ಆ್ಯಪ್ನಗರ

​ಆರನೇ ವಾರ ಬಿಗ್‌ ಮನೆಯಲ್ಲಿ ಏನು ವಿಶೇಷ?

ಶನಿವಾರ ಬಂತು ಅಂದ್ರೆ ಸಾಕು 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್‌ಗಾಗಿ ಎಲ್ಲರೂ ಕಾಯುತ್ತ ಕುಳಿತಿರುತ್ತಾರೆ.

Vijaya Karnataka Web 25 Nov 2017, 2:32 pm
ಶನಿವಾರ ಬಂತು ಅಂದ್ರೆ ಸಾಕು 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್‌ಗಾಗಿ ಎಲ್ಲರೂ ಕಾಯುತ್ತ ಕುಳಿತಿರುತ್ತಾರೆ. ಅದೇ ರೀತಿ ಕಿಚ್ಚ ಬಿಗ್‌ ಮನೆಯಿಂದ ಯಾವ ಸ್ಪರ್ಧಿಯನ್ನು ಆಚೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಕುತೂಹಲ ಸಹಜವಾಗಿ ಇರುತ್ತದೆ. ಆದರೆ ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಎಲ್ಲರೂ ಸೇಫ್ ಎನ್ನಬಹುದು.
Vijaya Karnataka Web bigg boss kannada 6th week eviction
​ಆರನೇ ವಾರ ಬಿಗ್‌ ಮನೆಯಲ್ಲಿ ಏನು ವಿಶೇಷ?


ಬಿಗ್‌ಬಾಸ್‌ ಮನೆಯ ಆರನೇ ವಾರದ ಕ್ಯಾಪ್ಟನ್‌ ಆಗಿ ನಿವೇದಿತಾ ಗೌಡ ಆಯ್ಕೆಯಾಗಿದ್ದರು. ಹಾಗಾಗಿ ಈ ವಾರ ನಿವೇದಿತಾ ಎಲಿಮಿನೇಷನ್‌ನಿಂದ ಸುರಕ್ಷಿತ. ಬಿಗ್‌ಬಾಸ್‌ ಕೇಳಿದ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ, ನಿವೇದಿತಾ ಗೌಡ ಈ ವಾರ ಕ್ಯಾಪ್ಟನ್‌ ಆಗಿ ಮನೆಯ ಅಧಿಕಾರ ವಹಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ.

ಇನ್ನು ಆರನೇ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರ ಹೋಗಲು ಚಂದನ್‌ ಶೆಟ್ಟಿ, ಶ್ರುತಿ ಪ್ರಕಾಶ್‌, ರಿಯಾಜ್‌, ಸಮೀರ್‌ ಆಚಾರ್ಯ, ಜಯ ಶ್ರೀನಿವಾಸನ್‌, ಅನುಪಮಾ ಮತ್ತು ಜಗನ್‌ ನಾಮಿನೇಟ್‌ ಆಗಿದ್ದಾರೆ. ಇನ್ನು ಕ್ಯಾಪ್ಟನ್‌ ನಿವೇದಿತಾ ಬಿಗ್‌ಬಾಸ್‌ ಆದೇಶದಂತೆ ಸಿಹಿ ಕಹಿ ಚಂದ್ರು ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು. ಒಟ್ಟು ಎಂಟು ಜನ ಈ ವಾರ ನಾಮಿನೇಟ್‌ ಆಗಿದ್ದಾರೆ ಆದರೆ ಎಲಿಮಿನೇಷ ಇಲ್ಲದ ಕಾರಣ ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ