ಆ್ಯಪ್ನಗರ

ಹೋದಷ್ಟೇ ವೇಗವಾಗಿ ಕಿರುತೆರೆಗೆ ವಾಪಸ್ ಆದ ವಿಜಯ್ ಸೂರ್ಯ

ಈ ಧಾರಾವಾಹಿಯನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು 'ಪ್ರೇಮಲೋಕ' ಎಂದು ಹೆಸರಿಡಲಾಗಿದೆ. ತಾನು ಹೊಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಬಗ್ಗೆ ಸ್ವತಃ ವಿಜಯ್ ಖಚಿತಪಡಿಸಿದ್ದಾರೆ.

TIMESOFINDIA.COM 19 Jun 2019, 3:14 pm
ಇತ್ತೀಚೆಗಷ್ಟೇ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬೀಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು ನಟ ವಿಜಯ್ ಸೂರ್ಯ. ಇದೀಗ ಹೊಸ ಧಾರಾವಾಹಿಗೆ ಸಜ್ಜಾಗಿದ್ದಾರೆ. ಹಿಂದಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ದೈನಿಕ ಧಾರಾವಾಹಿ 'ಕಸೌಟಿ ಝಿಂದಗಿ ಕೆ' (ಜೀವನದ ಕವಲು ದಾರಿಗಳು) ಕನ್ನಡಕ್ಕೆ ರೀಮೇಕ್ ಆಗುತ್ತಿದೆ.
Vijaya Karnataka Web vijay-suriya


ಈ ಧಾರಾವಾಹಿಯನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು 'ಪ್ರೇಮಲೋಕ' ಎಂದು ಹೆಸರಿಡಲಾಗಿದೆ. ತಾನು ಹೊಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಬಗ್ಗೆ ಸ್ವತಃ ವಿಜಯ್ ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, "ಹೌದು ಹೊಸ ಧಾರಾವಾಹಿಗೆ ಸಹಿ ಹಾಕಿದ್ದೇನೆ. ಮೂರು ಟಿವಿ ವಾಹಿನಿಗಳಿಂದ ನನಗೆ ಆಫರ್ ಬಂದಿತ್ತು. ಆಯ್ಕೆ ಮಾಡುವುದು ಸ್ವಲ್ಪ ಕಷ್ಟವಾಯಿತು. ಈಗ ಒಪ್ಪಿಕೊಂಡಿರುವ ಧಾರಾವಾಹಿ ಮೂಲ ಧಾರಾವಾಹಿಗೆ ಸಿಕ್ಕಷ್ಟೇ ಜನಪ್ರಿಯತೆ ಪಡೆದುಕೊಳ್ಳುತ್ತದೆ. ಸಹಿ ಹಾಕುವುದಕ್ಕೂ ಮುನ್ನ 'ಕಸೌಟಿ' 70 ಎಪಿಸೋಡ್‍ಗಳನ್ನು ನೋಡಿದ್ದೇನೆ" ಎಂದಿದ್ದಾರೆ ವಿಜಯ್. [ಅಗ್ನಿಸಾಕ್ಷಿಯಾಗಿ ಟೆಕ್ಕಿ ಕೈಹಿಡಿದ ವಿಜಯ್ ಸೂರ್ಯ]

ಮೂಲ ಧಾವಾಹಿಯಲ್ಲಿ ಅನುರಾಗ್ ಪೋಷಿಸಿರುವ ಪ್ರಮುಖ ಪಾತ್ರದಲ್ಲಿ ವಿಜಯ್ ಸೂರ್ಯ ಕಾಣಿಸಲಿದ್ದಾರೆ. ಈ ಧಾರಾವಾಹಿಯ 30 ಎಪಿಸೋಡ್‍ಗಳನ್ನು ಮೈಸೂರು ಮಂಜು ನಿರ್ದೇಶಿಸಲಿದ್ದಾರೆ. ಅವರು ಇದುವರೆಗೆ ಅಗ್ನಿಸಾಕ್ಷಿಗೆ ಆ್ಯಕ್ಷನ್ ಕಟ್ ಹೇಳಿದ್ದರು.

ಅಗ್ನಿಸಾಕ್ಷಿ ಧಾರಾವಾಹಿಗೆ ವಿಜಯ್ ಸೂರ್ಯ ಗುಡ್ ಬೈ ಹೇಳಿದ ಬಳಿಕ ಅಭಿಮಾನಿಗಳು ತೀವ ನಿರಾಸೆಗೆ ಒಳಗಾಗಿದ್ದರು. ಇದೀಗ ಅಷ್ಟೇ ವೇಗವಾಗಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ವಾರಾಂತ್ಯದ ವೇಳೆಗೆ ಚಿತ್ರದ ಪ್ರೊಮೊ ಚಿತ್ರೀಕರಣ ನಡೆಯಲಿದ್ದು ಶೀಘ್ರದಲ್ಲೇ ಧಾರಾವಾಹಿ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ