ಆ್ಯಪ್ನಗರ

'ಅಗ್ನಿಸಾಕ್ಷಿ'ಯ ಸನ್ನಿಧಿ ಮೆಚ್ಚಿದ ಟಾಪ್ 5 ಸಿನಿಮಾಗಳು! ಇವುಗಳಲ್ಲಿ ನಿಮ್ಮ ಫೇವರಿಟ್‌ ಯಾವುದು?

'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅನೇಕ ಸಿನಿಮಾಗಳನ್ನು ನೋಡುತ್ತಾರೆ. ಹಾಗಾದರೆ ಅವರ ನೆಚ್ಚಿನ ಟಾಪ್‌ 5 ಕನ್ನಡದ ಸಿನಿಮಾಗಳು ಯಾವುವು ಮತ್ತು ಯಾಕೆ? ಆ ಬಗ್ಗೆ ಅವರೇ ನೀಡಿದ ವಿವರ ಇಲ್ಲಿದೆ.

Vijaya Karnataka Web 26 Sep 2020, 1:54 pm
ಕನ್ನಡ ಕಿರುತೆರೆಯಲ್ಲಿ 'ಅಗ್ನಿಸಾಕ್ಷಿ' ಸೀರಿಯಲ್‌ ಮೂಲಕ ಜನಪ್ರಿಯರಾದವರು ನಟಿ ವೈಷ್ಣವಿ ಗೌಡ. ಆ ಧಾರಾವಾಹಿಯಲ್ಲಿ ಅವರು ಮಾಡಿದ ಸನ್ನಿಧಿ ಪಾತ್ರ ಕರುನಾಡಿನ ಜನರ ಮನೆಮಾತಾಗಿತ್ತು. ಈ ವರ್ಷ ಆರಂಭದಲ್ಲಿ 'ಅಗ್ನಿಸಾಕ್ಷಿ' ಕೊನೆ ಆಯಿತು. ಈಗ ವೈಷ್ಣವಿ ಗಮನ ಬೆಳ್ಳೆತೆರೆ ಮೇಲಿದೆ. ಹೊಸದೊಂದು ಚಿತ್ರಕ್ಕೆ ಅವರು ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಇಷ್ಟದ 5 ಸಿನಿಮಾಗಳ ಬಗ್ಗೆ ಅವರು ಮಾತನಾಡಿದ್ದಾರೆ.
Vijaya Karnataka Web ವೈಷ್ಣವಿ ಗೌಡ


1: ಮುಂಗಾರ ಮಳೆ
'ನನಗೆ ಮುಂಗಾರು ಮಳೆ ಸಿನಿಮಾ ತುಂಬ ಇಷ್ಟ ಆಗಿತ್ತು. ಅದರ ನಿರೂಪಣೆ ಬಹಳ ಚೆನ್ನಾಗಿತ್ತು. ಹಾಡುಗಳು, ಛಾಯಾಗ್ರಹಣ, ಚಿತ್ರಕಥೆ ಉತ್ತಮವಾಗಿತ್ತು. ಸೂಪರ್‌ ಹಿಟ್‌ ಸಿನಿಮಾ ಎನಿಸಿಕೊಳ್ಳಬೇಕಾದ ಎಲ್ಲ ಗುಣಗಳೂ ಆ ಸಿನಿಮಾದಲ್ಲಿ ಇದ್ದವು' ಎನ್ನುತ್ತಾರೆ ವೈಷ್ಣವಿ. ಯೋಗರಾಜ್‌ ಭಟ್‌ ನಿರ್ದೇಶನದ ಆ ಚಿತ್ರ 2006ರಲ್ಲಿ ಬಿಡುಗಡೆ ಆಗಿತ್ತು.

2: ಮೊಗ್ಗಿನ ಮನಸು
'ನಾನು ಕಾಲೇಜು ದಿನಗಳಲ್ಲಿಇದ್ದಾಗ 'ಮೊಗ್ಗಿನ ಮನಸು' ಸಿನಿಮಾ ನೋಡಿದ್ದೆ. ರಾಧಿಕಾ ಪಂಡಿತ್‌ ನಿಭಾಯಿಸಿದ ಆ ಪಾತ್ರ ತುಂಬ ಸ್ಫೂರ್ತಿದಾಯಕವಾಗಿತ್ತು. ಅವರ ಪಾತ್ರ ಮತ್ತು ನಟನೆ ಎಷ್ಟು ಭಾವುಕವಾಗಿತ್ತು ಎಂದರೆ ಸಿನಿಮಾ ನೋಡಿದ ಬಳಿಕ ನನ್ನ ಕಣ್ಣುಗಳಲ್ಲಿ ನೀರುತುಂಬಿಕೊಂಡಿತ್ತು' ಎಂದು ಮೆಲುಕು ಹಾಕುತ್ತಾರೆ ವೈಷ್ಣವಿ. ಅದು ಯಶ್‌ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ.

also read: ಮೊದಲ ಬಾರಿಗೆ ಬ್ಯೂಟಿ ಸೀಕ್ರೇಟ್, ವಯಸ್ಸು, ಮದುವೆ, ಸಂಬಳದ ಬಗ್ಗೆ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ ಮಾತು

3. ಹಾಲಿವುಡ್‌
ಉಪೇಂದ್ರ ಅವರ ನಾಯಕತ್ವದ 'ಹಾಲಿವುಡ್‌' ಸಿನಿಮಾ ಕೂಡ ವೈಷ್ಣವಿಗೆ ಅಚ್ಚುಮೆಚ್ಚು. ಯಾಕೆಂದರೆ ಆ ಚಿತ್ರದ ಕಥೆ ತುಂಬ ಡಿಫರೆಂಟ್‌ ಮತ್ತು ಹೊಸತನದಿಂದ ಕೂಡಿತ್ತು. ಕಾನ್ಸೆಪ್ಟ್ ಕೂಡ ತುಂಬ ಇಷ್ಟವಾಗಿತ್ತು ಎಂದಿದ್ದಾರೆ 'ಅಗ್ನಿಸಾಕ್ಷಿ'ಯ ಸನ್ನಿಧಿ.

also read: 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ತನು ಪಾತ್ರ ಮಾಡಿದ್ದ ನಟಿ ಶೋಭಾ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ?

4. ಒಂದು ಮೊಟ್ಟೆಯ ಕಥೆ
ರಾಜ್‌ ಬಿ. ಶೆಟ್ಟಿ ನಟನೆಯ 'ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ವೈಷ್ಣವಿ ಫಿದಾ ಆಗಿದ್ದಾರೆ. ಅದಕ್ಕೆ ನಿರ್ದೇಶನ ಮಾಡಿದ್ದು ಕೂಡ ರಾಜ್‌ ಬಿ. ಶೆಟ್ಟಿ. 'ಜೀವನ ಎಂದರೆ ಬರೀ ದೈಹಿಕ ಸೌಂದರ್ಯ ಅಲ್ಲ ಎಂಬುದು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ವಾಸ್ತವತೆಗೆ ಹೆಚ್ಚು ಹತ್ತಿರವಾಗಿದೆ. ಅಂತಹ ಸಿನಿಮಾಗಳನ್ನು ಕನ್ನಡದಲ್ಲಿ ಇನ್ನಷ್ಟು ನೋಡಲು ಇಷ್ಟಪಡುತ್ತೇನೆ' ಎಂಬುದು ವೈಷ್ಣವಿ ಮಾತು.

also read: ಅಂತೂ ಇಷ್ಟುದಿನದ ಸೀಕ್ರೇಟ್ ಈಗ ರಿವೀಲ್ ಮಾಡಿದ 'ಅಗ್ನಿಸಾಕ್ಷಿ' ಧಾರಾವಾಹಿ ನಟಿ ವೈಷ್ಣವಿ ಗೌಡ

5: ಶಿವಾಜಿ ಸುರತ್ಕಲ್‌
ಈ ವರ್ಷ ಕೊರೊನಾ ಹಾವಳಿ ಆರಂಭ ಆಗುವುದಕ್ಕೂ ಮುನ್ನ ಸೂಪರ್‌ ಹಿಟ್‌ ಆದ ಸಿನಿಮಾ 'ಶಿವಾಜಿ ಸುರತ್ಕಲ್‌'. ರಮೇಶ್‌ ಅರವಿಂದ್‌ ಅವರು ಪತ್ತೇದಾರಿ ಪಾತ್ರ ಮಾಡಿದ್ದರು. 'ನಾನು ಇತ್ತೀಚೆಗಷ್ಟೇ ಈ ಸಿನಿಮಾ ನೋಡಿದೆ. ಇದರಲ್ಲಿ ಕೊನೇ ದೃಶ್ಯದವರೆಗೆ ಸಸ್ಪೆನ್ಸ್‌ ತುಂಬ ಚೆನ್ನಾಗಿದೆ. ಪ್ರತಿ ಪಾತ್ರವೂ ಸೂಪರ್‌ ಆಗಿದೆ' ಎಂದಿದ್ದಾರೆ ವೈಷ್ಣವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ