ಆ್ಯಪ್ನಗರ

'ಅರ್ಧಾಂಗಿ' ಧಾರಾವಾಹಿಗಾಗಿ ಕಿರುತೆರೆಗೆ ಬಂದ ಪ್ರಿಯಾಂಕಾ ಉಪೇಂದ್ರ; ಈ ಸೀರಿಯಲ್‌ ಬಗ್ಗೆ ಹೇಳಿದ್ದೇನು?

ಸ್ಯಾಂಡಲ್‌ವುಡ್‌ನಲ್ಲಿ 'ಪ್ರೀತಿಯ ರಾಯಭಾರಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಅಂಜನಾ ದೇಶಪಾಂಡೆ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿಗೆ 'ಅರ್ಧಾಂಗಿ' ಎಂದು ಹೆಸರು ಇಡಲಾಗಿದೆ. ನಟ ಪೃಥ್ವಿ ಶೆಟ್ಟಿ ಇಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ದಿಗಂತ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಈ ಧಾರಾವಾಹಿಯ ವಿಶೇಷವೆಂದರೆ, ಅರ್ಧಾಂಗಿಯಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಾದರೆ, ಅವರು ಧಾರಾವಾಹಿಯಲ್ಲಿ ನಟಿಸುತ್ತಾರಾ? ಅವರ ಪಾತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Authored byಅವಿನಾಶ್ ಜಿ. ರಾಮ್ | Vijaya Karnataka Web 18 May 2022, 8:47 pm

ಹೈಲೈಟ್ಸ್‌:

  • ಸ್ಟಾರ್‌ ಸುವರ್ಣದಲ್ಲಿ ಮೇ 23ರಿಂದ 'ಅರ್ಧಾಂಗಿ' ಪ್ರಸಾರ
  • ಅಂಜನಾ ದೇಶಪಾಂಡೆ & ಪೃಥ್ವಿ ನಟಿಸುತ್ತಿರುವ ಧಾರಾವಾಹಿ ಇದು
  • 'ಅರ್ಧಾಂಗಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಉಪೇಂದ್ರ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web actress priyanka upendra
ನಟಿ ಪ್ರಿಯಾಂಕಾ ಬದುಕಿನಲ್ಲಿ 50 ಸಿನಿಮಾಗಳಲ್ಲಿ ನಟಿಸಿ, ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕುಟುಂಬ ನಿರ್ವಹಣೆ ಜೊತೆಗೆ ಸಿನಿಮಾರಂಗದಲ್ಲೂ ಅವರು ಸದಾ ಸಕ್ರಿಯ. ಸದ್ಯ ಸಿನಿಮಾರಂಗದಲ್ಲೇ ಬ್ಯುಸಿ ಆಗಿರುವ ಅವರು, ಕಿರುತೆರೆಗೂ ಕಾಲಿಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರೇನೂ ಪೂರ್ಣ ಪ್ರಮಾಣದಲ್ಲಿ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ, 'ಅರ್ಧಾಂಗಿ' ಧಾರಾವಾಹಿಯ ರಾಯಭಾರಿ ಆಗಿ ಅವರು ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
'ಅರ್ಧಾಂಗಿ' ಧಾರಾವಾಹಿಯಲ್ಲಿ ಅಂಜನಾ ದೇಶಪಾಂಡೆ ಮತ್ತು ಪೃಥ್ವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, 'ಈ ಧಾರಾವಾಹಿಯಲ್ಲಿ ಕಥಾನಾಯಕಿಯ ಪಾತ್ರವು ತುಂಬ ಸವಾಲಿನಿಂದ ಕೂಡಿದೆ. ಅರ್ಧಾಂಗಿ ಆಗಿ ನಾವು ನಿಭಾಯಸುವ ಸವಾಲುಗಳಿಂಗಿತ ಇದು ಜಾಸ್ತಿ ಸವಾಲು ಇದೆ. ತುಂಬ ಜನಕ್ಕೆ ಈ ಪಾತ್ರದಿಂದ ಸ್ಫೂರ್ತಿ ಸಿಗಲಿದೆ. ‌ಕೋವಿಡ್ ನಂತರ ಟಿವಿ ಜಾಸ್ತಿ ಆಗಿದೆ. ನು ಕೂಡ ಇಂಥದ್ದೇ ಕಥೆಯಲ್ಲಿ ನಟಿಸಿದ್ದೇನೆ. ಬೆಂಗಾಲಿಯಲ್ಲಿ ಇಂಥದ್ದೇ ಒಂದು ಕಥೆಯ ಸಿನಿಮಾದಲ್ಲಿ ನಾನು ಇದೇ ಥರದ ಪಾತ್ರ ಮಾಡಿದ್ದೇನೆ. ಈ ಧಾರಾವಾಹಿ ತಂಡ ತುಂಬ ಎಫರ್ಟ್ ಹಾಕಿದ್ದಾರೆ. ನಾಯಕಿಯ ಪಾತ್ರದ ಜೊತೆಗೆ ಪೃಥ್ವಿ ಅವರು ನಿಭಾಯಿಸಿರುವ ಪಾತ್ರವು ಕೂಡ ಬಹಳ ಪರಿಣಾಕಾರಿಯಾಗಿದೆ. ಇಂಥ ಕಥೆಗಳಿಗೆ ಎಲ್ಲರೂ ಸಪೋರ್ಟ್ ಮಾಡಬೇಕು' ಎಂದು ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.

Priyanka: 50ನೇ ಸಿನಿಮಾದ ಹೊಸ್ತಿಲಲ್ಲಿ ಪ್ರಿಯಾಂಕಾ ಉಪೇಂದ್ರ: ಈ ನಟಿಯ ಇಮೇಜ್ ಬದಲಾಯಿಸಿದ 'ಮಮ್ಮಿ'
ಈ ಧಾರಾವಾಹಿಯ ಕಥೆ ಏನು?
ಧಾರಾವಾಹಿ ನಾಯಕಿ ಅದಿತಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿರುವ ಹುಡುಗಿ. ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡುತ್ತಿರುವ ಅದಿತಿಗೆ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾಳೆ. ಅದಿತಿ ತಂದೆ ಮತ್ತೊಂದು ಮದುವೆಯಾಗಿದ್ದರಿಂದ, ಮಲತಾಯಿ ಮತ್ತು ಅವರ ಮಕ್ಕಳನ್ನೇ ಸ್ವಂತ ತಾಯಿ, ತಂಗಿ, ತಮ್ಮ ಎಂದು ಭಾವಿಸಿರುತ್ತಾಳೆ. ಈ ಮಧ್ಯೆ ಅದಿತಿ ತಂಗಿಗೆ ಮದಯವೆ ನಿಶ್ಚಯವಾಗಿದೆ. ಇಷ್ಟಪಟ್ಟಿರುವ ಹುಡುಗನನ್ನು ಆಕೆ ಮದುವೆ ಆಗಬೇಕೆಂದರೆ, ಅಕ್ಕ ಅದಿತಿ ದೊಡ್ಡ ತ್ಯಾಗ ಮಾಡಬೇಕಿದೆ. ಅದೇನೆಂದರೆ, ದಿಗಂತ್‌ನನ್ನು ಅದಿತಿ ಮದುವೆ ಆಗಬೇಕಿದೆ. ದಿಗಂತ್‌ನ ವಯಸ್ಸು 28. ಆದರೆ ಅವನ ಮನಸ್ಸಿಗೆ ಬರೀ 8ರ ವಯಸ್ಸು. ಇಂಥವನೊಂದಿಗೆ ಅದಿತಿ ಮದುವೆ ಆಗಿದೆ. ಹಾಗಾದರೆ, ಮುಂದೇನು? ಅದೇ ಈ ಧಾರಾವಾಹಿಯ ಭಾವನಾತ್ಮಕ ಎಳೆ.

ಪ್ರಿಯಾಂಕಾ ಉಪೇಂದ್ರ ಸಿನಿಮಾದ ಹಾಡಿಗೆ ಧ್ವನಿಯಾದ 'ಟಿಣಿಂಗ ಮಿಣಿಂಗ ಟಿಶ್ಯಾ' ಗಾಯಕಿಯರು
ಈ ಧಾರಾವಾಹಿ ದೊಡ್ಡ ಹಿಟ್ ಆಗಬಹುದು ಎಂಬ ನಿರೀಕ್ಷೆ ತಂಡಕ್ಕೆ. ಇಮೇಜಸ್ ಬ್ಯಾನರ್‌ನಲ್ಲಿ ಶ್ರೀನಾಥ್ ರಘುರಾಮ್ 'ಅರ್ಧಾಂಗಿ' ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಂ. ಕುಮಾರ್‌ ಅವರು ಇದರ ನಿರ್ದೇಶನ ಮಾಡುತ್ತಿದ್ದಾರೆ. ದಿಗಂತ್ ಪಾತ್ರದಲ್ಲಿ ಪೃಥ್ವಿ ಶೆಟ್ಟಿ ಮತ್ತು ಅದಿತಿ ಪಾತ್ರದಲ್ಲಿ ಅಂಜನಾ ದೇಶಪಾಂಡೆ ನಟಿಸುತ್ತಿದ್ದಾರೆ. ಉಳಿದಂತೆ, ಮಂಡ್ಯ ರವಿ, ಪದ್ಮಿನಿ, ಪ್ರಕಾಶ್ ಮತ್ತು ನೀತು ಮುಂತಾದವರು 'ಅರ್ಧಾಂಗಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯು ಸ್ಟಾರ್‌ ಸುವರ್ಣದಲ್ಲಿ ಮೇ 23ರಿಂದ ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ