'ಬಿಗ್ ಬಾಸ್ ಕನ್ನಡ ಸೀಸನ್ 7' ರಿಯಾಲಿಟಿ ಶೋ ಅನೇಕ ಪ್ರತಿಭೆಗಳನ್ನು ಪರಿಚಯ ಮಾಡಿಕೊಟ್ಟಿದೆ. ಅದರಲ್ಲೂ ಗಾಯನದ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿರುವ ವಾಸುಕಿ ವೈಭವ್ ಹಾಡಲು ಶುರು ಮಾಡಿದರೆ ಕೇಳುಗರು ಇನ್ನೂನು ಬೇಕಾಗಿದೆ ಅಂತಾರೆ. ಹೀಗಾಗಿ ಗಾಯನದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ವಾಸುಕಿ ವೈಭವ್ ರೆಡಿಯಾಗಿದ್ದಾರೆ.
ವಾಸುಕಿ ವೈಭವ್ ಹಾಡಿಗೆ ಭಾರೀ ಡಿಮ್ಯಾಂಡ್!
ವಾಸುಕಿ ವೈಭ್ ಬಿಗ್ ಬಾಸ್ ಮನೆಯಲ್ಲಿದ್ದಾಗ ಕೆಲ ಹಾಡುಗಳನ್ನು ಅಲ್ಲಿಯೇ ರಚಿಸಿ ಹಾಡಿದ್ದರು. ಅವರ 'ಮನ್ಸಿಂದ ಯಾರೂನೂ ಕೆಟ್ಟೋರಲ್ಲ' ಹಾಡು ಎಷ್ಟು ಜನಪ್ರಿಯತೆ ಪಡೆದುಕೊಂಡಿತು ಅಂದರೆ ಕಿಚ್ಚ ಸುದೀಪ್ ಅವರು ವಾಸುಕಿ ಬರ್ತಡೇ ದಿನ ಆ ಹಾಡು ಹಾಡಿ ಶುಭಾಶಯ ಕೋರಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಮೇಲೆ ಎಲ್ಲಿ ಹೋದರೂ ಕೂಡ ವಾಸುಕಿಗೆ ಆ ಹಾಡು ಹಾಡಿ, ಈ ಹಾಡು ಹಾಡಿ ಎಂದು ಪ್ರೇಕ್ಷಕರು ಮುಗಿಬೀಳುತ್ತಾರೆ. ಪ್ರೇಕ್ಷಕರ ಆಸೆಯನ್ನು ಈಡೇರಿಸಲು ವಾಸುಕಿ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಧಾರಾವಾಹಿಗಳ ಮಹಾ ಸಂಗಮದಲ್ಲಿ ವಾಸುಕಿ ಗಾಯನ!
'ನಮ್ಮನೆ ಯುವರಾಣಿ', 'ಗಿಣಿರಾಮ', 'ಹೂಮಳೆ' ಧಾರಾವಾಹಿಯ ಸಂಗಮದಲ್ಲಿ ವಾಸುಕಿ ಹಾಡು ಹಾಡಲಿದ್ದಾರೆ. ಈಗಾಗಲೇ ಈ ಪ್ರೋಮೋ ಕೂಡ ರಿಲೀಸ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ಹಂಚಿಕೊಳ್ಳುವುದರ ಜೊತೆಗೆ 'ನಮಗೆಲ್ಲಾ ಒಂದು ವಿಷಯ ಸ್ಪಷ್ಟ ಮಾಡಿ ವಾಸುಕಿ, ಈ ಸಣ್ಣ ವಯಸ್ಸಿನಲ್ಲಿ ಇಷ್ಟು ಸೌಜನ್ಯ ಮತ್ತು ಇಷ್ಟೆಲ್ಲಾ ಪ್ರತಿಭೆ ಒಂಥರಾ ಅನ್ಯಾಯ ಅಲ್ವಾ?' ಎಂಬ ಕ್ಯಾಪ್ಶನ್ ಕೊಟ್ಟು ವಾಸುಕಿ ಗುಣಗಾನ ಮಾಡಿದ್ದಾರೆ.
ಬ್ಯಾಂಡ್ ಜೊತೆ ಹಾಡಲಿರುವ ವಾಸುಕಿ ವೈಭವ್!
ಈ ಕಾರ್ಯಕ್ರಮದ ಬಗ್ಗೆ 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ನೀಡಿರುವ ವಾಸುಕಿ ವೈಭವ್, 'ಮೂರು ಧಾರಾವಾಹಿಗಳ ಸಂಗಮದಲ್ಲಿ ಕೆಫೆಯೊಂದರಲ್ಲಿ ನಾನು ನನ್ನ ಬ್ಯಾಂಡ್ ಜೊತೆ ಕೂತು ಹಾಡಿದ್ದೇನೆ. ವಾಸುಕಿ ವೈಭವ್ ಆಗಿ ನಾನು ಇಲ್ಲಿ ಸ್ವಲ್ಪ ನಟಿಸುತ್ತೇನೆ ಎಂದು ಹೇಳಬಹುದು. ಈಗಾಗಲೇ ನಮ್ಮ ಬ್ಯಾಂಡ್ ಕೊರೊನಾ ವೈರಸ್ ನಡುವೆಯೂ ಅನೇಕ ಕಡೆ ಕಾರ್ಯಕ್ರಮ ಕೊಡುತ್ತಿರುವುದು ಖುಷಿಯ ವಿಷಯ. ಬಡವ ರ್ಯಾಸ್ಕಲ್ ಚಿತ್ರದ ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಇನ್ನೂ ಅನೇಕ ಪ್ರಾಜೆಕ್ಟ್ಗಳ ಮಾತುಕತೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
ನಟಿಯರೂ ಹಾಡ್ತಾರೆ!
ಕಳೆದ ಎರಡು ದಿನಗಳ ಹಿಂದೆ ನಟಿಯರಾದ ಚಂದನಾ ಅನಂತಕೃಷ್ಣ, ನಯನಾ, ಅಂಕಿತಾ ಅಮರ್ ಅವರು ವಾಸುಕಿ ವೈಭವ್ ಜೊತೆಗಿನ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಬ್ಯುಸಿ ಬದುಕಿನ ನಡುವೆ ಇವರೆಲ್ಲ ಒಟ್ಟಿಗೆ ಸೇರಿರೋದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು, ಕುತೂಹಲ ಹುಟ್ಟುಹಾಕಿತ್ತು. ಇದಕ್ಕೀಗ ಉತ್ತರ ಸಿಕ್ಕಿದಂತಾಗಿದೆ. ಈ ಮೂವರು ನಟಿಯರು ಹಾಡುತ್ತಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ವಾಸುಕಿ ಗಾಯನದ ಮಧ್ಯೆ ಅಂಕಿತಾ, ಚಂದನಾ, ನಯನಾ ಹಾಡು ಪ್ರೇಕ್ಷಕರನ್ನು ಇನ್ನಷ್ಟು ರಂಜಿಸಲಿದೆ. ಭಾನುವಾರ, 13ನೇ ತಾರೀಖು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
Also Read-ಪುನೀತ್ ಜೊತೆ ಸಿನಿಮಾ ಮಾಡುವ ಚಾನ್ಸ್ ಸಿಕ್ಕಿದ್ದಕ್ಕೆ ವಾಸುಕಿ ವೈಭವ್ಗೆ ಸಂಭ್ರಮವೋ ಸಂಭ್ರಮ!
ವಾಸುಕಿ ವೈಭವ್ ಹಾಡಿಗೆ ಭಾರೀ ಡಿಮ್ಯಾಂಡ್!
ವಾಸುಕಿ ವೈಭ್ ಬಿಗ್ ಬಾಸ್ ಮನೆಯಲ್ಲಿದ್ದಾಗ ಕೆಲ ಹಾಡುಗಳನ್ನು ಅಲ್ಲಿಯೇ ರಚಿಸಿ ಹಾಡಿದ್ದರು. ಅವರ 'ಮನ್ಸಿಂದ ಯಾರೂನೂ ಕೆಟ್ಟೋರಲ್ಲ' ಹಾಡು ಎಷ್ಟು ಜನಪ್ರಿಯತೆ ಪಡೆದುಕೊಂಡಿತು ಅಂದರೆ ಕಿಚ್ಚ ಸುದೀಪ್ ಅವರು ವಾಸುಕಿ ಬರ್ತಡೇ ದಿನ ಆ ಹಾಡು ಹಾಡಿ ಶುಭಾಶಯ ಕೋರಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಮೇಲೆ ಎಲ್ಲಿ ಹೋದರೂ ಕೂಡ ವಾಸುಕಿಗೆ ಆ ಹಾಡು ಹಾಡಿ, ಈ ಹಾಡು ಹಾಡಿ ಎಂದು ಪ್ರೇಕ್ಷಕರು ಮುಗಿಬೀಳುತ್ತಾರೆ. ಪ್ರೇಕ್ಷಕರ ಆಸೆಯನ್ನು ಈಡೇರಿಸಲು ವಾಸುಕಿ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಧಾರಾವಾಹಿಗಳ ಮಹಾ ಸಂಗಮದಲ್ಲಿ ವಾಸುಕಿ ಗಾಯನ!
'ನಮ್ಮನೆ ಯುವರಾಣಿ', 'ಗಿಣಿರಾಮ', 'ಹೂಮಳೆ' ಧಾರಾವಾಹಿಯ ಸಂಗಮದಲ್ಲಿ ವಾಸುಕಿ ಹಾಡು ಹಾಡಲಿದ್ದಾರೆ. ಈಗಾಗಲೇ ಈ ಪ್ರೋಮೋ ಕೂಡ ರಿಲೀಸ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ಹಂಚಿಕೊಳ್ಳುವುದರ ಜೊತೆಗೆ 'ನಮಗೆಲ್ಲಾ ಒಂದು ವಿಷಯ ಸ್ಪಷ್ಟ ಮಾಡಿ ವಾಸುಕಿ, ಈ ಸಣ್ಣ ವಯಸ್ಸಿನಲ್ಲಿ ಇಷ್ಟು ಸೌಜನ್ಯ ಮತ್ತು ಇಷ್ಟೆಲ್ಲಾ ಪ್ರತಿಭೆ ಒಂಥರಾ ಅನ್ಯಾಯ ಅಲ್ವಾ?' ಎಂಬ ಕ್ಯಾಪ್ಶನ್ ಕೊಟ್ಟು ವಾಸುಕಿ ಗುಣಗಾನ ಮಾಡಿದ್ದಾರೆ.
ಬ್ಯಾಂಡ್ ಜೊತೆ ಹಾಡಲಿರುವ ವಾಸುಕಿ ವೈಭವ್!
ಈ ಕಾರ್ಯಕ್ರಮದ ಬಗ್ಗೆ 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ನೀಡಿರುವ ವಾಸುಕಿ ವೈಭವ್, 'ಮೂರು ಧಾರಾವಾಹಿಗಳ ಸಂಗಮದಲ್ಲಿ ಕೆಫೆಯೊಂದರಲ್ಲಿ ನಾನು ನನ್ನ ಬ್ಯಾಂಡ್ ಜೊತೆ ಕೂತು ಹಾಡಿದ್ದೇನೆ. ವಾಸುಕಿ ವೈಭವ್ ಆಗಿ ನಾನು ಇಲ್ಲಿ ಸ್ವಲ್ಪ ನಟಿಸುತ್ತೇನೆ ಎಂದು ಹೇಳಬಹುದು. ಈಗಾಗಲೇ ನಮ್ಮ ಬ್ಯಾಂಡ್ ಕೊರೊನಾ ವೈರಸ್ ನಡುವೆಯೂ ಅನೇಕ ಕಡೆ ಕಾರ್ಯಕ್ರಮ ಕೊಡುತ್ತಿರುವುದು ಖುಷಿಯ ವಿಷಯ. ಬಡವ ರ್ಯಾಸ್ಕಲ್ ಚಿತ್ರದ ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಇನ್ನೂ ಅನೇಕ ಪ್ರಾಜೆಕ್ಟ್ಗಳ ಮಾತುಕತೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
ನಟಿಯರೂ ಹಾಡ್ತಾರೆ!
ಕಳೆದ ಎರಡು ದಿನಗಳ ಹಿಂದೆ ನಟಿಯರಾದ ಚಂದನಾ ಅನಂತಕೃಷ್ಣ, ನಯನಾ, ಅಂಕಿತಾ ಅಮರ್ ಅವರು ವಾಸುಕಿ ವೈಭವ್ ಜೊತೆಗಿನ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಬ್ಯುಸಿ ಬದುಕಿನ ನಡುವೆ ಇವರೆಲ್ಲ ಒಟ್ಟಿಗೆ ಸೇರಿರೋದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು, ಕುತೂಹಲ ಹುಟ್ಟುಹಾಕಿತ್ತು. ಇದಕ್ಕೀಗ ಉತ್ತರ ಸಿಕ್ಕಿದಂತಾಗಿದೆ. ಈ ಮೂವರು ನಟಿಯರು ಹಾಡುತ್ತಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ವಾಸುಕಿ ಗಾಯನದ ಮಧ್ಯೆ ಅಂಕಿತಾ, ಚಂದನಾ, ನಯನಾ ಹಾಡು ಪ್ರೇಕ್ಷಕರನ್ನು ಇನ್ನಷ್ಟು ರಂಜಿಸಲಿದೆ. ಭಾನುವಾರ, 13ನೇ ತಾರೀಖು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
Also Read-ಪುನೀತ್ ಜೊತೆ ಸಿನಿಮಾ ಮಾಡುವ ಚಾನ್ಸ್ ಸಿಕ್ಕಿದ್ದಕ್ಕೆ ವಾಸುಕಿ ವೈಭವ್ಗೆ ಸಂಭ್ರಮವೋ ಸಂಭ್ರಮ!