ಆ್ಯಪ್ನಗರ

Tunisha Sharma Death: ಧಾರಾವಾಹಿ ಸೆಟ್‌ನಲ್ಲಿಯೇ ನೇಣು ಹಾಕಿಕೊಂಡ 20 ವರ್ಷದ ನಾಯಕ ನಟಿ ತುನಿಶಾ ಶರ್ಮಾ

'ಚಕ್ರವರ್ತಿ ಅಶೋಕ್ ಸಾಮ್ರಾಟ್', 'ಗಬ್ಬರ್ ಪೂಂಚವಾಲಾ', 'ಶೀರ್ ಇ ಪಂಜಾಬ್; ಮಹಾರಾಜ ರಂಜಿತ್ ಸಿಂಗ್', 'ಇಂಟರ್‌ನೆಟ್ ವಾಲಾ ಲವ್', 'ಇಶ್ಕ್ ಸುಬಾನ್ ಅಲ್ಲಾ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ತುನಿಶಾ ಅವರು ಟಿವಿ ಶೋ ಸೆಟ್‌ನಲ್ಲಿಯೇ ನಿಧನರಾಗಿದ್ದಾರೆ. ತುನಿಶಾ ಅವರು ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

Authored byಪದ್ಮಶ್ರೀ ಭಟ್ | TIMESOFINDIA.COM 24 Dec 2022, 8:21 pm

ಹೈಲೈಟ್ಸ್‌:

  • ಟಿವಿ ಶೋ ಸೆಟ್‌ನಲ್ಲಿ ಶವವಾಗಿ ಪತ್ತೆಯಾದ ನಟಿ ತುನಿಶಾ ಶರ್ಮಾ
  • ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸಿರುವ ತುನಿಶಾ ಶರ್ಮಾ
  • ತುನಿಶಾ ಶರ್ಮಾ ಅವರ ಸಾವಿನ ತನಿಖೆ ನಡೆಯುತ್ತಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web tunisha sharma

ಟಿವಿ ಶೋನ ಸೆಟ್‌ನಲ್ಲಿಯೇ ಇಂದು 20 ವರ್ಷದ ನಟಿ ತುನಿಶಾ ಶರ್ಮಾ ಅವರು ( Tunisha Sharma ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ali baba dastaan-e-kabul ಧಾರಾವಾಹಿ ಸೆಟ್‌ನ ಮೇಕಪ್‌ ರೂಮ್‌ವೊಂದರಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ತುನಿಶಾ ಅವರು ನಿಧನರಾಗಿದ್ದಾರೆ. ಅಂದಹಾಗೆ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿತ್ತು. ನೇಣು ಹಾಕಿಕೊಂಡಿದ್ದ ತುನಿಶಾ ಅವರನ್ನು ನೋಡಿದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಚಿಕಿತ್ಸೆ ಫಲಕಾರಿಯಾಗದೆ ತುನಿಶಾ ಕೊನೆಯುಸಿರೆಳೆದಿದ್ದಾರೆ. ತುನಿಶಾ ಅವರ ಕುಟುಂಬ ಈಗ ಆಸ್ಪತ್ರೆಯಲ್ಲಿದೆ.

ಅನೇಕ ಧಾರಾವಾಹಿಗಳಲ್ಲಿ ನಟನೆ

20 ವರ್ಷದ ಈ ನಟಿ ಐತಿಹಾಸಿಕ ಧಾರಾವಾಹಿ 'ಭಾರತ್ ಕಾ ವೀರ್ ಪುತ್ರ-ಮಹಾರಾಣ ಪ್ರತಾಪ' ಮೂಲಕ ನಟನೆ ಆರಂಭಿಸಿದ್ದರು. 'ಚಕ್ರವರ್ತಿ ಅಶೋಕ್ ಸಾಮ್ರಾಟ್', 'ಗಬ್ಬರ್ ಪೂಂಚವಾಲಾ', 'ಶೀರ್ ಇ ಪಂಜಾಬ್; ಮಹಾರಾಜ ರಂಜಿತ್ ಸಿಂಗ್', 'ಇಂಟರ್‌ನೆಟ್ ವಾಲಾ ಲವ್', 'ಇಶ್ಕ್ ಸುಬಾನ್ ಅಲ್ಲಾ' ಮುಂತಾದ ಧಾರಾವಾಹಿಗಳಲ್ಲಿ ತುನಿಶಾ ಕಾಣಿಸಿಕೊಂಡಿದ್ದರು.

Agnisakshi: ಹಿಂದಿಗೆ ರೀಮೇಕ್ ಆಗ್ತಿದೆ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ
ಸಲ್ಮಾನ್ ಖಾನ್ ಸಿನಿಮಾದಲ್ಲಿ ತನಿಶಾ ಅಭಿನಯ

ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದ ತುನಿಶಾ ಅವರು, 'ಫಿತೂರ್', 'ಬಾರ್ ಬಾರ್ ದೆಖೋ', 'ಕಹಾನಿ 2; ದುರ್ಗ ರಾಣಿ ಸಿಂಗ್', 'ದಬಂಗ್ 3' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ಫಿತೂರ್', 'ಬಾರ್ ಬಾರ್ ದೆಖೋ' ಸಿನಿಮಾಗಳಲ್ಲಿ ತುನಿಶಾ ಅವರು ಕತ್ರಿನಾ ಕೈಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಅವರ 'ದಬಂಗ್ 3' ಚಿತ್ರದಲ್ಲಿ ತುನಿಶಾ ಅವರು ಅತಿಥಿ ಪಾತ್ರ ಮಾಡಿದ್ದರು.

ಸಾಯುವ ಕೆಲ ಗಂಟೆಗಳ ಮಧ್ಯೆ ತನಿಶಾ ಸೋಶಿಯಲ್ ಮೀಡಿಯಾ ಪೋಸ್ಟ್

ಸದ್ಯ ತುನಿಶಾ ಅವರು 'ಇಂಟರ್‌ನೆಟ್ ವಾಲಾ ಲವ್'ನಲ್ಲಿ ಕೆಲಸ ಮಾಡುತ್ತಿದ್ದರು. ಸಾಯುವ ಕೆಲ ಗಂಟೆಗಳ ಮುಂಚೆ ತುನಿಶಾ ಅವರು, "ಉತ್ಸಾಹದಿಂದ ನಡೆಯುವವರು ನಿಲ್ಲಲಾರರು" ಎಂದು ಪೋಸ್ಟ್ ಹಾಕಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಸ್ಕ್ರಿಪ್ಟ್ ಹಿಡಿದು ಕೂತಿರುವ ಫೋಟೋ ಸಮೇತ ಈ ರೀತಿ ಬರಹ ಬರೆದು ಪೋಸ್ಟ್ ಮಾಡಿದ್ದರು.

Ramola: 'ರಿಚ್ಚಿ' ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿರುವ 'ಕನ್ನಡತಿ' ಧಾರಾವಾಹಿ ನಟಿ ರಮೋಲ

ತನಿಖೆ
ಇದು ಆತ್ಮಹತ್ಯೆ ಹೌದೋ ಇಲ್ಲವೋ ಎಂದು ತನಿಖೆ ನಡೆಯುತ್ತಿದೆ. ಪೊಲೀಸರು ತುನಿಶಾ ಸಾವಿನ ವಿಚಾರಣೆ ಮಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ತುನಿಶಾ ಸಾವಿಗೆ ಸಂತಾಪ ಸೂಚಿಸಿದ್ದಾರೆ. ತುನಿಶಾ ಅವರ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ