ಆ್ಯಪ್ನಗರ

ಫೋರ್ಕ್‌ನಲ್ಲಿ ರಾಗಿ ಮುದ್ದೆ ತಿಂದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ: ನೆಟ್ಟಿಗರಿಂದ ತರಾಟೆ!

ಟಿಕ್‌ಟಾಕ್, ಬಿಗ್ ಬಾಸ್ ಮೂಲಕ ಪ್ರಖ್ಯಾತಿ ಪಡೆದ ನಿವೇದಿತಾ ಗೌಡ ಅವರು ಇತ್ತೀಚೆಗೆ ಮಜಾ ಟಾಕೀಸ್‌ನಲ್ಲಿ ರಾಗಿಮುದ್ದೆಯನ್ನು ಫೋರ್ಕ್‌ನಲ್ಲಿ ತಿಂದಿದ್ದರು. ಈಗ ಇದೇ ವಿಚಾರವಾಗಿ ಅನೇಕರು ನಿವೇದಿತಾ ಮೇಲೆ ಸಿಟ್ಟಾಗಿದ್ದಾರೆ.

Authored byಟೀನಾ | Vijaya Karnataka Web 24 Nov 2020, 4:17 pm
ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಇಲ್ಲಿಯವರೆಗೆ ಮಾಡಿಕೊಂಡ ವಿವಾದಗಳಿಗೆ ಲೆಕ್ಕವಿಲ್ಲ. ಈಗ ಅವರು ಮತ್ತೊಂದು ವಿಚಾರಕ್ಕೆ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಬಂದಿದ್ದ ನಿವೇದಿತಾ ಗೌಡ ಅವರು ರಾಗಿಮುದ್ದೆಯನ್ನು ಫೋರ್ಕ್‌ನಲ್ಲಿ ತಿಂದಿದ್ದರು. ಇದಕ್ಕೆ ನೆಟ್ಟಿಗರಯ ವಿಧ ವಿಧವಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Vijaya Karnataka Web bigg boss fame niveditha gowda and chandan shetty enters to majaa talkies
ಫೋರ್ಕ್‌ನಲ್ಲಿ ರಾಗಿ ಮುದ್ದೆ ತಿಂದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ: ನೆಟ್ಟಿಗರಿಂದ ತರಾಟೆ!


ಸಂಸ್ಕೃತಿ ಹಾಳುಮಾಡಬೇಡಿ

ಚಂದನ್ ಶೆಟ್ಟಿ ಅವರು ಮನಸ್ಸಿಗೆ ಬಂದಹಾಗೆ ಕೈಯಲ್ಲಿ ತಿಂದರೆ ನಿವೇದಿತಾಗೆ ಇಷ್ಟ ಆಗೋದಿಲ್ಲವಂತೆ. ಹೀಗೆಂದು ಚಂದನ್ ಶೆಟ್ಟಿ ಅವರೇ ಹೇಳಿದ್ದಾರೆ. ಇನ್ನು ಮಜಾ ಟಾಕೀಸ್‌ನಲ್ಲಿ ಸಾಂಬಾರ್‌ ಕುಡಿಯಲು ಸ್ಟ್ರಾ ಬೇಕು ಎಂದು ನಿವೇದಿತಾ ಕೇಳಿದ್ದಾರೆ. 'ನಿವೇದಿತಾ ಗೌಡ ಅವರ ಶೋಕಿ, ಡವ್‌ಗೆ ಏನೂ ಕಮ್ಮಿ ಇಲ್ಲ. ಚಂದನ್ ಶೆಟ್ಟಿ ಅವರು ಪ್ರೌಢಿಮೆ ಇರುವ ಹುಡುಗಿಯನ್ನು ಮದುವೆಯಾಗಬೇಕಿತ್ತು. ಇಂತಹ ವಿಚಾರವನ್ನು ಪ್ರಮೋಟ್ ಮಾಡಬೇಡಿ. ನಿವೇದಿತಾ ಗೌಡರನ್ನು ಮಿಲಿಟರಿ ಹೋಟೆಲ್‌ಗೆ ಕರೆದುಕೊಂಡು ಹೋಗಬೇಡಿ. ಆಹಾರವನ್ನು ಕೈಯಲ್ಲಿ ಹಿಡಿದು ಖುಷಿಯಿಂದ ತಿನ್ನಬೇಕು, ಅದನ್ನು ಪರಕೀಯರ ತರಹ ಫೋರ್ಕ್‌ನಲ್ಲಿ ತಿನ್ನಬಾರದು. ನಮ್ಮ ಸಂಸ್ಕೃತಿಯನ್ನು ಹಾಳುಮಾಡಬೇಡಿ' ಎಂದು ನಿವೇದಿತಾ ಗೌಡಗೆ ತರಾಟೆ ತೆಗೆದುಕೊಂಡಿದ್ದಾರೆ.

ಆಹಾರವನ್ನು ಕೇಳಾಗಿ ನೋಡದಿರಿ

'ರಾಗಿ ಮತ್ತು ಕೃಷಿ ಅಂದರೆ ನಮ್ಮ ದೇವರು ಅಂತ ತಿಳಿಸಿದ್ದೇವೆ. ನಮ್ಮ ಕರ್ನಾಟಕದಲ್ಲಿ ಎಷ್ಟೋ ಜನರಿಗೆ ತಿನ್ನಲು ಊಟ ಇಲ್ಲ. ಕೊರೊನಾ ಟೈಮ್‌ನಲ್ಲೂ ಈ ರೀತಿ ಊಟ ಮಾಡುವವರನ್ನು ಯಾಕೆ ಶೋಗೆ ಕರೆಸಿದ್ದೀರಾ? ನಮ್ಮ ನಾಡು-ನುಡಿ-ಜನರನ್ನು ಅವಮಾನ ಮಾಡಬೇಡಿ. ಆಹಾರವನ್ನು ಕೀಳಾಗಿ ನೋಡಬೇಡಿ. ಕರ್ನಾಟಕದಲ್ಲಿ ಹುಟ್ಟಿ ವಿದೇಶದವರ ರೀತಿ ಮಾಡಬೇಡಿ. ಚಿಕ್ಕವಳಿದ್ದಾಗ ಸರಿಯಾಗಿ ಕಲಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ' ಎಂದು ಕೆಲವರು ಹೇಳಿದ್ದಾರೆ.

Also Read-ಬಿಗ್ ಬಾಸ್ ಮನೆಯಲ್ಲಿ ಲವ್ ಮಾಡಿ ಮದುವೆಯಾದ ಸ್ಫರ್ಧಿಗಳು ಇವರೇ ನೋಡಿ!

ಇನ್ನೂ ಬೆರಳೆಣಿಕೆಯಷ್ಟು ಮಂದಿ ಚಂದನ್ ಶೆಟ್ಟಿಗೆ ಬೆಂಬಲ ನೀಡಿ ಮಾತನಾಡಿದ್ದಾರೆ. ಮಜಾ ಟಾಕೀಸ್‌ನ್ನು ಹಾಸ್ಯಕ್ಕಾಗಿ ಎಂದು ಪರಿಗಣಿಸಿ ಎಂದು ಕೆಲವರು ಹೇಳಿದ್ದಾರೆ. ಈ ಹಿಂದೆ ಕೂಡ ಮದುವೆಗೂ ಮುನ್ನ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಜಾ ಟಾಕೀಸ್‌ಗೆ ಬಂದಿದ್ದರು. ಲಾಕ್‌ಡೌನ್ ಟೈಮ್‌ನಲ್ಲಿ ಚಂದನ್ ಶೆಟ್ಟಿ ಅವರೇ ಮನೆಗೆಲಸ, ಅಡುಗೆ ಮಾಡುತ್ತಿದ್ದರಂತೆ. ನಿವೇದಿತಾರಿಗೆ ಹೇಗೆ ಮುದ್ದೆ ತಿನ್ನಬೇಕು ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ