ಪ್ರಸಾರವಾಗುವುದು.
ಇಂಥ ಕಡು ಕಷ್ಟದ ನಡುವೆಯೂ 'ಮತ್ತೆ ವಸಂತ' ಧಾರಾವಾಹಿಯಿಂದ ನಟ ವಿವೇಕ್ ಸಿಂಹ ಹೊರ ಬಂದಿದ್ದೇಕೆ?
"ಮತ್ತೆ ವಸಂತ ಧಾರಾವಾಹಿಯಲ್ಲಿ ಅಪರ್ಣಾ ನನಗೆ ಕೇವಲ ಪಾತ್ರವಲ್ಲ, ಬದಲಾಗಿ ಅದೊಂದು ಭಾವನಾತ್ಮಕತೆ. ಅಕ್ಷತಾಳಲ್ಲಿ ಅಪರ್ಣಾ ಜೀವಿಸುತ್ತಿದ್ದಾಳೆ. ಈ ರೀತಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ, ಅಪರ್ಣಾ ಪಾತ್ರವನ್ನು ಮೆಚ್ಚಿರುವಂತೆ ಅಂಜಲಿ ಪಾತ್ರಕ್ಕೂ ಪ್ರೀತಿ ಕೊಡಿ. ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ" ಎಂದು ನಟಿ ಅಕ್ಷತಾ ದೇಶಪಾಂಡೆ ಹೇಳಿದ್ದಾರೆ.
'ಕಾವ್ಯಾಂಜಲಿ' ಧಾರಾವಾಹಿಯಿಂದ ಹೊರನಡೆದ ನಟಿ ದೀಪಾ ಜಗದೀಶ್; ಮೂರು ಬಾರಿ ನಾಯಕಿ ಬದಲಾವಣೆ!
'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಮೂರನೇ ಬಾರಿ ನಾಯಕಿಯ ಆಯ್ಕೆಯಾಗಿದೆ. ಆರಂಭದಲ್ಲಿ ಸುಷ್ಮಿತಾ ಭಟ್, ದೀಪಾ ಜಗದೀಶ್ ಅವರು ಈ ಪಾತ್ರ ಮಾಡುತ್ತಿದ್ದರು. ಯಾವ ಕಾರಣಕ್ಕೆ ದೀಪಾ ಜಗದೀಶ್ ಅವರು ಧಾರಾವಾಹಿಯನ್ನು ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿಲ್ಲ. ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ 'ಕಾವ್ಯಾಂಜಲಿ' ಧಾರಾವಾಹಿಯು ಪ್ರಸಾರವಾಗುವುದು.
ಇಂಥ ಕಡು ಕಷ್ಟದ ನಡುವೆಯೂ 'ಮತ್ತೆ ವಸಂತ' ಧಾರಾವಾಹಿಯಿಂದ ನಟ ವಿವೇಕ್ ಸಿಂಹ ಹೊರ ಬಂದಿದ್ದೇಕೆ?