ಆ್ಯಪ್ನಗರ

'ಅಗ್ನಿಸಾಕ್ಷಿ'ಯ ಸನ್ನಿಧಿ ಈಗ 'ಬಹುಕೃತ ವೇಷಂ' ಅಂತ ಹೇಳುತ್ತಿರುವುದು ಏಕೆ?

ಕನ್ನಡ ಕಿರುತೆರೆಯಲ್ಲಿ 'ಅಗ್ನಿಸಾಕ್ಷಿ' ದೊಡ್ಡ ಯಶಸ್ಸು ಕಂಡ ಧಾರಾವಾಹಿ. ಅದರಲ್ಲಿ ಸನ್ನಿಧಿ ಅನ್ನೋ ಮುಖ್ಯ ಪಾತ್ರ ಮಾಡಿ ಎಲ್ಲರ ಗಮನಸೆಳೆದವರು ನಟಿ ವೈಷ್ಣವಿ ಗೌಡ. ಇದೀಗ ಅವರು ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

Vijaya Karnataka Web 3 Jan 2021, 12:30 pm
ನಟಿ ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಆ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ ಸನ್ನಿಧಿ ಪಾತ್ರ ಅನೇಕರ ಮನಗೆದ್ದಿತ್ತು. 'ಅಗ್ನಿಸಾಕ್ಷಿ' ಮುಗಿದ ಮೇಲೆ ವೈಷ್ಣವಿ ಅವರಿಗೆ ಬೆಳ್ಳಿತೆರೆಯಿಂದಲೂ ಅವಕಾಶಗಳು ಹರಿದುಬಂದವು. ಆರಂಭದಲ್ಲಿ ಅವರು 'ಗಿರ್‌ಗಿಟ್ಲೆ' ಅನ್ನೋ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಈಗ 'ಬಹುಕೃತ ವೇಷಂ' ಅಂತ ಹೇಳುತ್ತಿದ್ದಾರೆ. 'ಉದರ ನಿಮಿತ್ತಂ ಬಹುಕೃತ ವೇಷಂ' ಎಂಬ ಮಾತು ನಮಗೆಲ್ಲ ಗೊತ್ತೇ ಇದೆ. ಅದೇ ಥರ ಈಗ ವೈಷ್ಣವಿ 'ಬಹುಕೃತ ವೇಷಂ' ಎನ್ನುತ್ತಿದ್ದಾರೆ. ಹೀಗೆ ಹೇಳಲು ಕಾರಣವೇನು? ಇಲ್ಲಿದೆ ಮಾಹಿತಿ.
Vijaya Karnataka Web vaishnavi gowda


ವೈಷ್ಣವಿ ಹೊಸ ಸಿನಿಮಾ
ನಿರ್ದೇಶಕ ಪ್ರಶಾಂತ್ ಕೆ. ಯಳ್ಳಂಪಳ್ಳಿ ಅವರ ಎರಡನೇ ಸಿನಿಮಾವೇ ಈ 'ಬಹುಕೃತ ವೇಷಂ'. ಈ ಹಿಂದೆ 'ಗೌಡ್ರು ಸೈಕಲ್' ಅನ್ನೋ ಸಿನಿಮಾ ಮಾಡಿ, ಗಮನಸೆಳೆದಿದ್ದ ಪ್ರಶಾಂತ್ ಈಗ 'ಬಹುಕೃತ ವೇಷಂ' ಸಿನಿಮಾ ಕೈಗೆತ್ತಿಕೊಂದ್ದಾರೆ. ಅಂದಹಾಗೆ, ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವುದು ವೈಷ್ಣವಿ ಗೌಡ. ಅವರಿಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾದಲ್ಲಿ ನಕ್ಷತ್ರಾ ಅನ್ನೋ ಪಾತ್ರವನ್ನು ವೈಷ್ಣವಿ ಮಾಡಿದ್ದಾರೆ. ಇದು ತುಂಬ ಸ್ಟ್ರಾಂಗ್ ಆಗಿರುವ ಪಾತ್ರವಾಗಿದ್ದು, ಇಡೀ ಕಥೆ ಆ ಪಾತ್ರದ ಸುತ್ತವೇ ಸುತ್ತಲಿದೆಯಂತೆ.

ಸಂದೇಶ ಇರುವ ಸಿನಿಮಾ
ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಪ್ರಶಾಂತ್ ಆಚಾರ್ಯ, 'ನಮ್ಮ ಚಿತ್ರದಲ್ಲಿ ನಾಯಕಿಯಾಗಿ ವೈಷ್ಣವಿ ಇದ್ದಾರೆ. ನನ್ನ ಮೊದಲ ಸಿನಿಮಾ 'ಗೌಡ್ರು ಸೈಕಲ್‌'ನಲ್ಲಿ ನಟಿಸಿದ್ದ ಶಶಿಕಾಂತ್, ಇಲ್ಲಿಯೂ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನಾನು ಈ ಮೊದಲು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದೆ. ಚಿತ್ರರಂಗದಲ್ಲಿ ನನಗೆ 19 ವರ್ಷಗಳ ಅನುಭವ ಇದೆ. ಲವ್, ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲವೂ ಸಮ್ಮಿಳಿತಗೊಂಡಿರುವ ಜೊತೆಗೆ ಒಂದು ಸಂದೇಶ ಇರುವ ಸಿನಿಮಾ ಇದಾಗಿದೆ. ಇಡೀ ಸಿನಿಮಾದ ಶೂಟಿಂಗ್‌ ಮುಕ್ತಾಯಗೊಂಡಿದ್ದು, 2 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ' ಎನ್ನುತ್ತಾರೆ.

ಮೊದಲ ಬಾರಿಗೆ ಬ್ಯೂಟಿ ಸೀಕ್ರೇಟ್, ವಯಸ್ಸು, ಮದುವೆ, ಸಂಬಳದ ಬಗ್ಗೆ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ ಮಾತು

ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. 'ಇಡೀ ಸಿನಿಮಾ ಬೆಂಗಳೂರು ಸುತ್ತಮುತ್ತವೇ ಶೂಟಿಂಗ್ ಮಾಡಿದ್ದೇವೆ. ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಬೇರೆ ಬೇರೆ ಭಾವನೆಗಳು, ಮನಸ್ಥಿತಿಗಳು ಇವೆ. ನಮ್ಮ ಕಥೆಗೆ ಬಹಳ ಸೂಕ್ತವಾಗಿದೆ ಎಂಬ ಕಾರಣಕ್ಕೆ 'ಬಹುಕೃತ ವೇಷಂ' ಎಂದು ಟೈಟಲ್ ಇಟ್ಟಿದ್ದೇವೆ' ಎನ್ನುತ್ತಾರೆ ನಿರ್ದೇಶಕರು. 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ರಾಕೇಶ್‌ ಪೂಜಾರಿ, 'ಮಜಾ ಟಾಕೀಸ್' ಖ್ಯಾತಿಯ ಸನಾತನಿ ಇದರಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ಮಾಸ್‌ ಮಾದ, ವಿನೋದ್ ಸಾಹಸ ನಿರ್ದೇಶನ ಮಾಡಿದ್ದಾರೆ. ವೈಶಾಖ್ ಭಾರ್ಗವ್ ಇದರ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ಭರ್ಜರಿ ಚೇತನ್‌ಕುಮಾರ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಹರ್ಷನಂದನ್ ಮತ್ತ ಡಿಕೆ ರವಿ ಎಂಬುವವರು ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಒಂಬತ್ತು ವರ್ಷಗಳಿಂದಲೂ ನಟಿಸುತ್ತಿದ್ದೇನೆ: ಅಗ್ನಿಸಾಕ್ಷಿ 'ಸನ್ನಿಧಿ' ವೈಷ್ಣವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ