ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸೆಲ್ಲಾ ನೀನೆ' ಧಾರಾವಾಹಿಯಿಂದ ನಟಿ ರಶ್ಮಿ ಪ್ರಭಾಕರ್ ಹೊರಬಿದ್ದಿದ್ದಾರೆ. ಈ ಕುರಿತು ರಶ್ಮಿ ಪ್ರಭಾಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ರಶ್ಮಿ ಈ ನಿರ್ಧಾರಕ್ಕೆ ಬರಲು ಕಾರಣವೇನು?
ರಶ್ಮಿ ಪ್ರಭಾಕರ್ ಹೇಳಿದ್ದೇನು?
"ಮನಸ್ಸಿಗೆ ಭಾರವಾದರು, ನಿಮ್ಮೆಲ್ಲರ ಬಳಿ ಹೇಳಲೇ ಬೇಕಾದ ವಿಷಯ..'ಮನಸೆಲ್ಲ ನೀನೇ' ರಾಗಾಳಾಗಿ ನನ್ನ ಅಧ್ಯಾಯ ಕಾರಣಾಂತರಗಳಿಂದ ಮುಗಿದಿದೆ. ಹೊಸ ರಾಗ ನಿಮ್ಮೆಲ್ಲರ ಮುಂದೆ ಆದಷ್ಟು ಬೇಗ ಬರ್ತಾಳೆ. ನನ್ನ ಹೊಸ ಪಾತ್ರಕ್ಕೆ ಇಷ್ಟು ಪ್ರೀತಿ ಕೊಟ್ಟ ನಿಮಗೆ ಧನ್ಯೋಸ್ಮಿ" ಎಂದು ರಾಗಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ.
154 ಎಪಿಸೋಡ್ ಪ್ರಸಾರ
'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ರಶ್ಮಿ ಪ್ರಭಾಕರ್ ಅವರು ರಾಗಾ ಪಾತ್ರಕ್ಕೆ ಜೀವ ತುಂಬಿದ್ದರು. ರಾಗಾ ಪಾತ್ರ ಹಾಗೂ ಅವರ ಕಾಸ್ಟ್ಯೂಮ್ ಅನೇಕರಿಗೆ ಇಷ್ಟವಾಗಿತ್ತು. ಇನ್ನು ಅರುಣ್-ರಾಗಾ ಜೋಡಿ ಹಿಟ್ ಆಗಿತ್ತು. ಇಲ್ಲಿಯವರೆಹೆ 154 ಎಪಿಸೋಡ್ಗಳು ಪ್ರಸಾರವಾಗಿವೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಂತರದಲ್ಲಿ ರಶ್ಮಿ ಪ್ರಭಾಕರ್ ಕನ್ನಡದಲ್ಲಿ ಈ ಧಾರಾವಾಹಿ ಮಾಡಿದ್ದರು. ಈ ಹಿಂದಿನ ಧಾರಾವಾಹಿಗಿಂತ ರಶ್ಮಿ ಗೆಟಪ್ ಇಲ್ಲಿ ವಿಭಿನ್ನವಾಗಿತ್ತು. ಶ್ರುತಿ ನಾಯ್ಡು ನಿರ್ಮಾಣದ ಧಾರಾವಾಹಿಯಿದು. ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದರು. 'ಮನಸೆಲ್ಲಾ ನೀನೆ' ಎನ್ನುತ್ತಿದ್ದಾರೆ ನಟಿ ರಶ್ಮಿ ಪ್ರಭಾಕರ್ ಹಾಗೂ ಸುಜಿತ್ ಗೌಡ!
ಕೊರೊನಾದಿಂದ ಗೆದ್ದ ರಶ್ಮಿ ಪ್ರಭಾಕರ್
ತಿಂಗಳುಗಳ ಹಿಂದೆ ರಶ್ಮಿ ಪ್ರಭಾಕರ್ ಅವರಿಗೆ ಕೊರೊನಾ ವೈರಸ್ ಬಂದಿತ್ತು, ಅವರೀಗ ಆರೋಗ್ಯವಾಗಿದ್ದಾರೆ. ಪರಭಾಷೆಯ ಕಿರುತೆರೆಯಲ್ಲಿರೂ ರಶ್ಮಿ ಕಾಣಿಸಿಕೊಂಡಿದ್ದರು, ಒಟ್ಟಿನಲ್ಲಿ ಕಿರುತೆರೆ ಲೋಕದಲ್ಲಿ ಅವರು ಸಕ್ರಿಯರಾಗಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕರೆ ಸಿನಿಮಾದಲ್ಲಿ ನಟಿಸಲು ರಶ್ಮಿ ರೆಡಿಯಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಆಗಾಗ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು.
ರಶ್ಮಿ ಪ್ರಭಾಕರ್ ಹೇಳಿದ್ದೇನು?
"ಮನಸ್ಸಿಗೆ ಭಾರವಾದರು, ನಿಮ್ಮೆಲ್ಲರ ಬಳಿ ಹೇಳಲೇ ಬೇಕಾದ ವಿಷಯ..'ಮನಸೆಲ್ಲ ನೀನೇ' ರಾಗಾಳಾಗಿ ನನ್ನ ಅಧ್ಯಾಯ ಕಾರಣಾಂತರಗಳಿಂದ ಮುಗಿದಿದೆ. ಹೊಸ ರಾಗ ನಿಮ್ಮೆಲ್ಲರ ಮುಂದೆ ಆದಷ್ಟು ಬೇಗ ಬರ್ತಾಳೆ. ನನ್ನ ಹೊಸ ಪಾತ್ರಕ್ಕೆ ಇಷ್ಟು ಪ್ರೀತಿ ಕೊಟ್ಟ ನಿಮಗೆ ಧನ್ಯೋಸ್ಮಿ" ಎಂದು ರಾಗಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ.
154 ಎಪಿಸೋಡ್ ಪ್ರಸಾರ
'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ರಶ್ಮಿ ಪ್ರಭಾಕರ್ ಅವರು ರಾಗಾ ಪಾತ್ರಕ್ಕೆ ಜೀವ ತುಂಬಿದ್ದರು. ರಾಗಾ ಪಾತ್ರ ಹಾಗೂ ಅವರ ಕಾಸ್ಟ್ಯೂಮ್ ಅನೇಕರಿಗೆ ಇಷ್ಟವಾಗಿತ್ತು. ಇನ್ನು ಅರುಣ್-ರಾಗಾ ಜೋಡಿ ಹಿಟ್ ಆಗಿತ್ತು. ಇಲ್ಲಿಯವರೆಹೆ 154 ಎಪಿಸೋಡ್ಗಳು ಪ್ರಸಾರವಾಗಿವೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಂತರದಲ್ಲಿ ರಶ್ಮಿ ಪ್ರಭಾಕರ್ ಕನ್ನಡದಲ್ಲಿ ಈ ಧಾರಾವಾಹಿ ಮಾಡಿದ್ದರು. ಈ ಹಿಂದಿನ ಧಾರಾವಾಹಿಗಿಂತ ರಶ್ಮಿ ಗೆಟಪ್ ಇಲ್ಲಿ ವಿಭಿನ್ನವಾಗಿತ್ತು. ಶ್ರುತಿ ನಾಯ್ಡು ನಿರ್ಮಾಣದ ಧಾರಾವಾಹಿಯಿದು. ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದರು.
ಕೊರೊನಾದಿಂದ ಗೆದ್ದ ರಶ್ಮಿ ಪ್ರಭಾಕರ್
ತಿಂಗಳುಗಳ ಹಿಂದೆ ರಶ್ಮಿ ಪ್ರಭಾಕರ್ ಅವರಿಗೆ ಕೊರೊನಾ ವೈರಸ್ ಬಂದಿತ್ತು, ಅವರೀಗ ಆರೋಗ್ಯವಾಗಿದ್ದಾರೆ. ಪರಭಾಷೆಯ ಕಿರುತೆರೆಯಲ್ಲಿರೂ ರಶ್ಮಿ ಕಾಣಿಸಿಕೊಂಡಿದ್ದರು, ಒಟ್ಟಿನಲ್ಲಿ ಕಿರುತೆರೆ ಲೋಕದಲ್ಲಿ ಅವರು ಸಕ್ರಿಯರಾಗಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕರೆ ಸಿನಿಮಾದಲ್ಲಿ ನಟಿಸಲು ರಶ್ಮಿ ರೆಡಿಯಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಆಗಾಗ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು.