ಆ್ಯಪ್ನಗರ

'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಈಗ ಖುಷಿಯೋ ಖುಷಿ! ಅದಕ್ಕೆ ಕಾರಣ ತುಂಬ ಸ್ಪೆಷಲ್‌!

ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ 'ಜೊತೆ ಜೊತೆಯಲಿ' ಧಾರಾವಾಹಿ ಈಗ ಒಂದು ಮೈಲಿಗಲ್ಲು ತಲುಪಿದೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ನಟ ಅನಿರುದ್ಧ. ಆ ಬಗ್ಗೆ ಇಲ್ಲಿದೆ ಮಾಹಿತಿ...

Vijaya Karnataka Web 29 Sep 2020, 4:28 pm
ಕನ್ನಡಿಗರ ಮೆಚ್ಚುಗೆ ಗಳಿಸಿರುವ 'ಜೊತೆ ಜೊತೆಯಲಿ' ಧಾರಾವಾಹಿ ಈಗ 250 ಸಂಚಿಕೆಗಳನ್ನು ಪೂರೈಸಿದೆ. ಇಂಥ ಮೈಲಿಗಲ್ಲು ತಲುಪಿದ್ದಕ್ಕೆ ಇಡೀ ತಂಡಕ್ಕೆ ಖುಷಿ ಇದೆ. ವಿಭಿನ್ನ ಕಥಾಹಂದರದ ಮೂಲಕ ವೀಕ್ಷಕರನ್ನು ಈ ಧಾರಾವಾಹಿ ಸೆಳೆದುಕೊಳ್ಳುತ್ತಿದೆ. 250 ಎಪಿಸೋಡ್‌ ಪೂರೈಸಿರುವುದಕ್ಕಾಗಿ ನಟ ಅನಿರುದ್ಧ ಸೋಶಿಯಲ್‌ ಮೀಡಿಯಾ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
Vijaya Karnataka Web ಜೊತೆ ಜೊತೆಯಲಿ ಅನಿರುದ್ಧ


'ಇಂದಿಗೆ 250 ಸಂಚಿಕೆಗಳ ಸಾರ್ಥಕ ಪಯಣದಲಿ.‌. ನಿಮ್ಮೊಂದಿಗೆ ಸದಾ ಜೊತೆಜೊತೆಯಲಿ.. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ.. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಮುಂದುವರೆಯುತ್ತಿರಲಿ.. ನಿಮ್ಮೊಡನೆ ನಮ್ಮೀ ಪಯಣ ಸಾಗಲಿ ಜೊತೆ ಜೊತೆಯಲಿ.. ನಿಮಗಾಗಿ ಅಂತರಾಳದ ಧನ್ಯವಾದಗಳನ್ನು ಅರ್ಪಿಸುವುದ ಬಿಟ್ಟು ಬೇರೇನನು‌ ನಾ ಹೇಳಲಿ.. ನಿಮ್ಮ ಈ ಪ್ರೀತಿಗೆ ನಾವೆಂದಿಗೂ ಸದಾ ಚಿರಋಣಿ ನಿಮಗೆ ತಿಳಿದಿರಲಿ..' ಎಂದು ಪ್ರಾಸಬದ್ಧವಾಗಿ ಪೋಸ್ಟ್ ಮಾಡಿದ್ದಾರೆ ಅನಿರುದ್ಧ.

ಸಿನಿಮಾದಲ್ಲಿ ಗುರುತಿಸಿಕೊಂಡ ಬಳಿಕ ಅನಿರುದ್ಧ ಅವರ ವೃತ್ತಿಜೀವನಕ್ಕೆ 'ಜೊತೆ ಜೊತೆಯಲಿ' ಸೀರಿಯಲ್‌ ಒಂದು ರೀತಿಯ ಸೆಕೆಂಡ್‌ ಇನ್ನಿಂಗ್ಸ್‌ ರೀತಿ ಬ್ರೇಕ್‌ ನೀಡಿದೆ. ಅವರು ನಿಭಾಯಿಸಿರುವ ಆರ್ಯವರ್ಧನ್‌ ಪಾತ್ರವಂತೂ ಮನೆಮಾತಾಗಿದೆ. ಅನಿರುದ್ಧಗೆ ಜೋಡಿಯಾಗಿ ನಟಿಸಿರುವ ಮೇಘಾ ಶೆಟ್ಟಿ ಅವರ ಜನಪ್ರಿಯತೆಯೂ ಹೆಚ್ಚಿದೆ. ಅವರಿಗೆ ಈಗ ಸಿನಿಮಾಗಳಿಂದಲೂ ಆಫರ್‌ ಬರುತ್ತಿದ್ದು, ಶೀಘ್ರದಲ್ಲೇ ಅವರು ನಟ 'ಗೋಲ್ಡನ್‌ ಸ್ಟಾರ್‌' ಗಣೇಶ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

also read: ಜೊತೆ ಜೊತೆಯಲಿ ಧಾರಾವಾಹಿ: ರಾಜನಂದಿನಿ ಸತ್ತ ಜಾಗದಲ್ಲೇ ಸಾಯುತ್ತಾನಾ ಆರ್ಯವರ್ಧನ್?

'ಜೊತೆ ಜೊತೆಯಲಿ' ಧಾರಾವಾಹಿ 250 ಸಂಚಿಕೆಗಳನ್ನು ಪೂರೈಸಿರುವುದು ಸಣ್ಣ ಮಾತೇನಲ್ಲ. ಯಾಕೆಂದರೆ, ಕೊರೊನಾ ವೈರಸ್‌ನಿಂದ ಉಂಟಾದ ಲಾಕ್‌ಡೌನ್‌ ಕಾರಣಕ್ಕಾಗಿ ಕೆಲವೇ ತಿಂಗಳ ಹಿಂದೆ ಎಲ್ಲ ಕಿರುತೆರೆ ಕಾರ್ಯಕ್ರಮಗಳ ಶೂಟಿಂಗ್‌ ನಿಂತು ಹೋಗಿತ್ತು. ಎಷ್ಟೋ ಸೀರಿಯಲ್‌ಗಳು ಶಾಶ್ವತವಾಗಿ ಪ್ರಸಾರ ನಿಲ್ಲಿಸಬೇಕಾಯಿತು. ಅದರ ನಡುವೆಯೂ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಮುಂದುವರಿದಿದ್ದು ಕೆಲವೇ ಕೆಲವು ಧಾರಾವಾಹಿಗಳು ಮಾತ್ರ. ಅವುಗಳಲ್ಲಿ 'ಜೊತೆ ಜೊತೆಯಲಿ' ಕೂಡ ಒಂದು. ಈಗ 250 ಸಂಚಿಕೆಗಳನ್ನು ಪೂರೈಸಿದ್ದಕ್ಕೆ ವೀಕ್ಷಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

also read: ಗೋಲ್ಡನ್ ಸ್ಟಾರ್ ಜೊತೆ 'ತ್ರಿಬಲ್ ರೈಡಿಂಗ್' ಹೊರಟ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ