ಆ್ಯಪ್ನಗರ

Bhagyalakshmi Serial: 'ಭಾಗ್ಯಲಕ್ಷ್ಮೀ': ಗಟ್ಟಿ ಮಾತು ಆಡಿಯೇ ಬಿಟ್ಳು ಲಕ್ಷ್ಮೀ; ಖಡಕ್ ಮಾತು ಆಡಿದ ವೈಷ್ಣವ್

Today Bhagyalakshmi Kannada Serial Episode: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೊನೆಗೂ ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ನಡೆದಿದೆ. ವೈಷ್ಣವ್ ಮನೆಗೆ ಲಕ್ಷ್ಮೀ ಬಲಗಾಲಿಟ್ಟು ಬಂದಿದ್ದಾಳೆ. ಲಕ್ಷ್ಮೀ, ವೈಷ್ಣವ್ ಹೊಂದಾಣಿಕೆಯಿಂದ ಬದುಕಬೇಕು ಎಂದು ಫಿಕ್ಸ್ ಆಗಿದ್ದಾರೆ. ಆದರೆ ವೈಷ್ಣವ್ ಮನಸ್ಸಿನಲ್ಲಿರುವ ನೋವನ್ನು ಸುಪ್ರೀತಾ, ವಿಧಿ ಕೆಣಕುತ್ತಿದ್ದಾರೆ. ಇದು ವೈಷ್ಣವ್‌ಗೆ ಇನ್ನಷ್ಟು ಸಂಕಟ ನೀಡುತ್ತಿದೆ. ಇನ್ನೊಂದು ಕಡೆ ಲಕ್ಷ್ಮೀಗೆ ವೈಷ್ಣವ್ ಮನಸ್ಸಿನಲ್ಲಿರುವ ನೋವು ಅರ್ಥ ಆಗುತ್ತಿದೆ. ಪತಿಯ ಸಂಕಟವನ್ನು ಕಡಿಮೆ ಮಾಡಲು ಲಕ್ಷ್ಮೀ ಪ್ರಯತ್ನ ಮಾಡುತ್ತಿದ್ದಾರೆ.

Authored byಪದ್ಮಶ್ರೀ ಭಟ್ | Vijaya Karnataka Web 22 Mar 2023, 3:48 pm
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ( Bhagyalakshmi Kannada Serial ) ತ್ರಿಕೋನ ಪ್ರೇಮಕಥೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ಆದರೂ ಕೂಡ ಖುಷಿ ಇಲ್ಲದ ಹಾಗೆ ಆಗಿದೆ.
Vijaya Karnataka Web bhagyalakshmi serial


ಕಥೆ ಎಲ್ಲಿಯವರೆಗೆ ಬಂತು?

ತಾನು ಪ್ರೀತಿಸಿದ ಹುಡುಗಿ ಕೀರ್ತಿ ಮದುವೆಗೆ ಒಪ್ಪಿಲ್ಲ ಅಂತ ಮನೆಯವರು ಹುಡುಕಿದ ಲಕ್ಷ್ಮೀಯನ್ನು ವೈಷ್ಣವ್ ಮದುವೆಯಾಗಿದ್ದಾನೆ. ವೈಷ್ಣವ್ ಮನಸ್ಸಿನಲ್ಲಿ ಬೇರೆ ಹುಡುಗಿ ಇದ್ದಳು ಅಂತ ಲಕ್ಷ್ಮೀಗೆ ಗೊತ್ತಿದೆ. ಹೊಂದಾಣಿಕೆಯಿಂದ ಮದುವೆ ಆಗೋಣ ಅಂತ ಇವರಿಬ್ಬರು ಮದುವೆ ಆಗಿದ್ದಾರೆ. ಕಾವೇರಿಯು ಹೇಳಿದಳು ಅಂತ ಕೀರ್ತಿ ವೈಷ್ಣವ್‌ನನ್ನು ಮದುವೆ ಆಗಲ್ಲ ಎಂದಳು. ಇತ್ತ ಕಡೆ ವೈಷ್ಣವ್ ಸೋದರತ್ತೆ ಸುಪ್ರೀತಾ, ತಂಗಿ ವಿಧಿಗೆ ವೈಷ್ಣವ್-ಲಕ್ಷ್ಮೀ ಮದುವೆ ಆಗೋದು ಇಷ್ಟ ಇರಲಿಲ್ಲ. ಹೀಗಾಗಿ ಅವರು ವೈಷ್ಣವ್-ಲಕ್ಷ್ಮೀಯನ್ನು ದೂರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.

ಪಾತ್ರಧಾರಿಗಳು

ಹೀರೋ ವೈಷ್ಣವ್ ಪಾತ್ರಕ್ಕೆ ಶಮಂತ್ ಬ್ರೊ ಗೌಡ, ಕೀರ್ತಿ ಪಾತ್ರಕ್ಕೆ ತನ್ವಿ ರಾವ್, ನಾಯಕಿ ಲಕ್ಷ್ಮೀ ಪಾತ್ರಕ್ಕೆ ಭೂಮಿಕಾ ರಮೇಶ್, ವೈಷ್ಣವ್ ತಾಯಿ ಕಾವೇರಿ ಪಾತ್ರಕ್ಕೆ ಸುಷ್ಮಾ ನಾಣಯ್ಯ ಜೀವ ತುಂಬುತ್ತಿದ್ದಾರೆ.

ಭಾಗ್ಯಲಕ್ಷ್ಮೀ: ವೈಷ್ಣವ್-ಲಕ್ಷ್ಮೀ ಒಂದಾದ್ರೆ ಗುರ್ ಅಂತಾಳೆ ಕಾವೇರಿ ಅತ್ತೆ; ಲಡ್ಡು ಬದುಕಿನಲ್ಲಿ ಮುಂದೇನು ಕಾದಿದೆ?

ತಿರುಗೇಟು ಕೊಟ್ಟ ಲಕ್ಷ್ಮೀ

ವೈಷ್ಣವ್ ಮನಸ್ಸಿನಲ್ಲಿರೋದನ್ನು ಸುಪ್ರೀತಾ ಕೆಣಕುವ ಪ್ರಯತ್ನ ಮಾಡಿದ್ದಾಳೆ. ವೈಷ್ಣವ್-ಲಕ್ಷ್ಮೀ ಮೊದಲ ರಾತ್ರಿಗೆ ಕೀರ್ತಿ ಇಷ್ಟಪಟ್ಟ ರೀತಿಯಲ್ಲಿ ಸುಪ್ರೀತಾ, ವಿಧಿ ಸಿಂಗಾರ ಮಾಡಿದ್ದರು. ಇದು ವೈಷ್ಣವ್‌ಗೆ ಕೋಪ ತರಿಸಿದೆ. ಬೇರೆಯವರಿಗೆ ನೋವು ಕೊಟ್ಟು ತಮಾಷೆ ನೋಡುವ ಸುಪ್ರೀತಾಳಿಗೆ ಲಕ್ಷ್ಮೀ ತಿರುಗೇಟು ಕೊಟ್ಟಿದ್ದಾಳೆ.

ಖಡಕ್ ಆಗಿ ಉತ್ತರ ಕೊಟ್ಟ ವೈಷ್ಣವ್

ಮನಸ್ಸಿಗೆ ನೋವುಂಟು ಮಾಡುವ ಅನೇಕ ವಿಷಯಗಳು ಮುಂದೆ ಎದುರಾದಾಗ ಅದನ್ನು ಪ್ರಶ್ನೆ ಮಾಡೋದು ಬಿಟ್ಟು ಮುಂದಕ್ಕೆ ಹೋಗಬೇಕು ಎಂದು ವೈಷ್ಣವ್‌ಗೆ ಲಕ್ಷ್ಮೀ ತಿಳಿ ಹೇಳಿದ್ದಾಳೆ. ನನ್ನ ನೆಮ್ಮದಿಯನ್ನು ಕೆಡಿಸೋಕೆ ನೋಡಿದ್ರೆ ನಾನು ಇನ್ನೂ ಗಟ್ಟಿಯಾಗುವೆ ಅಂತ ಸುಪ್ರೀತಾಗೆ ವೈಷ್ಣವ್ ಖಡಕ್ ಆಗಿ ಉತ್ತರ ನೀಡಿದ್ದಾನೆ.

'ಭಾಗ್ಯಲಕ್ಷ್ಮೀ': ಧರ್ಮ ಸಂಕಟದಲ್ಲಿ ಲಕ್ಷ್ಮೀಯ ಅಕ್ಕಮ್ಮ; ಭಾಗ್ಯ ಬದುಕಲ್ಲಿ ವಿಧಿಯ ತಾಂಡವ

ವೈಷ್ಣವ್ ಪರ ಬ್ಯಾಟ್ ಬೀಸಿದ ಲಕ್ಷ್ಮೀ

ವೈಷ್ಣವ್ ಮನಸ್ಸಿನಲ್ಲಿ ಹಳೆ ಹುಡುಗಿ ಇನ್ನೂ ಜೀವಂತವಾಗಿರೋದು ಲಕ್ಷ್ಮೀಗೆ ಗೊತ್ತಿದೆ. ವೈಷ್ಣವ್ ಮರೆಯಬೇಕು ಎನ್ನೋದನ್ನೆಲ್ಲ ಸುಪ್ರೀತಾ, ವಿಧಿ ಬೇಕಂತಲೇ ನೆನಪು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ವೈಷ್ಣವ್ ಅಷ್ಟು ಬೇಗ ಪ್ರೀತಿಯನ್ನು ಮರೆಯೋಕೆ ಆಗೋದಿಲ್ಲ, ಮರೆತರೆ ಅದು ಪ್ರೀತಿಯಲ್ಲ ಅಂತ ಲಕ್ಷ್ಮೀಯೇ ವೈಷ್ಣವ್‌ ಪರವಾಗಿ ಸುಪ್ರೀತಾ ಮುಂದೆ ಬ್ಯಾಟ್ ಬೀಸಿದ್ದಾಳೆ.

ವೈಷ್ಣವ್ ಪ್ರೇಮ ಕಹಾನಿ ಲಕ್ಷ್ಮೀಗೆ ಗೊತ್ತಾಯ್ತು

ವೈಷ್ಣವ್ ಲವ್ ಸ್ಟೋರಿ ಬ್ರೇಕಪ್ ಆಗಿ ಎರಡು ವಾರ ಆಯ್ತು, ಅವರಿಗೆ ಹುಡುಗಿಯನ್ನು ಮರೆಯೋಕೆ ಬಿಡದೆ ನನ್ನ ಜೊತೆ ಮದುವೆ ಫಿಕ್ಸ್ ಮಾಡಿದ್ರು ಅಂತ ಲಕ್ಷ್ಮೀಗೆ ಗೊತ್ತಾಗಿದೆ. ಲಕ್ಷ್ಮೀಗೆ ವೈಷ್ಣವ್ ಮೇಲೆ ಪ್ರೀತಿ ಉಂಟಾಗಿದೆ, ವೈಷ್ಣವ್‌ಗೆ ಕೀರ್ತಿ ಮೇಲೆ ಲವ್ ಆಗಿತ್ತು. ಒಟ್ಟಿನಲ್ಲಿ ಈ ತ್ರಿಕೋನ ಪ್ರೇಮಕಥೆ ಯಾವ ರೂಪ ಪಡೆಯತ್ತೆ ಅಂತ ಕಾದು ನೋಡಬೇಕಿದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ