Please enable javascript.Kannada Serial Written Update 2023 February 27 Episode 102 keerthi want to marry vaishnav - 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೀರ್ತಿ ಮುಖವಾಡ ಕಳಚಿ ಬಿತ್ತು, ಇನ್ಮುಂದೆ ನಡೆಯೋದೇ ಬೇರೆ

Bhagyalakshmi: 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೀರ್ತಿ ಮುಖವಾಡ ಕಳಚಿ ಬಿತ್ತು, ಇನ್ಮುಂದೆ ನಡೆಯೋದೇ ಬೇರೆ

Authored byಪದ್ಮಶ್ರೀ ಭಟ್ | Vijaya Karnataka Web 28 Feb 2023, 1:52 pm
Subscribe

Bhagyalakshmi Serial: 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೀರ್ತಿ ನನ್ನನ್ನು ಈಗಲೂ ಇಷ್ಟಪಡ್ತಿದ್ದಾಳೆ. ನಾನು ಹೇಗಾದರೂ ಮಾಡಿ ಕೀರ್ತಿಯನ್ನು ಒಪ್ಪಿಸಿ ಮದುವೆಯಾಗ್ತೀನಿ ಅಂತ ವೈಷ್ಣವ್ ಆಸೆ ಇಟ್ಟುಕೊಂಡಿದ್ದಾನೆ. ಆದರೆ ಕೀರ್ತಿ ಮನಸ್ಸಿನಲ್ಲಿ ಏನಿದೆ? ಕೀರ್ತಿ ಪ್ಲ್ಯಾನ್ ಏನು ಎನ್ನೋದು ಇಲ್ಲಿ ಯಾರಿಗೂ ಗೊತ್ತಿಲ್ಲ. ಆದರೆ ಸುಪ್ರೀತಾ ಬಳಿ ಕೀರ್ತಿ ತನ್ನ ಹತಾಷೆ, ಹಠವನ್ನು ಹೊರಗಡೆ ಹಾಕಿದ್ದಾಳೆ. ಒಟ್ಟಿನಲ್ಲಿ ವೈಷ್ಣವ್ ಮದುವೆ ಯಾರ ಜೊತೆ ಆಗಲಿದೆ ಎಂದು ಕಾದು ನೋಡಬೇಕಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿ ಇದೆ, ಓದಿ.

ಹೈಲೈಟ್ಸ್‌:

  • 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ವೈಷ್ಣವ್ ತಾಳಿ ಕಟ್ಟೋದು ಯಾರಿಗೆ?
  • ವೈಷ್ಣವ್ ಮದುವೆ ವಿಚಾರದಲ್ಲಿ ಕೀರ್ತಿ ಪ್ಲ್ಯಾನ್ ಏನು?
  • ಮುಖವಾಡವನ್ನು ಬಿಚ್ಚಿಡುತ್ತಾಳಾ ಕೀರ್ತಿ?

bhagyalakshmi serial
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ( Bhagyalakshmi Serial ) ವೈಷ್ಣವ್ ಹಣೆಯಲ್ಲಿ ಲಕ್ಷ್ಮೀ ಹೆಸರು ಇದೆಯೋ ಅಥವಾ ಕೀರ್ತಿ ಹೆಸರಿದೆಯೋ ಎಂದು ತಿಳಿಯದಾಗಿದೆ. ಒಟ್ಟಿನಲ್ಲಿ ವೈಷ್ಣವ್ ಬದುಕು ಕಗ್ಗಂಟಾಗಿದೆ. ಲಕ್ಷ್ಮೀ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ವೈಷ್ಣವ್ ಅಂದುಕೊಂಡಿದ್ದರೆ, ವೈಷ್ಣವ್ ತನ್ನನ್ನು ಒಪ್ಪಿಕೊಂಡಿದ್ದಾನೆ ಎಂದು ಲಕ್ಷ್ಮೀ ಎಂದುಕೊಂಡಿದ್ದಾಳೆ. ಆದರೆ ಕೀರ್ತಿ ಮನಸ್ಸಿನಲ್ಲಿ ಏನಿದೆ?

ಕೀರ್ತಿ ಮದುವೆಯಾಗ್ತೀನಿ ಎಂದ ವೈಷ್ಣವ್

ಹೇಗಾದರೂ ಮಾಡಿ ಕೀರ್ತಿಯನ್ನು ಒಪ್ಪಿಸ್ತೀನಿ, ಅವಳನ್ನೇ ಮದುವೆ ಆಗ್ತೀನಿ ಅಂತ ವೈಷ್ಣವ್ ಬಹಳ ಆಸೆ ಇಟ್ಟುಕೊಂಡಿದ್ದಾನೆ. ಕೀರ್ತಿ ಈ ಮದುವೆಗೆ ಒಪ್ಪಿಲ್ಲ ಅಂದ್ರೆ ಕಾವೇರಿ ಮಾತ್ರ ಅವಳ ಮನೆಗೆ ಲಕ್ಷ್ಮೀಯನ್ನೇ ಸೊಸೆ ಮಾಡಿಕೊಳ್ಳೋದು ಗ್ಯಾರಂಟಿ.
ಭಾಗ್ಯಾಗೆ ಲಡ್ಡು ( ಲಕ್ಷ್ಮೀ ) ಮದುವೆ ಆಗ್ತಿದೆ ಎನ್ನೋದು ಖುಷಿ, ಇನ್ನೊಂದು ಕಡೆ ನನ್ನ ರೀತಿ ಅವಳ ಜೀವನ ಆಗಬಾರದು ಎನ್ನುವ ಆತಂಕ ಬೇರೆ. ವೈಷ್ಣವ್ ತನ್ನನ್ನು ಇಷ್ಟಪಡ್ತಿದ್ದಾನೆ, ಒಪ್ಪಿಕೊಂಡಿದ್ದಾನೆ ಅಂತ ಲಡ್ಡು ಅಂದುಕೊಂಡಿದ್ದಾಳೆ. ಆದರೆ ಅಸಲಿ ವಿಚಾರವೇ ಬೇರೆ.

ಕೀರ್ತಿ, ಲಕ್ಷ್ಮೀ.. ವೈಷ್ಣವ್ ಮದುವೆ ಯಾರ ಜೊತೆ?

ಮೋಸಗಾತಿ ಲಕ್ಷ್ಮೀ
ನಾನು ಪತ್ರದ ಮೂಲಕ ನನ್ನ ಮನಸ್ಸಿನಲ್ಲಿರೋದು ಕೀರ್ತಿ ಅಂತ ಲಕ್ಷ್ಮೀಗೆ ಹೇಳಿದರೂ ಕೂಡ, ಅವಳು ಮದುವೆಗೆ ರೆಡಿಯಾಗಿದ್ದಾಳೆ, ಖುಷಿ ಖುಷಿಯಿಂದ ಮದುವೆಗೆ ಒಪ್ಪಿದ್ದಾಳೆ ಎಂದು ವೈಷ್ಣವ್ ಅಂದುಕೊಂಡಿದ್ದಾನೆ. ನಾನು ಒಳ್ಳೆಯವಳು ಅಂದುಕೊಂಡಿದ್ದ ಮಹಾಲಕ್ಷ್ಮೀ ಈಗ ನನಗೆ ಮೋಸ ಮಾಡುತ್ತಿದ್ದಾಳೆ ಎಂದು ವೈಷ್ಣವ್ ಅಂದುಕೊಂಡಿದ್ದಾನೆ. ಒಟ್ಟಿನಲ್ಲಿ ವೈಷ್ಣವ್, ಲಕ್ಷ್ಮೀ ಮದುವೆಯಾದಮೇಲೆ ಕೂಡ ಈ ಗೊಂದಲ ಹಾಗೆ ಉಳಿದು ಇನ್ನೊಂದಿಷ್ಟು ಮನಸ್ತಾಪ ಉಂಟಾಗಬಹುದು.

ಕೀರ್ತಿ ಮನಸ್ಸಿನಲ್ಲಿ ಹೇಗಿದೆ?

ನನಗೆ ವೈಷ್ಣವ್ ಇಷ್ಟ ಇಲ್ಲ, ವೈಷ್ಣವ್ ಮನೆಯವರ ರೀತಿ ನನಗೆ ಬದುಕಲು ಇಷ್ಟ ಇಲ್ಲ ಅಂತ ಕೀರ್ತಿ, ವೈಷ್ಣವ್ ಜೊತೆಗಿನ ಮದುವೆಯನ್ನು ಮುರಿದುಕೊಂಡಳು. ಆದರೆ ವೈಷ್ಣವ್ ಮಾತ್ರ ಕೀರ್ತಿಯನ್ನು ಬಿಡಲು ರೆಡಿಯಿಲ್ಲ. ಆದರೆ ಕೀರ್ತಿ, ವೈಷ್ಣವ್-ಲಕ್ಷ್ಮೀ ಮದುವೆಯನ್ನು ಸಹಿಸ್ತಾಳಾ? ಇಲ್ಲ.

ಕಿಚ್ಚ ಸುದೀಪ್ ಜೊತೆ 'ಭಾಗ್ಯಲಕ್ಷ್ಮೀ' ಧಾರಾವಾಹಿ ನಟಿ ಭೂಮಿಕಾ ಭೇಟಿ, ಫೋಟೋ ನೋಡಿ

ಕೀರ್ತಿ ಮುಖವಾಡ ಬಿಚ್ಚೋದು ಯಾವಾಗ?

ವೈಷ್ಣವ್ ನನ್ನವನು, ಅವನನ್ನು ಯಾರಿಗೂ ಬಿಟ್ಟುಕೊಡೋದಿಲ್ಲ ಎಂದು ಕೀರ್ತಿ ಪ್ಲ್ಯಾನ್ ಹಾಕಿದ್ದಾಳೆ. ಇದು ಧಾರಾವಾಹಿಯ ಹೊಸ ಪ್ರೋಮೋದಲ್ಲಿ ಬಹಿರಂಗ ಆಗಿದೆ. ವೈಷ್ಣವ್ ಕೂಡ ಕೀರ್ತಿ ಬೇಕು ಅಂತಾನೆ, ಕೀರ್ತಿ ಕೂಡ ವೈಷ್ಣವ್ ಬೇಕು ಅಂತಾನೆ. ಆದರೆ ಈ ವಿಷಯವನ್ನು ಕೀರ್ತಿ ಯಾವಾಗ ಹೇಳುತ್ತಾಳೆ ಅಂತ ಕಾದು ನೋಡಬೇಕಿದೆ. ಕೀರ್ತಿ ಏನು ಪ್ಲ್ಯಾನ್ ಹಾಕಿದ್ದಾಳೆ ಅನ್ನೋದು ಚಿದಂಬರ ರಹಸ್ಯವಾಗಿದೆ.

ಕೀರ್ತಿ ನನ್ನನ್ನು ಈಗಲೂ ಪ್ರೀತಿಸ್ತಿದ್ದಾಳೆ ಅಂತ ವೈಷ್ಣವ್ ನಂಬಿಕೊಂಡು ಕೂತಿದ್ದಾಳೆ. ಆದರೆ ಪ್ರೀತಿ ಮಾಡ್ತಿದ್ದೀನಿ ಅಂತ ಕೀರ್ತಿ ಯಾಕೆ ಹೇಳೋಕೆ ರೆಡಿ ಇಲ್ಲ ಅನ್ನೋದನ್ನು ಅವಳು ಹೇಳಬೇಕಿದೆ.

ನೀವು ಏನಂತೀರಿ?

ಹಸೆಮಣೆ ಮೇಲೆ ಏನು ಡ್ರಾಮಾ ನಡೆಯತ್ತೆ? ಕೀರ್ತಿ-ವೈಷ್ಣವ್‌ನನ್ನು ಮದುವೆಯಾಗ್ತಾಳಾ? ಕಾವೇರಿ ಆಸೆಯಂತೆ ವೈಷ್ಣವ್-ಲಕ್ಷ್ಮೀ ಮದುವೆ ನಡೆಯತ್ತಾ? ನಿಮಗೆ ಏನು ಅನಿಸತ್ತೆ? ಕಾಮೆಂಟ್ ಮಾಡಿ.
ಪದ್ಮಶ್ರೀ ಭಟ್
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ