ಆ್ಯಪ್ನಗರ

Bhagya Lakshmi: ವೈಷ್ಣವ್ - ಕೀರ್ತಿ ಬ್ರೇಕಪ್ ಆಗಲು ಒಂದೇ ಒಂದು ಸೀರೆ ಕಾರಣವಾಯ್ತಾ?

‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ ಹೊಸ ತಿರುವು ಸಿಕ್ಕಿದೆ. ವೈಷ್ಣವ್ - ಕೀರ್ತಿ ನಿಶ್ಚಿತಾರ್ಥ ಮುರಿದುಬೀಳೋಕೆ ಒಂದೇ ಒಂದು ಸೀರೆ ಕಾರಣವಾಯ್ತಾ? ಎಂಬ ಪ್ರಶ್ನೆ ಇದೀಗ ವೀಕ್ಷಕರ ತಲೆಯಲ್ಲಿ ಮೂಡಿದೆ.

Authored byಹರ್ಷಿತಾ ಎನ್ | Vijaya Karnataka Web 12 Jan 2023, 5:22 pm

ಹೈಲೈಟ್ಸ್‌:

  • ಕುತೂಹಲಕಾರಿ ಘಟ್ಟದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ
  • ವೈಷ್ಣವ್ - ಕೀರ್ತಿ ಎಂಗೇಜ್‌ಮೆಂಟ್ ಮುರಿದುಬೀಳೋಕೆ ಕಾರಣವೇನು?
  • ಒಂದೇ ಒಂದು ಸೀರೆಯಿಂದಾಗಿ ನಿಶ್ಚಿತಾರ್ಥ ಮುರಿದುಕೊಂಡ್ಲಾ ಕೀರ್ತಿ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bhagyalakshmi serial written update reason behind vaishnav and keerthi break up
Bhagya Lakshmi: ವೈಷ್ಣವ್ - ಕೀರ್ತಿ ಬ್ರೇಕಪ್ ಆಗಲು ಒಂದೇ ಒಂದು ಸೀರೆ ಕಾರಣವಾಯ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿಗಳ ಪೈಕಿ ‘ಭಾಗ್ಯಲಕ್ಷ್ಮೀ’ ಕೂಡ ಒಂದು. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ವೈಷ್ಣವ್ - ಕೀರ್ತಿ ನಿಶ್ಚಿತಾರ್ಥ ನಡೆಯೋದು ಕಾವೇರಿ, ಕುಸುಮಾಗೆ ಇಷ್ಟವಿರಲಿಲ್ಲ. ನಿಶ್ಚಿತಾರ್ಥ ಹೇಗಾದರೂ ನಿಲ್ಲಬೇಕು ಅಂತ ಕಾವೇರಿ, ಕುಸುಮಾ ಬಯಸಿದ್ದರು. ಅದರಂತೆ ‘’ನಿಶ್ಚಿತಾರ್ಥ ಬೇಡವೇ ಬೇಡ.. ವೈಷ್ಣವ್ ನನಗೆ ತಕ್ಕ ಹುಡುಗ ಅಲ್ಲ.. ವೈಷ್ಣವ್ ಜೊತೆ ನಾನು ಬ್ರೇಕಪ್ ಮಾಡಿಕೊಳ್ತೀನಿ’’ ಎಂದು ಕೀರ್ತಿ ಎಲ್ಲರ ಮುಂದೆ ಹೇಳಿದ್ದಳು.
ಕಾರಣ ಕೇಳಿದ ವೈಷ್ಣವ್
ದಿಢೀರ್ ಅಂತ ನಿಶ್ಚಿತಾರ್ಥ ಬೇಡ ಎಂದಿದ್ದು ಯಾಕೆ? ಏಕಾಏಕಿ ಬ್ರೇಕಪ್ ಮಾಡಿಕೊಳ್ಳಲು ಕಾರಣವೇನು? ಎಂದು ಕೀರ್ತಿಗೆ ವೈಷ್ಣವ್ ನೇರವಾಗಿ ಕೇಳಿದರು. ಮೊದಲು ಇದಕ್ಕೆ ಕೀರ್ತಿ ಉತ್ತರ ಕೊಟ್ಟಿರಲಿಲ್ಲ. ಅದಾದ್ಮೇಲೆ ಉದಾಹರಣೆ ಸಮೇತ ಉತ್ತರ ಕೊಡ್ತೀನಿ ಎಂದ ಕೀರ್ತಿ ಉದಾಹರಣೆಯಾಗಿ ತಂದಿದ್ದು ಸೀರೆಯನ್ನ..!

Bhagya Lakshmi: ಮುರಿದುಬಿದ್ದ ವೈಷ್ಣವ್ - ಕೀರ್ತಿ ನಿಶ್ಚಿತಾರ್ಥ!
ವೈಷ್ಣವ್ ಸೆಲೆಕ್ಟ್ ಮಾಡಿದ್ದ ಸೀರೆ..!
ಎಂಗೇಜ್‌ಮೆಂಟ್ ಶಾಪಿಂಗ್ ವೇಳೆ, ‘’ನಿಶ್ಚಿತಾರ್ಥಕ್ಕೆ ಸೀರೆಯುಟ್ಟುಕೋ’’ ಎಂದು ಕೀರ್ತಿಗೆ ವೈಷ್ಣವ್ ಹೇಳಿದ್ದರು. ಆದರೆ, ತಾನು ಲೆಹೆಂಗಾವನ್ನೇ ಹಾಕಿಕೊಳ್ಳೋದು ಎಂದು ಕೀರ್ತಿ ಹಠ ಹಿಡಿದಿದ್ದಳು. ಕೀರ್ತಿಗಾಗಿ ವೈಷ್ಣವ್ ಒಂದು ಸೀರೆಯನ್ನ ಸೆಲೆಕ್ಟ್ ಮಾಡಿದ್ದರು. ಆದರೆ, ಆ ಸೀರೆಯನ್ನ ಕೀರ್ತಿ ರಿಜೆಕ್ಟ್ ಮಾಡಿದ್ದಳು. ಇಂಟ್ರೆಸ್ಟಿಂಗ್ ಅಂದ್ರೆ, ಫ್ಯಾಮಿಲಿ ಜೊತೆ ವೈಷ್ಣವ್ ಶಾಪಿಂಗ್‌ಗೆ ಬಂದಾಗ ಕೀರ್ತಿಗಾಗಿ ಆತ ಸೆಲೆಕ್ಟ್ ಮಾಡಿದ್ದ ಸೀರೆಯನ್ನ ಕಾವೇರಿ ಕರೆಕ್ಟ್ ಆಗಿ ಗೆಸ್ ಮಾಡುತ್ತಾರೆ. ಅಮ್ಮ ಹಾಗೂ ಮಗನ ಟೇಸ್ಟ್ ಒಂದೇ ಎಂದು ಸಾಬೀತಾಗುತ್ತದೆ. ಹೀಗಾಗಿ, ಅದೇ ಸೀರೆಯನ್ನ ಕೀರ್ತಿಗೆ ಎಂಗೇಜ್‌ಮೆಂಟ್‌ಗೆಂದು ಗಿಫ್ಟ್ ಆಗಿ ಕೊಡಲು ವೈಷ್ಣವ್ ತೀರ್ಮಾನಿಸುತ್ತಾರೆ.

Bhagya Lakshmi: ದಿಢೀರ್ ಅಂತ ಕೀರ್ತಿಗೆ ಏನಾಯಿತು? ವೈಷ್ಣವ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ಯಾಕೆ?
ಚೀಟಿ ಬರೆದುಕೊಟ್ಟಿದ್ದ ವೈಷ್ಣವ್
ಎಂಗೇಜ್‌ಮೆಂಟ್ ವೆನ್ಯೂಗೆ ಬಂದ ಕೂಡಲೆ ಕೀರ್ತಿಗೆ ಸೀರೆ ತಲುಪಿಸಲು ವೈಷ್ಣವ್ ಮುಂದಾಗುತ್ತಾರೆ. ಆದರೆ, ಅಲ್ಲಿಗೆ ಕೀರ್ತಿ ಇನ್ನೂ ಬಂದಿರಲ್ಲ. ಹೀಗಾಗಿ, ಅದೇ ಸೀರೆಯನ್ನೇ ನಿಶ್ಚಿತಾರ್ಥಕ್ಕೆ ಉಡುವಂತೆ ಚೀಟಿಯಲ್ಲಿ ಬರೆದು ಕೀರ್ತಿಗೆ ವೈಷ್ಣವ್ ಸೂಚಿಸಿರುತ್ತಾರೆ.

ಅಸಲಿಗೆ, ಮೊದಲೇ ಲೆಹೆಂಗಾ ಧರಿಸಿ, ಮಂಗಳೂರು ಮಲ್ಲಿಗೆ ಕೊಂಡುಕೊಂಡು ಬಂದಿದ್ದ ಕೀರ್ತಿ.. ಎಂಗೇಜ್‌ಮೆಂಟ್ ವೆನ್ಯೂನಲ್ಲಿ ನೈಟ್‌ ಡ್ರೆಸ್‌ನಲ್ಲಿ ಪ್ರತ್ಯಕ್ಷವಾಗುತ್ತಾಳೆ. ದಿಢೀರನೇ ಕೀರ್ತಿಗೆ ಏನಾಯಿತು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ವೈಷ್ಣವ್ ಹಾಗೂ ತಂದೆ, ತಾಯಿಗೆ ಕೀರ್ತಿ ಕೊಟ್ಟ ಉದಾಹರಣೆ ಪ್ರಕಾರ.. ‘ಸೀರೆ’ಯೇ ಕಾರಣ..!

Bhagya Lakshmi: ಕೀರ್ತಿ ಜೊತೆ ವೈಷ್ಣವ್ ಎಂಗೇಜ್‌ಮೆಂಟ್ ಕ್ಯಾನ್ಸಲ್ ಆಗೋಯ್ತಾ?
‘’ಸೀರೆಯುಡಲ್ಲ.. ಲೆಹಂಗಾ ಧರಿಸೋದು ಅಂತ ಹೇಳಿದ್ದರೂ, ಮತ್ತೆ ಸೀರೆಯನ್ನೇ ತಂದಿದ್ದೀಯಾ. ನನ್ನ ಟೇಸ್ಟ್ ಬೇರೆ, ನಿನ್ನ ಟೇಸ್ಟ್ ಬೇರೆ. ನಾವಿಬ್ಬರು ಸರಿಯಾದ ಮ್ಯಾಚ್ ಅಲ್ಲ. ಇಂತಹ ಚಿಕ್ಕ ವಿಷಯಗಳೇ ಮುಂದೆ ದೊಡ್ಡ ಜಗಳಕ್ಕೆ ಕಾರಣವಾಗೋದು. ನನಗೆ ಈ ಮದುವೆ ಬೇಡ’’ ಎಂದು ವೈಷ್ಣವ್, ತಾಯಿ ಕಾವೇರಿ, ತಂದೆ ಕೃಷ್ಣಕಾಂತ್ ಮುಂದೆ ಕೀರ್ತಿ ಹೇಳ್ತಾಳೆ.

ಸಿಲ್ಲಿ ಕಾರಣ ಕೊಟ್ಟ ಕೀರ್ತಿ ಮೇಲೆ ಕೃಷ್ಣಕಾಂತ್ ಹೌಹಾರುತ್ತಾರೆ. ಕೀರ್ತಿ ಸೊಕ್ಕನ್ನ ಮುರಿಯಲು ವೈಷ್ಣವ್‌ಗೆ ಇನ್ನೊಂದು ಮದುವೆ ಮಾಡುವುದಾಗಿ ಕೃಷ್ಣಕಾಂತ್ ಚಾಲೆಂಜ್ ಮಾಡುತ್ತಾರೆ.

ಹಾಗಾದ್ರೆ, ವೈಷ್ಣವ್ - ಕೀರ್ತಿ ನಿಶ್ಚಿತಾರ್ಥ ಮುರಿದುಬೀಳೋಕೆ ಒಂದು ಸೀರೆ ಕಾರಣವಾಯ್ತಾ? ಅಥವಾ ಬೇರೆನಾದರೂ ಕಾರಣ ಇದ್ಯಾ? ಏನೇ ಆದರೂ ಕೀರ್ತಿ ಜಪವನ್ನ ವೈಷ್ಣವ್ ಇನ್ನೂ ನಿಲ್ಲಿಸಿಲ್ಲ. ಅಂದ್ಮೇಲೆ ವೈಷ್ಣವ್ - ಲಕ್ಷ್ಮೀ ಮದುವೆ ನಡೆಯೋದಾದರೂ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಅಂದ್ಹಾಗೆ, ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನಲ್ಲಿ ಕುಸುಮಾ ಆಗಿ ಪದ್ಮಜಾ ರಾವ್, ಕಾವೇರಿ ಆಗಿ ಸುಷ್ಮಾ ನಾಣಯ್ಯ, ವೈಷ್ಣವ್ ಆಗಿ ಶಮಂತ್ ಬ್ರೋ ಗೌಡ ಮುಂತಾದವರು ಅಭಿನಯಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ