ಆ್ಯಪ್ನಗರ

ಕೊನೆಯ ಕರೆಯಲ್ಲಿ ಹುತಾತ್ಮ ಸಂದೀಪ್‌ ಹೇಳಿದ್ದೇನು?

26 ನವೆಂಬರ್‌ 2008ರಂದು ವಾಣಿಜ್ಯ ನಗರಿ ಮುಂಬಯಿನಲ್ಲಿ ನಡೆ ಭಯೋತ್ಪಾದಕರ ಅಟ್ಟಹಾಸವನ್ನು ಹೇಗೆ ತಾನೆ ಮರೆಯಲು ಸಾಧ್ಯ?

ವಿಕ ಸುದ್ದಿಲೋಕ 18 Aug 2017, 1:06 pm
26 ನವೆಂಬರ್‌ 2008ರಂದು ವಾಣಿಜ್ಯ ನಗರಿ ಮುಂಬಯಿನಲ್ಲಿ ನಡೆ ಭಯೋತ್ಪಾದಕರ ಅಟ್ಟಹಾಸವನ್ನು ಹೇಗೆ ತಾನೆ ಮರೆಯಲು ಸಾಧ್ಯ? ತಾಜ್ ಹೋಟೆಲ್‌ನಲ್ಲಿ ಉಗ್ರರೊಂದಿಗೆ ಸೆಣಸಾಡುತ್ತ ವೀರಮರಣ ಹೊಂದಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಈಗಲೂ ನಮ್ಮ ಮನಸ್ಸಿನಲ್ಲಿ ಅಜರಾಮರ.
Vijaya Karnataka Web checkout the most emotional video of maja talkies
ಕೊನೆಯ ಕರೆಯಲ್ಲಿ ಹುತಾತ್ಮ ಸಂದೀಪ್‌ ಹೇಳಿದ್ದೇನು?


ಈ ಮಹಾನ್‌ ಯೋಧನ ತಂದೆ-ತಾಯಿ, ಸೃಜನ್‌ ಲೋಕೇಶ್‌ ನಡೆಸಿಕೊಡುವ ಮಜಾ ಟಾಕೀಸ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಗನ ಜತೆಗಿನ ತಮ್ಮ ಒಡನಾಟ ಯಾವ ರೀತಿಯಾಗಿತ್ತು, ಮತ್ತು ಒಬ್ಬ ಯೋಧನಾಗಿ ಸಂದೀಪ್‌ ಯಾವ ತೆರನಾಗಿದ್ದರು ಎಂಬುದನ್ನು ಅವರ ತಂದೆ-ತಾಯಿ ಬಿಚ್ಚಿಟ್ಟಿದ್ದಾರೆ.

ಇನ್ನು ಮುಂಬಯಿ ದಾಳಿ ಸಂದರ್ಭದಲ್ಲಿ ಮಗನಿಂದ ಬಂದ ಕೊನೆಯ ಟೆಲಿಪೋನ್‌ ಕರೆಯ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ ತಂದೆ ಉನ್ನಿಕೃಷ್ಣನ್ ಹಾಗೂ ತಾಯಿ ಧನಲಕ್ಷ್ಮಿ. ಇದೇ ವೇಳೆ ಭಾರತೀಯ ಸೈನ್ಯಕ್ಕೆ ಸೇರುವ ಹಂಬಲ ಹೊಂದಿರುವ ಯುವ ಜನಾಂಗಕ್ಕೆ ಉತ್ತಮ ಸಂದೇಶವನ್ನೂ ನೀಡಿದ್ದಾರೆ ಉನ್ನಿಕೃಷ್ಣನ್.



ಮಗ ಸಂದೀಪ್‌ ಕುರಿತು ಅವರಿಬ್ಬರು ಮಾತನಾಡಿದ ಮಾತುಗಳು ನೋಡುಗರ ಕಣ್ಣಾಲಿಗಳು ತುಂಬುವಂತೆ ಮಾಡುತ್ತಿವೆ. ಕಲರ್ಸ್‌ ಕನ್ನಡ ವಾಹಿನಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿರುವ ಈ ವೀಡಿಯೋವನ್ನು ನೀವು ನೋಡಲೇಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ