ಆ್ಯಪ್ನಗರ

ಇಂಗ್ಲೆಂಡ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದ 'ಅವಳು'

ವಿಭಿನ್ನ ಕಥಾಹಂದರವನ್ನು ಹೊಂದಿರುವ 'ಅವಳು' ಧಾರಾವಾಹಿ ಈಗಾಗಲೇ ಸಾಕಷ್ಟು ಜನ ಮೆಚ್ಚುಗೆ ಪಡೆದಿದೆ. ಈಗ ಮತ್ತೊಂದು ವಿಭಿನ್ನ ಪ್ರಯತ್ನದಲ್ಲಿ ಈ ತಂಡ ಮತ್ತೆ ಸುದ್ದಿಯಾಗಿದೆ.

Vijaya Karnataka Web 21 Nov 2017, 5:34 pm
ವಿಭಿನ್ನ ಕಥಾಹಂದರವನ್ನು ಹೊಂದಿರುವ 'ಅವಳು' ಧಾರಾವಾಹಿ ಈಗಾಗಲೇ ಸಾಕಷ್ಟು ಜನ ಮೆಚ್ಚುಗೆ ಪಡೆದಿದೆ. ಈಗ ಮತ್ತೊಂದು ವಿಭಿನ್ನ ಪ್ರಯತ್ನದಲ್ಲಿ ಈ ತಂಡ ಮತ್ತೆ ಸುದ್ದಿಯಾಗಿದೆ. ಅದೇನೆಂದರೆ ಕಥೆಯ ಭಾಗವಾಗಿ 'ಅವಳು' ತಂಡ ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಇಂಗ್ಲೆಂಡ್‍ನಲ್ಲಿ ಚಿತ್ರೀಕರಣ ಮುಗಿಸಿ ಬಂದಿದ್ದು, ಈಗ ಅಲ್ಲಿನ ರಮಣೀಯ ಸ್ಥಳಗಳ ರುಚಿಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.
Vijaya Karnataka Web avalu kannada serial shoot in england
ಇಂಗ್ಲೆಂಡ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದ 'ಅವಳು'


ತಂಗಿಯ ಹಿತಕ್ಕಾಗಿ ತನಗಿಂತ ವಯಸ್ಸಿನಲ್ಲಿ ಹೆಚ್ಚು ಅಂತರವಿರೋ ಮಧುಸೂದನನ್ನು ನಾಯಕಿ ಮಾನಸಾ ಮದುವೆಯಾಗುತ್ತಾಳೆ. ಆದರೆ ವಿಧಿಲಿಖಿತ ಬೇರೆನೇ ಅನ್ನೋ ಹಾಗೇ ಮಾನಸಾಳ ತಂಗಿಯ ಗಂಡನೇ ತನ್ನ ಕಳೆದುಹೋಗಿರೋ ಮಗ ಸಿದ್ದಾರ್ಥನೆಂದು ಮಧುಸೂದನನಿಗೆ ಗೊತ್ತಾಗುತ್ತದೆ. ಸಂಬಂಧಗಳ ಗೋಜಲುಗಳ ಮಧ್ಯೆ ಸಿಲುಕಿರುವ ಮಧು ಇವನ್ನೆಲ್ಲಾ ಯಾರಿಗೂ ಹೇಳದೇ ಪರೋಕ್ಷವಾಗಿ ಸಿದ್ದಾರ್ಥ ಮತ್ತು ಶ್ವೇತಾಳನ್ನ ತನ್ನ ಮನೆಗೆ ಕರೆದುಕೊಂಡು ಬರುತ್ತಾನೆ. ಹೀಗೆ ಗೊತ್ತಿಲ್ಲದೇ ಅಕ್ಕ ತಂಗಿ ಒಂದೇ ಮನೆಗೆ ಅತ್ತೆ ಸೊಸೆಯಾಗಿ ಬಂದಿರುತ್ತಾರೆ. ಆದರೆ ಕಂಪೆನಿಯ ಒತ್ತಡದಲ್ಲಿ ಮಧು ಇಂಗ್ಲೆಂಡ್‍ಗೆ ಹೋಗಬೇಕಾಗಿ ಬರುತ್ತದೆ.

ಇವನಿಲ್ಲದ ಸಮಯದಲ್ಲಿ ಅಕ್ಕ ತಂಗಿಯ ನಡುವೆ ಒಡಕು ಮೂಡುವಂತೆ ಮಯೂರಿ ಸನ್ನಿವೇಶ ಸೃಷ್ಟಿಮಾಡುತ್ತಾಳೆ. ಈ ರೀತಿ ಕಥೆಯು ಕುತೂಹಲವನ್ನು ತೆರೆದಿಡುತ್ತಾ ಸಾಗುತ್ತದೆ. ಕಥೆಯ ಬೇಡಿಕೆಗೆ ತಕ್ಕಂತೆ ಇಂಗ್ಲೆಂಡಿನಲ್ಲಿ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮನಗೆಲ್ಲುವುದು ಖಚಿತವೆಂಬ ಆತ್ಮವಿಶ್ವಾಸದಲ್ಲಿದ್ದಾರೆ ಛಾಯಾಗ್ರಾಹಕ, ನಿರ್ದೇಶಕ ನಾಗರಾಜ ಉಪ್ಪುಂದ ಮತ್ತು ನಿರ್ಮಾಪಕ ಗುರುರಾಜ್ ಕುಲಕರ್ಣಿ.

ಇಂಗ್ಲೆಂಡಿನ ಜನರ ಜೀವನ ಶೈಲಿಯ ಅನುಸಾರವಾಗಿ ತೊಟ್ಟ ಉಡುಗೆಗಳು ಮತ್ತು ಈ ಹೊಸ ಅನುಭವದ ಬಗ್ಗೆ ಮೆಲುಕು ಹಾಕುತ್ತ ಅವಳು ತಂಡಕ್ಕೆ ಧನ್ಯವಾದ ತಿಳಿಸಲು ಮರೆಯಲ್ಲ ಅಂತಿದ್ದಾರೆ ನಟ, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರು. ಈ ಹೊಸ ಪ್ರಯತ್ನದ ಹೊಸ ಸ್ವಾದ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ