ಈಚೆಗಷ್ಟೇ ಬೆಂಗಾಲಿ ನಟಿ ಪಲ್ಲವಿ ಡೇ ನಿಧನರಾಗಿದ್ದರು. ಆ ನೋವಿನಿಂದ ಹೊರಬರುವ ಮುನ್ನವೇ ಬೆಂಗಾಲಿ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರುಆಗಿದೆ. ರೂಪದರ್ಶಿ, ನಟಿ ವಿದಿಶಾ ಡೇ ಮಜುಮ್ದಾರ್ ಅವರ ಮೃತದೇಹ ಫ್ಲ್ಯಾಟ್ನಲ್ಲಿ ಪತ್ತೆಯಾಗಿದೆ. ಡಂಡಂನಲ್ಲಿರುವ ಫ್ಲ್ಯಾಟ್ನಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿದಿಶಾ ಅವರ ಮೃತದೇಹ ಪತ್ತೆಯಾಗಿದೆ. ವಿದಿಶಾಗೆ 21 ವರ್ಷ ವಯಸ್ಸಾಗಿತ್ತು. ಬುಧವಾರ (ಮೇ 25) ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಈವರೆಗೂ ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಸದ್ಯ ಪ್ರಾಥಮಿಕ ತನಿಖೆ ಆರಂಭಿಸಿರುವ ಪೊಲೀಸರು, ವಿದಿಶಾ ಅವರ ಆಪ್ತ ಸ್ನೇಹಿತರು, ಪೋಷಕರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಇದು ಆತ್ಮಹತ್ಯೆ ಆಗಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ರೂಪದರ್ಶಿ ಆಗಿದ್ದ ವಿದಿಶಾ ಡೇ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದರು. ಅನಿರ್ಬೇದ್ ಚಟ್ಟೋಪಾಧ್ಯಯ ನಿರ್ದೇಶನದ 'ಭಾರ್- ದಿ ಕ್ಲೌನ್' ಎಂಬ ಕಿರುಚಿತ್ರದಲ್ಲಿ ವಿದಿಶಾ ನಟಿಸಿದ್ದರು. ಅದರಲ್ಲಿ ಜನಪ್ರಿಯ ನಟ ದೇವರಾಜ್ ಮುಖರ್ಜಿ ಮುಖ್ಯ ಪಾತ್ರ ಮಾಡಿದ್ದರು. ಇನ್ನು, ಘಟನೆ ನಡೆದ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಅನುಭವ್ ಬೇರ ಎಂಬುವರ ವಿದಿಶಾ ರಿಲೇಷನ್ಶಿಪ್ನಲ್ಲಿ ಇದ್ದರು. ರಿಲೇಷನ್ಶಿಪ್ನಲ್ಲಿನ ಕೆಲವು ಸಮಸ್ಯೆಗಳಿಂದ ವಿದಿಶಾ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಇನ್ನು ವಿದಿಶಾ ಸಾವಿಗೆ ನಟ ಸುಮನ್ ಡೇ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. 'ಇದು ನಿಜಕ್ಕೂ ಆಘಾತಕಾರಿ ಮತ್ತು ದುಃಖದ ವಿಚಾರವಾಗಿದೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಬಂದಿದೆ. ಅದರಿಂದಾಗುವ ಪರಿಣಾಮಗಳ ಕುರಿತು ಮಾತನಾಡಬೇಕಿದೆ. ನನ್ನ ಜೀವನದಲ್ಲಿ ನಾನು ಬಹಳಷ್ಟು ನೋಡಿದ್ದೇನೆ ಮತ್ತು ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಹಾಗಾಗಿಯೇ ನಾನು ಈಗಿನ ಹೊಸ ಕಲಾವಿದರನ್ನು ಕಂಡಾಗ, ತಾಳ್ಮೆಯಿಂದ ಇರಲು ಮತ್ತು ಯಾವುದರಿಂದಲೂ ಒತ್ತಡಕ್ಕೆ ಒಳಗಾಗದಂತೆ ಬದುಕಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಏನಾದರೂ ಸಮಸ್ಯೆಗಳಿದ್ದರೆ, ಅದನ್ನು ಉತ್ತಮ ಸ್ನೇಹಿತರು, ಒಡಹುಟ್ಟಿದವರು ಅಥವಾ ಪೋಷಕರೊಂದಿಗೆ ಹಂಚಿಕೊಳ್ಳಿ. ನಾನು ಯಾವಾಗಲೂ ಇದನ್ನೇ ಅನುಸರಿಸುತ್ತೇನೆ' ಎಂದು ಹೇಳಿದ್ದಾರೆ.
ಪಲ್ಲವಿ ಡೇ ನಿಧನ
ಬೆಂಗಾಲಿ ಧಾರಾವಾಹಿಗಳಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪಲ್ಲವಿ ಡೇ ಮೃತದೇಹವು ಈಚೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಪಲ್ಲವಿ ಕುಟುಂಬಸ್ಥರು, 'ನಮ್ಮ ಮಗಳು ಪಲ್ಲವಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಈ ಸಾವಿನ ಹಿಂದೆ ಯಾರದೋ ಕೈವಾಡ ಇದೆ' ಎಂದು ಆರೋಪ ಮಾಡಿದ್ದರು.
ರೂಪದರ್ಶಿ ಆಗಿದ್ದ ವಿದಿಶಾ ಡೇ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದರು. ಅನಿರ್ಬೇದ್ ಚಟ್ಟೋಪಾಧ್ಯಯ ನಿರ್ದೇಶನದ 'ಭಾರ್- ದಿ ಕ್ಲೌನ್' ಎಂಬ ಕಿರುಚಿತ್ರದಲ್ಲಿ ವಿದಿಶಾ ನಟಿಸಿದ್ದರು. ಅದರಲ್ಲಿ ಜನಪ್ರಿಯ ನಟ ದೇವರಾಜ್ ಮುಖರ್ಜಿ ಮುಖ್ಯ ಪಾತ್ರ ಮಾಡಿದ್ದರು. ಇನ್ನು, ಘಟನೆ ನಡೆದ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಅನುಭವ್ ಬೇರ ಎಂಬುವರ ವಿದಿಶಾ ರಿಲೇಷನ್ಶಿಪ್ನಲ್ಲಿ ಇದ್ದರು. ರಿಲೇಷನ್ಶಿಪ್ನಲ್ಲಿನ ಕೆಲವು ಸಮಸ್ಯೆಗಳಿಂದ ವಿದಿಶಾ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಇನ್ನು ವಿದಿಶಾ ಸಾವಿಗೆ ನಟ ಸುಮನ್ ಡೇ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. 'ಇದು ನಿಜಕ್ಕೂ ಆಘಾತಕಾರಿ ಮತ್ತು ದುಃಖದ ವಿಚಾರವಾಗಿದೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಬಂದಿದೆ. ಅದರಿಂದಾಗುವ ಪರಿಣಾಮಗಳ ಕುರಿತು ಮಾತನಾಡಬೇಕಿದೆ. ನನ್ನ ಜೀವನದಲ್ಲಿ ನಾನು ಬಹಳಷ್ಟು ನೋಡಿದ್ದೇನೆ ಮತ್ತು ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಹಾಗಾಗಿಯೇ ನಾನು ಈಗಿನ ಹೊಸ ಕಲಾವಿದರನ್ನು ಕಂಡಾಗ, ತಾಳ್ಮೆಯಿಂದ ಇರಲು ಮತ್ತು ಯಾವುದರಿಂದಲೂ ಒತ್ತಡಕ್ಕೆ ಒಳಗಾಗದಂತೆ ಬದುಕಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಏನಾದರೂ ಸಮಸ್ಯೆಗಳಿದ್ದರೆ, ಅದನ್ನು ಉತ್ತಮ ಸ್ನೇಹಿತರು, ಒಡಹುಟ್ಟಿದವರು ಅಥವಾ ಪೋಷಕರೊಂದಿಗೆ ಹಂಚಿಕೊಳ್ಳಿ. ನಾನು ಯಾವಾಗಲೂ ಇದನ್ನೇ ಅನುಸರಿಸುತ್ತೇನೆ' ಎಂದು ಹೇಳಿದ್ದಾರೆ.
ಪಲ್ಲವಿ ಡೇ ನಿಧನ
ಬೆಂಗಾಲಿ ಧಾರಾವಾಹಿಗಳಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪಲ್ಲವಿ ಡೇ ಮೃತದೇಹವು ಈಚೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಪಲ್ಲವಿ ಕುಟುಂಬಸ್ಥರು, 'ನಮ್ಮ ಮಗಳು ಪಲ್ಲವಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಈ ಸಾವಿನ ಹಿಂದೆ ಯಾರದೋ ಕೈವಾಡ ಇದೆ' ಎಂದು ಆರೋಪ ಮಾಡಿದ್ದರು.