ಆ್ಯಪ್ನಗರ

Aniruddha Jatkar: ‘ಜೊತೆ ಜೊತೆಯಲಿ’ ವಿವಾದ: ‘ಬ್ಯಾನ್’ ಬಗ್ಗೆ ಅನಿರುದ್ಧ್ ಜತ್ಕರ್ ಮೊದಲ ಪ್ರತಿಕ್ರಿಯೆ ಇಲ್ಲಿದೆ

‘ಜೊತೆ ಜೊತೆಯಲಿ’ ಧಾರಾವಾಹಿಯ ತಂಡ ಮತ್ತು ನಟ ಅನಿರುದ್ಧ ಜತ್ಕರ್ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಿವಾದದ ಬಗ್ಗೆ ‘ವಿಜಯ ಕರ್ನಾಟಕ ವೆಬ್’ಗೆ ನಟ ಅನಿರುದ್ಧ ಜತ್ಕರ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 19 Aug 2022, 8:23 pm

ಹೈಲೈಟ್ಸ್‌:

  • ವಿವಾದದ ಕೇಂದ್ರಬಿಂದುವಾದ ‘ಜೊತೆ ಜೊತೆಯಲಿ’ ಸೀರಿಯಲ್
  • ವಿವಾದದ ಬಗ್ಗೆ ಅನಿರುದ್ಧ ಜತ್ಕರ್ ಹೇಳಿದ್ದೇನು?
  • ಜೀ ವಾಹಿನಿ ಹಾಗೂ ನಿರ್ದೇಶಕರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದ ನಟ ಅನಿರುದ್ಧ ಜತ್ಕರ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aniruddha jatkar reaction to jothe jotheyali serial controversy
Aniruddha Jatkar: ‘ಜೊತೆ ಜೊತೆಯಲಿ’ ವಿವಾದ: ‘ಬ್ಯಾನ್’ ಬಗ್ಗೆ ಅನಿರುದ್ಧ್ ಜತ್ಕರ್ ಮೊದಲ ಪ್ರತಿಕ್ರಿಯೆ ಇಲ್ಲಿದೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’. ಪ್ರಸಾರ ಆರಂಭವಾದಾಗಿನಿಂದಲೂ ‘ಜೊತೆ ಜೊತೆಯಲಿ’ ಸೀರಿಯಲ್ ಟಿಆರ್‌ಪಿ ಪಟ್ಟಿಯಲ್ಲಿ ಟಾಪ್‌ನಲ್ಲೇ ಇದೆ. ಇನ್ನೇನು ‘ಜೊತೆ ಜೊತೆಯಲಿ’ ಸೀರಿಯಲ್ ಮುಗಿಯಲಿದೆ ಎನ್ನಲಾಗಿದೆ. ಹೀಗಿರುವಾಗಲೇ, ‘ಜೊತೆ ಜೊತೆಯಲಿ’ ಧಾರಾವಾಹಿಯ ತಂಡ ಮತ್ತು ನಟ ಅನಿರುದ್ಧ ಜತ್ಕರ್ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಎಲ್ಲೆಲ್ಲೂ ಗುಸುಗುಸು
‘ಜೊತೆ ಜೊತೆಯಲಿ’ ಸೀರಿಯಲ್‌ ಸೆಟ್‌ನಲ್ಲಿ ಕಿರಿಕ್ ಆಗಿದೆ. ನಿರ್ದೇಶಕ ಆರೂರು ಜಗದೀಶ್ ಹಾಗೂ ಅನಿರುದ್ಧ ಜತ್ಕರ್ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಶೂಟಿಂಗ್‌ ಸೆಟ್‌ನಿಂದ ಅನಿರುದ್ಧ್ ಜತ್ಕರ್ ಹೊರನಡೆದಿದ್ದಾರೆ. ಅಸಹಕಾರ ತೋರಿರುವ ಅನಿರುದ್ಧ ಜತ್ಕರ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡುವ ಬಗ್ಗೆ ಆಲೋಚನೆ ನಡೆಯುತ್ತಿದೆ. ಕಿರುತೆರೆ ನಿರ್ಮಾಪಕರ ಸಂಘಕ್ಕೆ ಅನಿರುದ್ಧ ಜತ್ಕರ್ ವಿರುದ್ಧ ದೂರು ನೀಡಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಜೀ ಕನ್ನಡ ವಾಹಿನಿ ಹಾಗೂ ನಿರ್ದೇಶಕ ಆರೂರು ಜಗದೀಶ್ ಪ್ರೆಸ್ ಮೀಟ್ ಮಾಡಲಿದ್ದಾರೆ ಎಂಬ ವದಂತಿ ಇಂದು ಬೆಳಗ್ಗೆಯಿಂದ ಕೇಳಿಬರುತ್ತಿದೆ.

ಆದ್ರೆ, ಈ ವಿವಾದದ ಬಗ್ಗೆ ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಆಗಲಿ, ನಿರ್ದೇಶಕ ಆರೂರು ಜಗದೀಶ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ. ಕೇಳಿಬರುತ್ತಿರುವ ಗಾಸಿಪ್ ನಿಜ ಎಂದು ಖಚಿತವೂ ಪಡಿಸಿಲ್ಲ.

'ಜೊತೆ ಜೊತೆಯಲಿ' ಧಾರಾವಾಹಿ ಅಂತ್ಯವಾಗುತ್ತಿರುವುದು ನಿಜವೇ? ಆ ವಿಡಿಯೋದಲ್ಲಿ ಇರೋದು ಏನು?

ಅನಿರುದ್ಧ್ ಜತ್ಕರ್ ಮೊದಲ ಪ್ರತಿಕ್ರಿಯೆ
ವಿವಾದದ ಬಗ್ಗೆ ‘ವಿಜಯ ಕರ್ನಾಟಕ ವೆಬ್’ಗೆ ನಟ ಅನಿರುದ್ಧ ಜತ್ಕರ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘’ಒಂದು ತಂಡ ಅಂದ್ಮೇಲೆ ಕ್ರಿಯೇಟಿವ್ ಡಿಫರೆನ್ಸ್ ಬರುವುದು ಸಹಜ. ಆದರೆ, ನನಗೆ ವಾಹಿನಿ ಕಡೆಯಿಂದಾಗಲಿ, ನಿರ್ದೇಶಕರ ಕಡೆಯಿಂದಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರಿಂದ ಮಾಹಿತಿ ಬಂದ್ಮೇಲೆ ನಾನು ಪ್ರತಿಕ್ರಿಯೆ ಕೊಡುತ್ತೇನೆ. ಅಲ್ಲಿಯವರೆಗೂ ಏನ್ನನ್ನೂ ಹೇಳಲು ಬಯಸುವುದಿಲ್ಲ’’ ಎಂದು ನಟ ಅನಿರುದ್ಧ ಜತ್ಕರ್ ‘ವಿಜಯ ಕರ್ನಾಟಕ ವೆಬ್‌’ಗೆ ತಿಳಿಸಿದರು.

ಕನ್ನಡ ಕಿರುತೆರೆಯಲ್ಲಿ ಹೊಸದಾದ ದಾಖಲೆ ಬರೆದ ಅನಿರುದ್ಧ್, ಮೇಘಾ ಶೆಟ್ಟಿ ನಟನೆಯ 'ಜೊತೆ ಜೊತೆಯಲಿ' ಧಾರಾವಾಹಿ

ಬೇರೆ ಕಲಾವಿದನಿಗೆ ಹುಡುಕಾಟ
ಅನಿರುದ್ಧ ಜತ್ಕರ್ ಅವರನ್ನು ಬಿಟ್ಟು ‘ಜೊತೆ ಜೊತೆಯಲಿ’ ಸೀರಿಯಲ್ ಶೂಟಿಂಗ್ ಅನ್ನು ಮುಂದುವರೆಸಲಾಗಿದ್ಯಂತೆ. ಅನಿರುದ್ಧ ಜತ್ಕರ್ ಅವರ ಜಾಗಕ್ಕೆ ಬೇರೆಯವರನ್ನು ಕರೆತರುವ ಪ್ರಯತ್ನ ನಡೆಯುತ್ತಿದ್ಯಂತೆ ಎಂಬ ಅಂತೆ-ಕಂತೆಯೂ ಕೇಳಿಬರುತ್ತಿದೆ.

ಸಂಧಾನ ಸಾಧ್ಯವೇ?
ನಿರ್ದೇಶಕ ಆರೂರು ಜಗದೀಶ್ ಹಾಗೂ ಅನಿರುದ್ಧ್ ಜತ್ಕರ್ ಮಧ್ಯೆ ಸಂಧಾನ ನಡೆಯುತ್ತಾ? ಅನಿರುದ್ಧ್ ಜತ್ಕರ್ ಮತ್ತು ಆರೂರು ಜಗದೀಶ್ ಜೊತೆ ಜೊತೆಯಾಗಿ ‘ಜೊತೆ ಜೊತೆಯಲಿ’ ಸೀರಿಯಲ್‌ಅನ್ನು ಪೂರ್ಣಗೊಳಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Jothe Jotheyalli: ಹೊಸ ಮೈಲಿಗಲ್ಲು ತಲುಪಿದ ‘ಜೊತೆ ಜೊತೆಯಲಿ’: 700 ಸಂಚಿಕೆಗಳು ಸಂಪೂರ್ಣ!

‘ಜೊತೆ ಜೊತೆಯಲಿ’
‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ ಜತ್ಕರ್, ಅನು ಸಿರಿಮನೆ ಆಗಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದ್ದು, ಆರ್ಯವರ್ಧನ್ ಸೀಕ್ರೆಟ್ಸ್ ಬಯಲಾಗುತ್ತಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ