ಆ್ಯಪ್ನಗರ

ಹೊಸ ವರ್ಷಕ್ಕೆ 'ಸ್ಪೆಷಲ್‌ ಗಿಫ್ಟ್' ನೀಡಿದ 'ರಾಧಾ ಕಲ್ಯಾಣ' ಖ್ಯಾತಿಯ ನಟಿ ಕೃತಿಕಾ ರವೀಂದ್ರ!

'ರಾಧಾ ಕಲ್ಯಾಣ' ಸೀರಿಯಲ್‌ ಮೂಲಕ ಯಶಸ್ಸು ಪಡೆದಿದ್ದ ನಟಿ ಕೃತಿಕಾ ರವೀಂದ್ರ ಈಚೆಗೆ 'ರಾಜನಿವಾಸ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಸದ್ಯ ಈ ಹೊಸ ವರ್ಷಕ್ಕೆ ಒಂದು ಗುಡ್ ನ್ಯೂಸ್ ಕೂಡ ನೀಡಿದ್ದಾರೆ ಅವರು. ಏನದು ಗುಡ್ ನ್ಯೂಸ್? ಇಲ್ಲಿದೆ ಮಾಹಿತಿ.

Vijaya Karnataka Web 3 Jan 2021, 2:27 pm
ಕಿರುತೆರೆಯ ಜನಪ್ರಿಯ ಧಾರಾವಾಹಿ 'ರಾಧಾ ಕಲ್ಯಾಣ' ಮೂಲಕ ಖ್ಯಾತಿ ಪಡೆದ ನಟಿ ಕೃತಿಕಾ ರವೀಂದ್ರ, ಆನಂತರ 'ಕೆಂಗುಲಾಬಿ' ಸಿನಿಮಾ ಮಾಡಿದ್ದರು. 'ಬಿಗ್ ಬಾಸ್' ಮನೆಗೂ ಹೋಗಿಬಂದು ಜನಪ್ರಿಯತೆ ಪಡೆದುಕೊಂಡಿದ್ದರು. ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರು, 2021ರ ಹೊಸ ವರ್ಷಕ್ಕೆ ಹೊಸದೊಂದು ಸ್ಪೆಷಲ್‌ ಗಿಫ್ಟ್‌ ನೀಡಿದ್ದಾರೆ. ಅಷ್ಟಕ್ಕೂ ಆ ಉಡುಗೊರೆ ಏನು ಎಂಬುದಕ್ಕೆ ಇಲ್ಲಿದೆ ಉತ್ತರ.
Vijaya Karnataka Web kruttika ravindra


ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡ ಕೃತಿಕಾ
ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ. 'ಒಲವೇ' ಎಂದು ಶೀರ್ಷಿಕೆ ಇರುವ ಈ ಹಾಡು ಸಿನಿಮಾ ಗುಣಮಟ್ಟದಲ್ಲಿ ಸಿದ್ಧಗೊಂಡಿರುವುದು ವಿಶೇಷ. ಕೃತಿಕಾ ರವೀಂದ್ರ ಇದರಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ವರುಣ್ ಹೆಗಡೆ ನಾಯಕರಾಗಿ ನಟಿಸಿದ್ದಾರೆ. ಯುವ ನಿರ್ದೇಶಕಿ ನಟಿ ಎಂ.ಎಸ್. ಶಿವಾನಿ ಪರಿಕಲ್ಪನೆಗೆ ಗಾಯನ, ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ. ಸುಚೇತನ್ ರಂಗಸ್ವಾಮಿ.

ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು, ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣವನ್ನು ಮಾಡಿದ್ದಾರೆ. 'ಕೆಜಿಎಫ್‌: ಚಾಪ್ಟರ್ 1' ಖ್ಯಾತಿಯ ಸಂಕಲನಕಾರ ಶ್ರೀಕಾಂತ್ ಈ ಹಾಡಿನ ವಿಡಿಯೋವನ್ನು ಎಡಿಟ್ ಮಾಡಿರುವುದು ಮತ್ತೊಂದು ವಿಶೇಷ. ಆನಂದ್ ಆಡಿಯೋ ಕಂಪನಿ ಈ ಗೀತೆಯನ್ನು ಜನವರಿ 3ರಂದು ರಿಲೀಸ್ ಮಾಡಿದೆ. ಸದ್ಯ ನೆಟ್ಟಿಗರಿಂದ ಹಾಡಿಗೆ ಉತ್ತಮ ಮೆಚ್ಚುಗೆ ಸಿಗುತ್ತಿದೆ.

5 ವರ್ಷಗಳಿಂದ ಯಾಕೆ ಧಾರಾವಾಹಿ ಮಾಡುತ್ತಿಲ್ಲ 'ರಾಧಾ ಕಲ್ಯಾಣ' ಸೀರಿಯಲ್ ನಟಿ ಕೃತಿಕಾ ರವೀಂದ್ರ?

ಹೊಸ ಸಿನಿಮಾ ಒಪ್ಪಿಕೊಂಡಿರುವ ಕೃತಿಕಾ
ಈ ಮಧ್ಯೆ ಕೃತಿಕಾ ಪುನಃ ಸಿನಿಮಾಗಳಲ್ಲೂ ಸಕ್ರಿಯರಾಗುತ್ತಿದ್ದಾರೆ. ಈಚೆಗಷ್ಟೇ ಅವರು 'ರಾಜನಿವಾಸ' ಸಿನಿಮಾ ಒಪ್ಪಿಕೊಂಡಿದ್ದಾರೆ. 'ಬಹಳ ದಿನಗಳ ನಂತರ ಒಳ್ಳೆಯ ಕಥೆ ಸಿಕ್ಕಿದೆ. ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ನಾಯಕನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿಯವರೆಗೂ ನಾನು ಮಾಡಿದ ಪಾತ್ರಕ್ಕಿಂತ ಇದು ಭಿನ್ನವಾಗಿದೆ. ನಿರ್ದೇಶಕರ ಕಥೆಗೆ ಮತ್ತು ಪಾತ್ರಕ್ಕೆ ಜೀವ ತುಂಬುತ್ತೇನೆ' ಎಂದು ಸಿನಿಮಾದ ಬಗ್ಗೆ ಅವರು ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲರಾಜ ವಾಡಿ ವಿಭಿನ್ನ ರೋಲ್‌ನಲ್ಲಿ ನಟಿಸುತ್ತಿದ್ದಾರೆ.

ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾಕ್ಕೆ ನಾಯಕಿಯಾದ ಕೃತಿಕಾ ರವೀಂದ್ರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ