ಆ್ಯಪ್ನಗರ

Bhagyalakshmi Serial: ಹೊಸ ಟ್ವಿಸ್ಟ್ ಕೊಟ್ಟು ಭಾಗ್ಯಗೆ ಇನ್ನೊಂದು ಶಾಕ್ ಕೊಡಲು ಶ್ರೇಷ್ಠ ಸಂಚು, ಏನದು?

Bhagyalakshmi Kannada Tv Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಈಗ ಮನೆಯವರ ಮುಂದೆ ತಾಂಡವ್, ಶ್ರೇಷ್ಠ ಲವ್ ವಿಚಾರ ರಿವೀಲ್ ಆಗತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. ಈಗ ಈ ವಿಚಾರ ಎಲ್ಲರ ಎದುರು ಬಯಲಾದ್ರೆ ನನ್ನ ಅಕ್ಕ ಭಾಗ್ಯ ಸಂಸಾರ ಹಾಳಾಗತ್ತೆ ಅಂತ ಪೂಜಾ ತಲೆಕೆಡಿಸಿಕೊಂಡಿದ್ದಾಳೆ. ಗಂಡ ತಾಂಡವ್ ಹಾಕಿರುವ ಚಾಲೆಂಜ್‌ನಲ್ಲಿ ಭಾಗ್ಯ ಗೆಲ್ಲುತ್ತಾಳಾ? ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಸಂಕ್ಷಿಪ್ತ ಲೇಖನ ಓದಿ.

Authored byಪದ್ಮಶ್ರೀ ಭಟ್ | Vijaya Karnataka Web 25 Apr 2024, 11:57 pm

ಹೈಲೈಟ್ಸ್‌:

  • ತಾಂಡವ್, ಶ್ರೇಷ್ಠ ಲವ್ ವಿಚಾರ ಈಗ ಎಲ್ಲರ ಎದುರು ಬಯಲಾಗತ್ತಾ?
  • ಗಂಡ ಹಾಕಿರುವ ಸವಾಲಿನಲ್ಲಿ ಭಾಗ್ಯ ಗೆಲ್ಲುತ್ತಾಳಾ?
  • ತನ್ನ ಅಕ್ಕನ ಸಂಸಾರ ಹಾಳಾಗಬಾರದು ಅಂತ ಪೂಜಾ ಏನು ಮಾಡುತ್ತಾಳೆ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bhagyalakshmi serial
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಹೇಗೆ ಹಣ ಸಂಪಾದನೆ ಮಾಡೋದು? ಇಡೀ ಮನೆಗೆ ಖರ್ಚು ಮಾಡುವ ಹಣ, ಇಎಂಐಗಳಲ್ಲಿ ಅರ್ಧ ಹಣವನ್ನು ಭಾಗ್ಯ ಕೊಡಬೇಕು. ಅದಕ್ಕೋಸ್ಕರ 9ನೇ ಕ್ಲಾಸ್ ಓದಿರುವ ಭಾಗ್ಯ ಏನು ಮಾಡೋದು ಅಂತ ಒದ್ದಾಡುತ್ತಿದ್ದಾಳೆ. ಹೀಗಿರುವಾಗ ಶ್ರೇಷ್ಠ ಭಾಗ್ಯ ಕುಟುಂಬಕ್ಕೆ ಶಾಕ್ ಕೊಡಲು ರೆಡಿ ಆಗಿದ್ದಾಳೆ.


ಶ್ರೇಷ್ಠ ಹೊಸ ಪ್ಲ್ಯಾನ್ ಏನು?

ತಾಂಡವ್, ಶ್ರೇಷ್ಠ ಲವ್ ಮಾಡುತ್ತಿದ್ದಾರೆ. ಇವರಿಬ್ಬರ ಲವ್ ವಿಚಾರ ತಾಂಡವ್ ಮನೆಯವರಿಗೆ ಗೊತ್ತಿಲ್ಲ. ಆದರೆ ಭಾಗ್ಯ ತಂಗಿ ಪೂಜಾಗೆ ಈ ವಿಷಯ ಗೊತ್ತಿದೆ. ಅವಳು ತಾಂಡವ್‌ಗೆ ಬುದ್ಧಿ ಕಲಿಸಿ ತನ್ನ ಅಕ್ಕನ ಸಂಸಾರವನ್ನು ಉಳಿಸಬೇಕು ಅಂತ ಪ್ಲ್ಯಾನ್ ಮಾಡುತ್ತಿದ್ದಾಳೆ. ಇದರ ನಡುವೆ ಭಾಗ್ಯ ಜೊತೆ ಶ್ರೇಷ್ಠ ಏನೋ ಮಾತಾಡಬೇಕು ಅಂತ ಹೇಳುತ್ತಿದ್ದಾಳೆ.




ಶ್ರೇಷ್ಠ ಏನು ಮಾತಾಡ್ತಾಳೆ?

ವೈಷ್ಣವ್-ಲಕ್ಷ್ಮೀ ಮದುವೆ ಟೈಮ್‌ನಲ್ಲಿ ಭಾಗ್ಯಳ ಬಳಿ ಇದ್ದ ಹಣವನ್ನು ಪೂಜಾ ಕದ್ದು, ಮುಚ್ಚಿಟ್ಟಿದ್ದಳು. ಈ ಹಣವನ್ನು ಶ್ರೇಷ್ಠ ನೋಡಿ, ಅದನ್ನು ತನ್ನ ದುಡ್ಡು ಅಂತ ಭಾಗ್ಯಗೆ ಧನ ಸಹಾಯ ಮಾಡಿದ್ದಳು. ಈಗ ಭಾಗ್ಯ ಆರ್ಥಿಕ ಸಂಕಷ್ಟದಲ್ಲಿದ್ದಾಳೆ. ಅವಳಿಗೆ ಇನ್ನೊಂದಿಷ್ಟು ಸಮಸ್ಯೆ ಆಗಲಿ ಅಂತ ಈಗಲೇ ಭಾಗ್ಯ ಬಳಿ ಶ್ರೇಷ್ಠ ಹಣ ಕೇಳಬಹುದು. ಇದೇ ಟ್ವಿಸ್ಟ್ ಅಂತ ವೀಕ್ಷಕರು ಭಾವಿಸಿದ್ದಾರೆ.


Bhagyalakshmi Serial: ಫಸ್ಟ್‌ಟೈಮ್ ತಾಂಡವ್ ಚಾಲೆಂಜ್‌ನ್ನು ಭಾಗ್ಯ ಸೋಲ್ತಾಳಾ? ದಾರಿ ಸಿಗದೆ ಒದ್ದಾಡ್ತಿರೋ ಕುಸುಮಮ್ಮನ ಸೊಸೆ!

ಪೂಜಾ ಏನ್ ಮಾಡ್ತಾಳೆ?

ಶ್ರೇಷ್ಠ, ತಾಂಡವ್ ಲವ್ ವಿಚಾರ ಮನೆಯವರಿಗೆ ಗೊತ್ತಾದರೆ ನನ್ನ ಅಕ್ಕನ ಸಂಸಾರ ಹಾಳಾಗುತ್ತದೆ, ಅವಳ ಮನಸ್ಥಿತಿ ಹಾಳಾಗುತ್ತದೆ ಅಂತ ಪೂಜಾ ಭಾವಿಸಿದ್ದಾಳೆ. ಹೀಗಾಗಿ ಪೂಜಾ ಕೂಡ ಭಾಗ್ಯ ಸಂಸಾರ ಉಳಿಸಲು ಏನು ಬೇಕೋ ಅದನ್ನೆಲ್ಲ ಮಾಡುತ್ತಿದ್ದಾಳೆ.


Bhagyalakshmi Serial: ಸೊಕ್ಕು ತೋರಿಸಲು ಹೋಗಿ ತಾಂಡವ್ ಮುಚ್ಚಿಟ್ಟ ಸತ್ಯ ರಿವೀಲ್ ಆಯ್ತು; ಭಾಗ್ಯ ಏನ್ ಮಾಡ್ತಾಳೆ?

ಈ ಎಪಿಸೋಡ್‌ಗಳನ್ನು ನೋಡಿ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

  • ಮದ್ವೆ ಸಮಯದಲ್ಲಿ ಕೊಟ್ಟಿರೋ ದುಡ್ಡು ಕೇಳ್ತಾಳೆ ಅಷ್ಟೇ
  • ಇವರು ಎಲ್ಲ ಹೇಳಲ್ಲ, ಇದು ಇಲ್ಲಿಗೆ ಮುಗಿಯಲ್ಲ
  • ಕುಸುಮ ಅವರಿಗೆ ಸತ್ಯ ಗೊತ್ತಾಗ್ಬೇಕು. ಪೂಜಾ ನೀನೆ ಮೊದ್ಲು ಇರೋದನ್ನು ಹೇಳಿಬಿಡು.

ಭಾಗ್ಯ ಸಂಸಾರ ಈಗೇನು ನೆಟ್ಟಗೆ ಇದೆಯಾ? ಈ ಪೂಜಾಗೆ ಇರೊ ಸತ್ಯ ಹೇಳುದಕ್ಕೆ ಏನು ರೋಗ ? ಸೀರಿಯಲ್ ಅವರದ್ದು ಇದೊಂದು ಗೋಳು, ಗೊತ್ತಿರೋರು ಸತ್ಯ ಹೇಳಲ್ಲ, ಹೇಳುವವರಿಗೂ ಬಿಡಲ್ಲ ಇಂಥದೊಂದು ಎಲ್ಲ ಧಾರಾವಾಹಿಗಳಲ್ಲೂ ಇದ್ದೇ ಇರುತ್ತದೆ.



ಭಾಗ್ಯಗೆ ಇರುವ ಸವಾಲು ಏನು?

ಗಂಡ ಎಷ್ಟೇ ತೊಂದರೆ ಕೊಟ್ಟರೂ ಕೂಡ ಅವನ ಜೊತೆ ಸಂಸಾರ ಮಾಡಬೇಕು ಅಂತ ಭಾಗ್ಯ ಅಂದುಕೊಂಡಿದ್ದಾಳೆ. ತಾಂಡವ್‌ ಈಗ ಮನೆಗೆ ಖರ್ಚಾಗುವ ಹಣದಲ್ಲಿ ಅರ್ಧ ಪಾಲು ನೀನು ಕೊಡು ಅಂತ ಭಾಗ್ಯಗೆ ಹೇಳಿದ್ದಾನೆ. ಇದನ್ನೇ ಅವಳು ಸವಾಲಾಗಿ ತಗೊಂಡು ಸಂಪಾದನೆ ಮಾಡಲು ಶುರು ಮಾಡಲು ಯೋಜನೆ ಹಾಕುತ್ತಿದ್ದಾಳೆ. ಹಾಗಾದರೆ ಮುಂದೆ ಏನಾಗಬಹುದು?


ಪಾತ್ರಧಾರಿಗಳು

ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್, ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಪೂಜಾ ಪಾತ್ರದಲ್ಲಿ ಆಶಾ, ಶ್ರೇಷ್ಠ ಪಾತ್ರದಲ್ಲಿ ಕಾವ್ಯ ಗೌಡ ನಟಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ