ಆ್ಯಪ್ನಗರ

'ದೇವಿ ಪಾತ್ರಗಳನ್ನು ಮಾಡಲು ರಮ್ಯಾ ಕೃಷ್ಣ ಸ್ಪೂರ್ತಿ'- ಎಂದ 'ಅಮ್ನೋರು' ನಟಿ ಪ್ರಥಮಾ ಪ್ರಸಾದ್

ನಟಿ ಪ್ರಥಮಾ ಪ್ರಸಾದ್ ಕಿರುತೆರೆಯಲ್ಲಿ ದೇವಿ ಪಾತ್ರಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಈಚೆಗೆ ಅವರು ಸಂದರ್ಶನವೊಂದರಲ್ಲಿ ದೇವಿ ಪಾತ್ರಗಳನ್ನು ಮಾಡುವುದರ ಕುರಿತು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 28 Oct 2020, 12:13 pm
ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಈಚೆಗೆ ಧಾರಾವಾಹಿಗಳಲ್ಲಿ ಹೆಚ್ಚೆಚ್ಚು ದೇವಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ರೀತಿಯ ದೇವಿಯ ಪಾತ್ರಗಳಿಗೆ ಅವರು ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾರೆ. ಅಂದಹಾಗೆ, ದೇವರ ಪಾತ್ರಗಳನ್ನು ಮಾಡಲು ಅವರಿಗೆ ಬಹುಭಾಷಾ ನಟಿ ರಮ್ಯಾ ಕೃಷ್ಣ ಸ್ಪೂರ್ತಿಯಂತೆ. ಅದನ್ನು ಅವರೇ ಈಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
Vijaya Karnataka Web actress prathama prasad says i was inspired by ramya krishnan when it comes to portraying goddess role
'ದೇವಿ ಪಾತ್ರಗಳನ್ನು ಮಾಡಲು ರಮ್ಯಾ ಕೃಷ್ಣ ಸ್ಪೂರ್ತಿ'- ಎಂದ 'ಅಮ್ನೋರು' ನಟಿ ಪ್ರಥಮಾ ಪ್ರಸಾದ್


'ರಮ್ಯಾ ಕೃಷ್ಣ ಅವರು ನಿಭಾಯಿಸುತ್ತಿದ್ದ ದೇವಿ ಪಾತ್ರಗಳನ್ನು ನೋಡುತ್ತಲೇ ಬೆಳೆದವಳು ನಾನು. ಅಂತಹ ಪಾತ್ರಗಳನ್ನು ಮಾಡಬೇಕು ಎಂದಾಗ ನಾನು ರಮ್ಯಾ ಕೃಷ್ಣ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ವೃತ್ತಿ ಜೀವನದಲ್ಲಿ ನಾನು ದೇವಿಯ ಪಾತ್ರಗಳನ್ನು ಮಾಡುತ್ತಿರುವುದು ನನಗೆ ಸಿಕ್ಕಿರುವ ಆಶೀರ್ವಾದ. ಅಂತಹ ಪಾತ್ರಗಳನ್ನು ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ' ಎಂದಿದ್ದಾರೆ ಪ್ರಥಮಾ.

'ಶೂಟಿಂಗ್ ಸಮಯದಲ್ಲಿ ನಾನು ದೇವಿ ಗೆಟಪ್‌ನಲ್ಲಿರುವಾಗ ಅನೇಕ ಜನರು ನನ್ನ ಆಶೀರ್ವಾದ ಪಡೆಯಲು ಬಂದಿದ್ದನ್ನು ನಾನು ನೋಡಿದ್ದೇನೆ. ನನ್ನ ಪಾತ್ರಗಳನ್ನು ಅವರು ಗೌರವಿಸುತ್ತಾರೆ. ಓರ್ವ ಕಲಾವಿದೆಯಾಗಿ ಈ ರೀತಿಯ ಗೌರವಗಳು ನನಗೆ ಇನ್ನೂ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಲು ಉತ್ತೇಜನ ನೀಡಿದೆ. ಹೊಸ ಹೊಸ ಪಾತ್ರಗಳನ್ನು ನಿರ್ವಹಿಸಲು, ಆ ಪಾತ್ರಗಳಿಗೆ ನ್ಯಾಯ ಒದಗಿಸಲು ಇದರಿಂದ ಪ್ರೋತ್ಸಾಹ ಸಿಗುತ್ತದೆ' ಎಂದಿದ್ದಾರೆ ಪ್ರಥಮಾ ಪ್ರಸಾದ್.

ದೇವಿ ಪಾತ್ರದ ಮೂಲಕ ಕನ್ನಡಿಗರ ಮನ ಕದ್ದ ನಟಿಯರು ಇವರು!

ಇನ್ನು, ದೇವಿ ಪಾತ್ರ ಮಾಡವಾಗ ಸಾಕಷ್ಟು ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಾರಂತೆ. 'ದೇವಿ ಪಾತ್ರಗಳನ್ನು ನಿರ್ವಹಿಸುವಾಗ ನನ್ನ ಶಕ್ತಿಯ ಮಟ್ಟವನ್ನು ನಿಯಂತ್ರಿಸಲು ನಾನು ಪ್ರಯತ್ನಿಸುತ್ತೇನೆ. ಜೊತೆಗೆ ತುಂಬ ಧ್ಯಾನ ಮತ್ತು ದೇವಿ ಸ್ತೋತ್ರಗಳನ್ನು ಪಠಿಸುತ್ತೇನೆ. ನಿಜ ಜೀವನದಲ್ಲಿಯೂ ನಾನು ತುಂಬಾ ಆಧ್ಯಾತ್ಮಿಕ ವ್ಯಕ್ತಿ. ಆದ್ದರಿಂದ ನಾನು ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತೇನೆ ಮತ್ತು ಶೂಟಿಂಗ್ ಆರಂಭವಾಗುವುದಕ್ಕೂ ಮೊದಲು ಪ್ರಾರ್ಥನೆ ಸಲ್ಲಿಸುತ್ತೇನೆ. ದೇವಿ ಪಾತ್ರಗಳನ್ನು ಮಾಡುವಾಗ ತುಂಬ ಕಂಫರ್ಟಬಲ್ ಆಗಿರುತ್ತೇನೆ' ಎಂದು ಅವರು ಹೇಳಿದ್ದಾರೆ.

'ಬಾಹುಬಲಿ'ಯ ಶಿವಗಾಮಿ ರಮ್ಯಾ ಕೃಷ್ಣ ಈ ವಯಸ್ಸಲ್ಲೂ ಮಾಡ್ತಾರಾ ಇಂಥ ಗ್ಲಾಮರ್‌ ಪಾತ್ರ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ