ಆ್ಯಪ್ನಗರ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಂಜುಳಾಗೆ ನೆರವಾದ ಪ್ರಿಯಾಮಣಿ

ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಉಪೇಂದ್ರ ಅವರು ಕೋಮಲಳ ಕುಟುಂಬಕ್ಕಾಗಿ ದೋಸೆ, ಇಡ್ಲಿ, ಚಿತ್ರಾನ್ನ ಮಾರಿ 3 ಲಕ್ಷದ ರೂ.ವರೆಗೆ ಸಹಾಯ ಮಾಡಿದ್ದರು. ಅದರಲ್ಲಿ ಸ್ವತಃ ಉಪೇಂದ್ರ ಅವರೇ 1 ಲಕ್ಷ ರೂ.ಗಳನ್ನು ನೀಡಿದ್ದಾರೆ.

Vijaya Karnataka Web 29 Aug 2018, 3:24 pm
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಉಪೇಂದ್ರ ಅವರು ಕೋಮಲಳ ಕುಟುಂಬಕ್ಕಾಗಿ ದೋಸೆ, ಇಡ್ಲಿ,ಚಿತ್ರಾನ್ನ ಮಾರಿ 3 ಲಕ್ಷದ ರೂ.ವರೆಗೆ ಸಹಾಯ ಮಾಡಿದ್ದರು. ಅದರಲ್ಲಿ ಸ್ವತಃ ಉಪೇಂದ್ರ ಅವರೇ 1 ಲಕ್ಷ ರೂ.ಗಳನ್ನು ನೀಡಿದ್ದಾರೆ.
Vijaya Karnataka Web priyamani


ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪ್ರಿಯಾಮಣಿ ಭಾಗವಹಿಸ್ತಿದ್ದಾರೆ. ಇವರು ಮಂಜುಳಾ-ಸಿದ್ಧರಾಜು ಅವರಿಗೋಸ್ಕರ ಸಹಾಯ ಮಾಡಲು ಮುಂದಾಗಿದ್ದಾರೆ. ಮಂಜುಳಾ ಅವರಿಗೆ ಕಿಡ್ನಿ ಸಮಸ್ಯೆ ಇದೆ ಮತ್ತು ಮಗನಿಗೆ ಹೃದಯದಲ್ಲಿ ಸಮಸ್ಯೆ ಇದೆ. ದೋಬಿ ಕೆಲಸ ಮಾಡುತ್ತಿರುವ ಸಿದ್ಧರಾಜುಗೆ ಬರುವ ಹಣ ಕುಟುಂಬ ನಿರ್ವಹಿಸಲು ಸಾಕಾಗುತ್ತಿಲ್ಲ. ಚಿಕಿತ್ಸೆಗಾಗಿ ಸಾಕಷ್ಟು ಸಾಲವನ್ನು ಮಾಡಿರುತ್ತಾರೆ. ಇಂತಹ ಕುಟುಂಬಕ್ಕೆ ನೆರವಾಗಲು ಪ್ರಿಯಾಮಣಿ ಅಲಂಕಾರಿಕ ವಸ್ತುಗಳನ್ನು ಮಾರಿ ಆ ಕುಟುಂಬಕ್ಕೆ ಸಹಾಯ ಮಾಡಲಿದ್ದಾರೆ.


ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ಮುಂದೆ ತಳ್ಳುವ ಗಾಡಿಯಲ್ಲಿ ಪ್ರಿಯಾಮಣಿ ಬಳೆ, ರಿಂಗ್, ಹೇರ್ ಬ್ಯಾಂಡ್, ಕ್ಲಿಪ್‍ಗಳನ್ನು ಮಾರಿ ಗಳಿಸಿದ ಒಟ್ಟು ಹಣವೆಷ್ಟು? ಮಂಜುಳಾ ಮತ್ತು ಸಿದ್ದರಾಜು ಕುಟುಂಬಕ್ಕೆ ನೀಡಿದ ಹಣವೆಷ್ಟು? ಎಂಬುದನ್ನು ಈ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುವ ಸದಾ ನಿಮ್ಮೊಂದಿಗೆ ಸಂಚಿಕೆಯಲ್ಲಿ ನೋಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ