ಆ್ಯಪ್ನಗರ

ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದೇಕೆ ಕನ್ನಡದ 'ಲಗ್ನ ಪತ್ರಿಕೆ' ಧಾರಾವಾಹಿ: ಪ್ರತಿಕ್ರಿಯೆ ನೀಡಿದ ಸೀರಿಯಲ್ ತಂಡ!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದೆ. ಸತ್ಯ-ಸುಳ್ಳು ಕೂಡ ಇಲ್ಲಿ ವೈರಲ್ ಆಗುತ್ತವೆ. ಇನ್ನು ಇತ್ತೀಚೆಗೆ ಪ್ರಸಾರವಾಗುತ್ತಿರುವ 'ಲಗ್ನಪತ್ರಿಕೆ' ಧಾರಾವಾಹಿ ಟ್ರೋಲ್‌ಗೆ ಗುರಿಯಾಗಿದೆ. ಈ ಬಗ್ಗೆ ಧಾರಾವಾಹಿ ನಿರ್ಮಾಪಕರು ಮೌನ ಮುರಿದಿದ್ದಾರೆ.

Authored byಟೀನಾ | Vijaya Karnataka Web 3 Nov 2020, 3:44 pm
ಧಾರಾವಾಹಿಯಾಲೀ, ಸಿನಿಮಾವಾಗಲೀ ಕಲಾವಿದರ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಲೂಬಹುದು, ಇಷ್ಟವಾಗದೇ ಇರಬಹುದು. ಅಂತೆಯೇ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡುವವರಿಗೆ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದ ಹಾಗೆ ಬೈಯ್ಯುವುದುಂಟು. ಇನ್ನು ಕೆಲವೊಮ್ಮೆ ಕಲಾವಿದರಿಗೆ ಬೆದರಿಕೆ ಕರೆ ಮಾಡುತ್ತಾರೆ, ಹೊರಗಡೆ ಸಿಕ್ಕಾಗ ಬಾಯಿಗೆ ಬಂದಹಾಗೆ ಬೈಯ್ದು ಹೊಡೆದ ಘಟನೆಗಳು ನಡೆದಿವೆ. ಇನ್ನು ಇತ್ತೀಚೆಗಷಷ್ಟೇ ಆರಂಭವಾದ 'ಲಗ್ನ ಪತ್ರಿಕೆ' ಧಾರಾವಾಹಿ ಟ್ರೋಲ್‌ಗಳಿಗೆ ಆಹಾರವಾಗುತ್ತಿದೆ.
Vijaya Karnataka Web colors kannada lagnapatrike kannada serial trolled in social media
ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದೇಕೆ ಕನ್ನಡದ 'ಲಗ್ನ ಪತ್ರಿಕೆ' ಧಾರಾವಾಹಿ: ಪ್ರತಿಕ್ರಿಯೆ ನೀಡಿದ ಸೀರಿಯಲ್ ತಂಡ!


ಟ್ರೋಲ್ ಆಗುತ್ತಿರುವುದೇಕೆ?

'ಲಗ್ನಪತ್ರಿಕೆ' ಧಾರಾವಾಹಿಯ ನಟ-ನಟಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಕಾಮೆಂಟ್ ಮಾಡಲಾಗುತ್ತಿದೆ. ಹೀರೋಯಿನ್ ಮೇಕಪ್ ಅತಿಯಾಯ್ತು, ಹೀರೋ-ಹೀರೋಯಿನ್‌ಗೆ ನಟನೆ ಬರಲ್ಲ. ಇವರನ್ನು ಬದಲಾಯಿಸಿ ಅಂತ ಅನೇಕ ಕಾಮೆಂಟ್‌ಗಳು ಬಂದಿವೆ. ಇದಕ್ಕೆ ನಿರ್ಮಾಪಕ ಅರವಿಂದ್ ಕೌಶಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ಧಾರಾವಾಹಿ ತಂಡ ಏನು ಹೇಳುತ್ತದೆ?
'ನಿಜಜೀವನವೇ ಇರಲೀ ಅಥವಾ ತೆರೆ ಮೇಲಾಗಿರಲೀ ಸೋಶಿಯಲ್ ಮೀಡಿಯಾದಲ್ಲಿ ಅತಿಯಾದ ಪ್ರತಿಕ್ರಿಯೆ ಯಾವಾಗಲೂ ಬಂದೇ ಬರುತ್ತದೆ. ಈ ಧಾರಾವಾಹಿ ಮಾಡುವಾಗ ಉಳಿದ ಧಾರಾವಾಹಿಗಳಿಗಿಂತ ತುಂಬ ವಿಭಿನ್ನವಾಗಿರಬೇಕು ಎಂದು ನಾನು ನಿರ್ಧಾರ ಮಾಡಿದ್ದೆ. ಎತ್ತರ ಇರಬೇಕು, ಡಾರ್ಕ್ ಆಗಿ ಹ್ಯಾಂಡ್‌ಸಮ್ ಆಗಿರಬೇಕು, ಹೀರೋಯಿನ್ ಕೂಡ ಸುಂದರವಾಗಿ ರೆಡಿಯಾಗಬೇಕು ಅಂತ ನಮ್ಮ ಕಲ್ಪನೆಯಿರಲಿಲ್ಲ. ಶಶಾಂಕ್ ಹಾಗೂ ಮಯೂರಿ ಇವರಿಬ್ಬರು ದಾರಿಗಳಲ್ಲಿ ಕಾಣುವ ಸಾಮಾನ್ಯ ಹುಡುಗ ಅಥವಾ ಹುಡುಗಿಯರಂತೆ ಇದ್ದು, ಸಂಪೂರ್ಣವಾಗಿ ಕಲಾವಿದರು. ಈಗಾಗಲೇ ಕಾಣಿಸಿಕೊಳ್ಳುತ್ತಿರುವ ಹೀರೋ ಹೀರೋಯಿನ್‌ನ್ನು ನೋಡಿರುವ ಜನರಿಗೆ ಸಾಮಾನ್ಯ ಜನರಂತೆ ಕಾಣುವವರನ್ನು ಧಾರಾವಾಹಿಯ ನಾಯಕ-ನಾಯಕಿಯನ್ನು ಒಪ್ಪಿಕೊಳ್ಳಲು ಪ್ರೇಕ್ಷಕರು ಇನ್ನು ಸಿದ್ಧವಾಗಿಲ್ಲ. ಇನ್ನು 100%ದಲ್ಲಿ 90% ಫೇಕ್ ಪ್ರೊಫೈಲ್‌ಗಳಾಗಿದ್ದು, ಅವರು ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳೋದಿಲ್ಲ' ಎಂದು ಅರವಿಂದ್ ಕೌಶಿಕ್ ಹೇಳಿದ್ದಾರೆ.

Also Read-'ಲಗ್ನ ಪತ್ರಿಕೆ' ಧಾರಾವಾಹಿ: ನೆಗೆಟಿವ್ ಪೋಷಾಕು ಧರಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರ್!

ವಿಲನ್ ಆದ ಚೈತ್ರಾ ಕೋಟೂರ್!
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ನಟಿ ಚೈತ್ರಾ ಕೋಟೂರ್ ಈ ಧಾರವಾಹಿಯಲ್ಲಿ ನಮಿತಾ ಎಂಬ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯ ಕಥಾನಾಯಕ ಶಶಾಂಕ್ ಹಾಗೂ ಕಥಾನಾಯಕಿ ಮಯೂರಿಗೆಗೆ ಮದುವೆ ಮಾಡಲು ಮನೆಯವರು ತಯಾರಿ ಮಾಡಿಕೊಳ್ಳುತ್ತಿದ್ದರೆ, ಇವರಿಬ್ಬರು ಹೇಗಾದರೂ ಮಾಡಿ ಮದುವೆ ಮುರಿಯಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಒಂದಾಗಲಿದೆಯಾ? ಏನೆಲ್ಲ ಸಮಸ್ಯೆಗಳು ಎದುರಾಗಲಿವೆ ಎಂಬ ಬಗ್ಗೆ 'ಲಗ್ನಪತ್ರಿಕೆ' ಧಾರಾವಾಹಿ ಕಥೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ