ಆ್ಯಪ್ನಗರ

ಹಿಂದಿ ಭಾಷೆಗೆ ಡಬ್ ಆಗಲಿದೆ ಕನ್ನಡದ ಜನಪ್ರಿಯ ಧಾರಾವಾಹಿ ; ಯಾವುದು ಅದು?

ಹಿಂದಿ ಹಾಗೂ ಬೇರೆ ಭಾಷೆಯ ಸಿನಿಮಾ, ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗುತ್ತವೆ ಎಂಬ ಆರೋಪದ ಜೊತೆಯಲ್ಲೇ ಕನ್ನಡದ ಒಂದು ಸೀರಿಯಲ್ ಹಿಂದಿ ಭಾಷೆಗೆ ಡಬ್ ಆಗಲಿದೆಯಂತೆ. ಯಾವುದು ಆ ಧಾರಾವಾಹಿ? ಅದರಲ್ಲಿ ಯಾರು ಯಾರು? ಇದ್ದಾರೆ?

THE TIMES OF INDIA NEWS SERVICE 27 Sep 2020, 3:01 pm
ಹಿಂದಿ ಅಥವಾ ಬೇರೆ ಭಾಷೆಯ ಸಿನಿಮಾ, ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗುತ್ತಿದ್ದವು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಕನ್ನಡದ 'ಆತ್ಮ ಬಂಧನ' ಧಾರಾವಾಹಿ ಈಗ ಹಿಂದಿಗೆ ಡಬ್ ಆಗುತ್ತಿದೆ. ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ.
Vijaya Karnataka Web athma bandhana serial will dub to hindi language
ಹಿಂದಿ ಭಾಷೆಗೆ ಡಬ್ ಆಗಲಿದೆ ಕನ್ನಡದ ಜನಪ್ರಿಯ ಧಾರಾವಾಹಿ ; ಯಾವುದು ಅದು?


ಕನ್ನಡದಲ್ಲಿ ಈಗಾಗಲೇ ಅನೇಕ ಹಿಂದಿಯ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗಿದೆ, ಇನ್ನೂ ಕೂಡ ಈ ಕೆಲಸ ನಡೆಯುತ್ತಲಿದೆ. ಈ ಮಧ್ಯೆ ಹಾರರ್ ಸಸ್ಪೆನ್ಸ್ ಕಥೆಯುಳ್ಳ 'ಆತ್ಮ ಬಂಧನ' ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 'ಆತ್ಮ ಬಂಧನ' ಕನ್ನಡದಲ್ಲಿ ಪ್ರಸಾರವಾಗಿತ್ತು. ನಟ ಪ್ರಶಾಂತ್ ಭಾರದ್ವಾಜ್, ರಜನಿ, ಶಿವಾನಿ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಜಿಕೆ ಸತೀಶ್ ಕೃಷ್ಣನ್ ಈ ಸೀರಿಯಲ್ ನಿರ್ದೇಶನ ಮಾಡಿದ್ದರು.

5 ವರ್ಷದ ಮಗ ಚಿರು ರಸ್ತೆ ಅಪಘಾತದಲ್ಲಿ ತೀರಿಕೊಂಡಿರುತ್ತಾನೆ. ಅವನ ತಾಯಿ ಅವನಿಗಿಂತ ಜಾಸ್ತಿ ಅಕ್ಕ ಚೈತ್ರಾಳನ್ನು ಇಷ್ಟಪಡುತ್ತಿದ್ದಳು ಎಂದು ಆತ ನಂಬಿರುತ್ತಾನೆ. ಸಾಯುವವರೆಗೂ ಅವನಿಗೆ ಇದೇ ಯೋಚನೆಯಿರುತ್ತದೆ. ಕ್ಷಮೆ ಕೇಳು ಆರತಿ ಪ್ರತ್ಯೇಕ ಸ್ಥಳಕ್ಕೆ ಹೋದಾಗ ಕಥೆಯಲ್ಲಿ ನಿಜವಾದ ತಿರುವು ಸಿಗುತ್ತದೆ.

ಈ ಧಾರಾವಾಹಿಯಲ್ಲಿ ಬಳಸಿದ್ದ ಗ್ರಾಫಿಕ್‌ನ್ನು ಕನ್ನಡ ಕಿರುತೆರೆಯಲ್ಲಿ ಈ ಹಿಂದೆ ಎಲ್ಲಿಯೂ ಬಳಸಿರಲಿಲ್ಲವಂತೆ. ನಿರ್ದೇಶಕರ ಪ್ರಕಾರ ಈ ಧಾರಾವಾಹಿಯು ಪ್ರೇಕ್ಷಕರನ್ನು ಖುರ್ಚಿ ತುದಿಗೆ ತಂದು ಕೂರಿಸುತ್ತದೆಯಂತೆ. ಡ್ರಾಮಾ ಜ್ಯೂನಿಯರ್ ಸೀಸನ್ 2 ಸ್ಪರ್ಧಿ ಮಾಸ್ಟರ್ ಅನುಪ್ ಚಿರು ಪಾತ್ರವನ್ನು ನಿಭಾಯಿಸಿದ್ದನು. ಶಿವಾನಿಯು ಚೈತ್ರಾ ಪಾತ್ರ ಮಾಡಿದ್ದಳು. ಲಕ್ಷ್ಮೀ ಗೌಡ, ಸುರೇಶ್ ರೈ, ರಾಮಮೂರ್ತಿ, ರಾಜೇಶ್, ನೇತ್ಯಾ ಸಿಂಧ್ಯ, ಸುನೇತ್ರಾ ಪಂಡಿತ್ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಜೀ ಕನ್ನಡದಲ್ಲಿ ಈ ಸೀರಿಯಲ್ ಪ್ರಸಾರವಾಗುತ್ತಿತ್ತು.

Also Read-ಜೀ ಕನ್ನಡದಲ್ಲಿ ಆತ್ಮಬಂಧನ

ನಟಿ ರಜನಿ ಈ ಧಾರಾವಾಹಿಗೂ ಮುನ್ನ ಅಡುಗೆ ಶೋವೊಂದರ ನಿರೂಪಣೆ ಮಾಡುತ್ತಿದ್ದರು. ನಟ ಪ್ರಶಾಂತ್ ಭಾರದ್ವಾಜ್ ಈ ಸೀರಿಯಲ್ ನಂತರದಲ್ಲಿ 'ಯಜಮಾನಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಶಿವಾನಿ ಪ್ರಸ್ತುತ 'ಮುದ್ದುಲಕ್ಷ್ಮೀ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ