ಆ್ಯಪ್ನಗರ

ಮುಗಿಯುತ್ತಾ 'ಅಗ್ನಿಸಾಕ್ಷಿ' ಧಾರಾವಾಹಿ? ಸೀರಿಯಲ್‌ನಿಂದ ಹೊರಬೀಳಲಿದ್ದಾರಾ ವೈಷ್ಣವಿ ಗೌಡ?

ಇತ್ತೀಚೆಗೆ ಆರಕ್ಕಿಂತ ಹೆಚ್ಚು ಧಾರಾವಾಹಿಗಳು ಮುಕ್ತಾಯವಾಗಿವೆ. ಆರು ವರ್ಷಗಳನ್ನು 'ಅಗ್ನಿಸಾಕ್ಷಿ' ಧಾರಾವಾಹಿ ಪೂರೈಸಿವೆ. ಈ ಹಿನ್ನಲೆಯಲ್ಲಿ ಈ ಧಾರಾವಾಹಿ ಮುಗಿಯತ್ತಾ? ಅಥವಾ ವೈಷ್ಣವಿ ಗೌಡ ಈ ಧಾರಾವಾಹಿಯಿಂದ ಹೊರಬಿದ್ರಾ? ಉತ್ತರ ಇಲ್ಲಿದೆ

Vijaya Karnataka Web 20 Oct 2019, 4:44 pm
'ಅಗ್ನಿಸಾಕ್ಷಿ' ಧಾರಾವಾಹಿ ಆರಂಭವಾಗಿ ಹಲವು ವರ್ಷಗಳೇ ಉರುಳಿವೆ. ಈ ಧಾರಾವಾಹಿ ಹಲವು ಕಲಾವಿದರಿಗೆ ಸಾಕಷ್ಟು ಖ್ಯಾತಿ ನೀಡಿದೆ. ವಿಜಯ್ ಸೂರ್ಯ, ವೈಷ್ಣವಿ ಗೌಡ, ಮುಖ್ಯಮಂತ್ರಿ ಚಂದ್ರು, ಪ್ರಿಯಾಂಕಾ ಎಸ್. ಸುಕೃತಾ ನಾಗ್, ಐಶ್ವರ್ಯಾ ಸಾಲಿಮಠ, ರಾಜೇಶ್ ಧ್ರುವ, ಚಂದನಾ, ಅನುಷಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿದ್ದರು. ವಿಜಯ್ ಸೂರ್ಯ ಈ ಧಾರಾವಾಹಿಯಿಂದ ಹೊರಬಂದು ಕೆಲ ತಿಂಗಳುಗಳೇ ಕಳೆದಿವೆ.
Vijaya Karnataka Web agnisakshi


ಸಿಕ್ಕಾಪಟ್ಟೆ ಫೇಮಸ್ 'ಅಗ್ನಿಸಾಕ್ಷಿ' ಧಾರಾವಾಹಿ ಪಾತ್ರಗಳು

ವಿಜಯ್ ಸೂರ್ಯ ಸಿದ್ದಾರ್ಥ್ ಪಾತ್ರ ನಿರ್ವಹಿಸುತ್ತಿದ್ದರು. ಈ ಪಾತ್ರದಲ್ಲಿ ಇವರನ್ನು ಬಿಟ್ಟರೆ ಬೇರೆಯವರನ್ನು ನೋಡಲಾಗೋದಿಲ್ಲ ಎನ್ನುವಷ್ಟರ ಮಟ್ಟಿಗೆ ಸಿದ್ದಾರ್ಥ್ ಪಾತ್ರ ಜನರಿಗೆ ಹತ್ತಿರವಾಗಿತ್ತು. ಸಿದ್ದಾರ್ಥ್ ಮತ್ತು ಸನ್ನಿಧಿ ಪ್ರೀತಿ-ಪ್ರೇಮ, ಚಂದ್ರಿಕಾ ಕುತಂತ್ರ, ಸಿದ್ದಾರ್ಥ್-ಅಖಿಲ್-ಅಂಜಲಿ ಸಹೋದರತ್ವ ಸುತ್ತಲೇ ಕಥೆ ಸಾಗುತ್ತದೆ. ಇಲ್ಲಿ ಅಭಿನಯಿಸಿರುವ ಕಲಾವಿದರು ಈ ಹಿಂದೆ ಎಷ್ಟೇ ಪಾತ್ರ ಮಾಡಿದ್ದರೂ ಕೂಡ ಈ ಧಾರಾವಾಹಿಯ ಪಾತ್ರದಿಂದಲೇ ಜನರು ಇವರನ್ನು ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಈ ಧಾರಾವಾಹಿ, ಪಾತ್ರಗಳು ವೀಕ್ಷಕರ ಮೇಲೆ ಪ್ರಭಾವ ಬೀರಿವೆ.

ಅಗ್ನಿಸಾಕ್ಷಿ ಸೀರಿಯಲ್‌ನಿಂದ ವಿಜಯ್ ಸೂರ್ಯ ಔಟ್: ಕಾರಣವೇನು ಗೊತ್ತೇ?

ಚಂದ್ರಿಕಾ ಪಾತ್ರ ಮುಕ್ತಾಯವಾಗತ್ತಾ?

ವಿಜಯ್ ಸೂರ್ಯ ಈ ಧಾರಾವಾಹಿಯಿಂದ ಹೊರಬಿದ್ದಾಗ 'ಅಗ್ನಿಸಾಕ್ಷಿ' ಮುಕ್ತಾಯವಾಗುತ್ತದೆ ಎನ್ನಲಾಗಿತ್ತು. ಆದರೆ ಸನ್ನಿಧಿ ಲೀಡ್ ಪಾತ್ರದ ಮೂಲಕವೇ ಕಥೆ ಇಂದಿಗೂ ಸಾಗುತ್ತಿದೆ. ಈಗ ಬಿಗ್‌ ಬಾಸ್‌ಗೆ ಚಂದ್ರಿಕಾ ಅಂದರೆ ಪ್ರಿಯಾಂಕಾ ಎಸ್. ಎಂಟ್ರಿ ನೀಡಿದ್ದಾರೆ. ಈ ಹಿಂದೆ ರಾಜೇಶ್ವರಿ ಚಂದ್ರಿಕಾ ಪಾತ್ರ ನಿಭಾಯಿಸುತ್ತಿದ್ದರು. ಅವರು ಈ ಧಾರಾವಾಹಿಯಿಂದ ಹೊರಬಂದಮೇಲೆ ಪ್ರಿಯಾಂಕಾ ಅವರು ಚಂದ್ರಿಕಾ ಪಾತ್ರಕ್ಕೆ ಜೀವ ತುಂಬಿದರು. ಈಗ ಅವರು ಬಿಗ್‌ಬಾಸ್‌ನಲ್ಲಿದ್ದಾರೆ. ಅವರೆಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿರುತ್ತಾರೋ ಗೊತ್ತಿಲ್ಲ. ಒಂದುವೇಳೆ 100ದಿನದವರೆಗೂ ಇದ್ದರೆ ಚಂದ್ರಿಕಾ ಪಾತ್ರದ ಗತಿಯೇನು? 100 ದಿನದವರೆಗೆ ಆಗುವಷ್ಟು ಎಪಿಸೋಡ್‌ಗಳನ್ನು ಈ ಮುಂಚೆಯೇ ಚಿತ್ರೀಕರಿಸಿಕೊಳ್ಳೋದು ಕಷ್ಟದ ಮಾತು. ಹೀಗಾಗಿ ಚಂದ್ರಿಕಾ ಪಾತ್ರ ಶೀಘ್ರದಲ್ಲೇ ಅಂತ್ಯವಾಗಬಹುದು ಅಥವಾ ಚಂದ್ರಿಕಾ ಪಾತ್ರಕ್ಕೆ ಇನ್ನೊಬ್ಬರು ಬರಬಹುದು.

ವಿಜಯ್ ಸೂರ್ಯ 'ಪ್ರೇಮಲೋಕ'ಕ್ಕೆ ಅಡಿಯಿಟ್ಟ ಅಂಕಿತಾ ನವ್ಯಾ ಗೌಡ

'ಅಗ್ನಿಸಾಕ್ಷಿ' ಧಾರಾವಾಹಿ ಮುಗಿಯತ್ತಾ?

ವೈಷ್ಣವಿ ಗೌಡ ಅವರು ಸನ್ನಿಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಜಯ್ ಸೂರ್ಯರಂತೆ ಇವರು ಕೂಡ ಧಾರಾವಾಹಿಯಿಂದ ಹೊರಬರುತ್ತಾರೆ ಎಂಬ ಮಾತು ಕೇಳಿಬರುತ್ತಿತ್ತು. ಅಂಜಲಿ ಪಾತ್ರದ ಸುತ್ತ ಇನ್ನುಮುಂದೆ ಕಥೆ ಸಾಗಲಿದೆ ಎಂಬ ಊಹಾಪೋಹಗಳಿತ್ತು. ಈ ಬಗ್ಗೆ 'ವಿಜಯ ಕರ್ನಾಟಕ ವೆಬ್‌ಸೈಟ್ ' ವೈಷ್ಣವಿ ಅವರ ಬಳಿ ಕೇಳಿದಾಗ ಅವರು "ಇನ್ನು ಆರು ತಿಂಗಳು ಧಾರಾವಾಹಿ ಮುಗಿಸುವ ಯೋಚನೆ ಇಲ್ಲ. ಧಾರಾವಾಹಿಯಿಂದ ಹೊರಬರುವ ಆಲೋಚನೆ ನನಗಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ 'ಅಗ್ನಿಸಾಕ್ಷಿ' ಧಾರಾವಾಹಿ ಆರು ತಿಂಗಳು ಪ್ರಸಾರವಾಗುತ್ತದೆ ಎಂಬುದಂತೂ ಸತ್ಯ ಎಂದಾಯಿತು.

'ಬಿಗ್‌ ಬಾಸ್ ಕನ್ನಡ ಸೀಸನ್ 7'ರ ಗ್ರ್ಯಾಂಡ್ ಓಪನಿಂಗ್‌ನ ಕ್ಷಣ ಕ್ಷಣದ ಮಾಹಿತಿ

ಆಸ್ಪತ್ರೆಯಲ್ಲಿ 'ಅಗ್ನಿಸಾಕ್ಷಿ' ಸನ್ನಿಧಿ: ಅಯ್ಯೋ... ಏನಾಯ್ತು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ