ಆ್ಯಪ್ನಗರ

ಶಾಶ್ವತವಾಗಿ ಪ್ರಸಾರ ನಿಲ್ಲಿಸಲಿದೆ ಕನ್ನಡದ ಜನಪ್ರಿಯ 'ಮೂರುಗಂಟು' ಧಾರಾವಾಹಿ!

ಲಾಕ್‌ಡೌನ್ ಟೈಮ್‌ನಲ್ಲಿ ಸಾಕಷ್ಟು ಧಾರಾವಾಹಿಗಳು ಅಂತ್ಯವಾಗಿವೆ. ಟಿಆರ್‌ಪಿ ಕಾರಣಕ್ಕೆ ಅರ್ಧಂಬರ್ಧವಾಗಿ ಕಥೆ ಮುಗಿಸಲಾಗಿತ್ತು. ಈಗ ಇನ್ನೊಂದು ಧಾರಾವಾಹಿ ಮುಕ್ತಾಯವಾಗುತ್ತಿದೆ. ಯಾವುದು ಆ ಧಾರಾವಾಹಿ? ಇಲ್ಲಿದೆ ಮಾಹಿತಿ

Authored byಟೀನಾ | Vijaya Karnataka Web 30 Oct 2020, 3:19 pm
ಕೊರೊನಾ ವೈರಸ್ ಬಂದಮೇಲೆ ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಕುಸಿಯಿತು. ಎಷ್ಟೋ ಜನರು ಉದ್ಯೋಗ ಕಳೆದುಕೊಂಡರು. ಇನ್ನೂ ಕೆಲವರಿಗೆ ಅರ್ಧಂಬರ್ಧ ಸಂಬಳ ಬರುವಂತಾಯಿತು. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಹಣ ಹಾಕಿ ಧಾರಾವಾಹಿ ಆರಂಭಿಸಲು ಸಾಧ್ಯವಾಗದ ಕಾರಣ ಹಿಂದಿಯ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರಸಾರ ಮಾಡಲಾಯ್ತು. ಇನ್ನು ಟಿಆರ್‌ಪಿ ಕಡಿಮೆ ಇತ್ತು ಎನ್ನುವ ಕಾರಣಕ್ಕೆ ಲಾಕ್‌ಡೌನ್ ಘೋಷಣೆಯಾದಮೇಲೆ ಲೆಕ್ಕ ಹಾಕಿ ಹೇಳಲು ಕಷ್ಟವಾಗುವಷ್ಟು ಸಂಖ್ಯೆಯಲ್ಲಿ ಅನೇಕ ಧಾರಾವಾಹಿಗಳು ಅಂತ್ಯವಾಗಿವೆ. ಈಗೀಗ ಹೊಸ ಹೊಸ ಧಾರಾವಾಹಿಗಳು ಆರಂಭವಾಗುತ್ತಿವೆ. ಈ ನಡುವೆ ಕಲರ್ಸ್ ಕನ್ನಡ ವಾಹಿನಿಯ 'ಮೂರುಗಂಟು' ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂದು ಹೇಳಲಾಗುತ್ತಿದೆ.
Vijaya Karnataka Web anirudh balaji samiksha starrer moorugantu serial will end soon
ಶಾಶ್ವತವಾಗಿ ಪ್ರಸಾರ ನಿಲ್ಲಿಸಲಿದೆ ಕನ್ನಡದ ಜನಪ್ರಿಯ 'ಮೂರುಗಂಟು' ಧಾರಾವಾಹಿ!


ಅಂತ್ಯಕ್ಕೆ ಬಂದ 'ಮೂರು ಗಂಟು' ಧಾರಾವಾಹಿ ಕಥೆ
ನವೆಂಬರ್ 15ರವರೆಗೆ 'ಮೂರುಗಂಟು' ಧಾರಾವಾಹಿ ಎಪಿಸೋಡ್‌ಗಳು ಪ್ರಸಾರವಾಗಲಿವೆ. ಈಗಾಗಲೇ ಧಾರಾವಾಹಿ ನೋಡುವವರಿಗೆ ಕಥೆ ಮುಕ್ತಾಯವಾಗುತ್ತಿದೆ ಎಂಬ ಸಣ್ಣ ಸಂದೇಹ ಬಂದೇ ಬಂದಿರುತ್ತದೆ. ಇಷ್ಟುದಿನ ಕಥೆಯನ್ನು ಎಳೆಯಲಾಗಿದ್ದು, ಈಗ ಬಹುಬೇಗ ಮುಕ್ತಾಯವಾಗುತ್ತಿದೆ. ಪಾವನಿ ತನ್ನನ್ನು ಪ್ರೀತಿ ಮಾಡುವ ವಿಚಾರ ವಿಕ್ರಮ್‌ಗೆ ಗೊತ್ತಾಗಿದೆ. ತನ್ನ ಅಕ್ಕ ಏನು ಎಂಬುದು ಕೂಡ ವಿಕ್ರಮ್‌ಗೆ ಗೊತ್ತಾಗಿದೆ. ಅಷ್ಟೇ ಅಲ್ಲದೆ ತಾನು ಪ್ರೀತಿಸುವ ಹುಡುಗಿ ಇಷ್ಟುದಿನ ನಾಟಕ ಮಾಡಿದ್ದಳು ಎಂಬುದು ಕೂಡ ವಿಕ್ರಮ್ ಅರಿವಿಗೆ ಬಂದಿದೆ.

ನೇಹಾ ಗೌಡ, ರಶ್ಮಿತಾ ಚೆಂಗಪ್ಪ ನಟನೆ
ಆಗಸ್ಟ್ ತಿಂಗಳಲ್ಲಿ ಈ ಸೀರಿಯಲ್ 100 ಎಪಿಸೋಡ್ ಪೂರೈಸಿತ್ತು. ಅನಿರುದ್ಧ ಬಾಲಾಜಿ, ಸಮೀಕ್ಷಾ, ಜ್ಯೋತಿ ರೈ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕೆಲ ದಿನಗಳಕಾಲ ಅತಿಥಿ ಕಲಾವಿದೆಯಾಗಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ನೇಹಾ ಗೌಡ ಕೂಡ ಈ ಧಾರಾವಾಹಿಯಲ್ಲಿ ನಟಿಸಿದ್ದರು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾರಿಕಾ ಪಾತ್ರ ಮಾಡಿದ್ದ ರಶ್ಮಿತಾ ಚೆಂಗಪ್ಪ ಕೂಡ ಈ ಸೀರಿಯಲ್ ತಂಡವನ್ನು ಕೆಲದಿನಗಳ ಹಿಂದೆ ಸೇರಿಕೊಂಡಿದ್ದರು.

Also Read-ಬೇರೆಯವರು ನಮ್ಮನ್ನು ಡಿಪ್ರೆಶನ್‌ನಿಂದ ಹೊರಗೆ ತರ್ತಾರೆ ಅನ್ನೋದು ಸುಳ್ಳು: ಗಟ್ಟಿಮೇಳ ನಟಿ ರಶ್ಮಿತಾ ಚೆಂಗಪ್ಪ!

ಸಮೀಕ್ಷಾ, ಅನಿರುದ್ಧ ನಟನೆಯ 'ಮೂರುಗಂಟು'

ಈ ಹಿಂದೆ 'ಮುರಳಿ ಮೀರಾ', 'ಸುಬ್ಬಲಕ್ಷ್ಮೀ ಸಂಸಾರ' ಧಾರಾವಾಹಿಯಲ್ಲಿ ಸಮೀಕ್ಷಾ ನಟಿಸಿದ್ದರು. 'ಎರಡು ಕನಸು' ಧಾರಾವಾಹಿ ನಂತರ ಅನಿರುದ್ಧ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರು. ಟಿಆರ್‌ಪಿ ಕಾರಣಕ್ಕೆ ಈ ಧಾರಾವಾಹಿ ಮುಕ್ತಾಯವಾಗುತ್ತಿದೆ. ಈ ಧಾರಾವಾಹಿ ಬದಲು ಚಂದನಾ ಅನಂತಕೃಷ್ಣ, ಯಶವಂತ್ ಅಭಿನಯದ 'ಹೂಮಳೆ' ಧಾರಾವಾಹಿ ಪ್ರಸಾರ ಆಗುವ ಸಾಧ್ಯತೆಯಿದೆ.

Also Read-'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ನೇಹಾ ಗೌಡ ಕೊಟ್ರು ಗುಡ್ ನ್ಯೂಸ್ !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ