ಆ್ಯಪ್ನಗರ

ಅಂತ್ಯವಾಯ್ತು 'ರಂಗನಾಯಕಿ' ಧಾರಾವಾಹಿ: ಕಾರಣ ಬೇರೆ ಇದೆ ಎಂದ ನಟ ಮಿಥುನ್!

ಕಳೆದ 15 ದಿನಗಳಲ್ಲಿ ಹಲವು ಧಾರಾವಾಹಿಗಳು ಶಾಶ್ವತವಾಗಿ ಪ್ರಸಾರವನ್ನು ನಿಲ್ಲಿಸಿವೆ. ಹಾಗೆಯೇ ಈಗ ಇನ್ನೊಂದು ಧಾರಾವಾಹಿ ಕೂಡ ಶಾಶ್ವತವಾಗಿ ಅಂತ್ಯವಾಗಲಿದೆಯಂತೆ. ಇದಕ್ಕೆ ಲಾಕ್ ಡೌನ್‌ ನೆಪ ಅಷ್ಟೇ ಎಂದಿದ್ದಾರೆ ಸಿನಿಮಾ, ಕಿರುತೆರೆ ನಟ ಮಿಥುನ್. ಹಾಗಾದರೆ ಏನದು?

Vijaya Karnataka Web 20 May 2020, 6:52 pm
ದೇಶದಾದ್ಯಂತ ಸೀರಿಯಲ್, ಸಿನಿಮಾ, ರಿಯಾಲಿಟಿ ಶೋ, ವೆಬ್ ಸಿರೀಸ್ ಶೂಟಿಂಗ್ ಎಲ್ಲವೂ ಬಂದಾಗಿದೆ. ಹೀಗಾಗಿ ಹಳೆ ಹಳೆಯ ಧಾರಾವಾಹಿ, ಸಿನಿಮಾಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಮೇ 25ರಿಂದ ಧಾರಾವಾಹಿ ಆರಂಭವಾದರೂ ಕೂಡ ಮತ್ತೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯೋದು ಧಾರಾವಾಹಿ ತಂಡಕ್ಕಿರುವ ಜಟಿಲ ಸವಾಲು ಎನ್ನಬಹುದು. ಹೀಗಾಗಿ ಮತ್ತೆ ಪ್ರೇಕ್ಷಕರಿಗೆ ಕಥೆ ನೆನಪಿಸಿ ಧಾರಾವಾಹಿ ಶುರುಮಾಡಬೇಕಿದೆ.
Vijaya Karnataka Web 123


ಲಾಕ್ ಡೌನ್‌ನಿಂದ ಅಂತ್ಯವಾದ ಧಾರಾವಾಹಿಗಳಿವು..

'ದೇವಯಾನಿ', 'ಕಾವೇರಿ', 'ನಾಯಕಿ', 'ಮಾಂಗಲ್ಯಂ ತಂತುನಾನೇನ', 'ಮರಳಿಬಂದಳು ಸೀತೆ', 'ಮಗಳು ಜಾನಕಿ', 'ಭೂಮಿ ತಾಯಾಣೆ', 'ಸಿಲ್ಲಿ ಲಲ್ಲಿ' ಧಾರಾವಾಹಿಗಳು ಅಂತ್ಯವಾಗಿವೆ. ಈಗ ಇನ್ನೊಂದು ಧಾರಾವಾಹಿ ತನ್ನ ಪ್ರಸಾರವನ್ನು ನಿಲ್ಲಿಸಿದಲಿಯಂತೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿ ಶಾಶ್ವತವಾಗಿ ಪ್ರಸಾರ ನಿಲ್ಲಿಸಲಿದೆ.

'ರಂಗನಾಯಕಿ' ಮುಗಿದಿದ್ದಕ್ಕೆ ತುಂಬ ಬೇಸರವಿದೆ

'ರಂಗನಾಯಕಿ' ಕಳೆದ ವರ್ಷ ರಿಲೀಸ್ ಆಗಿತ್ತು. ಇದರಿಂದ ವೀಕ್ಷಕರಿಗೆ ನಿಜಕ್ಕೂ ಬೇಸರವಾಗಿದೆ. ಕಾರಣ ಕಥೆಯನ್ನು ಮುಗಿಸಿದಯೇ ಈ ಧಾರಾವಾಹಿ ಅಂತ್ಯವಾಗಲಿದೆ. ಈ ಧಾರಾವಾಹಿ ನಟ ಮಿಥುನ್ ತೇಜಸ್ವಿ 'ಇ ಟೈಮ್ಸ್' ಜೊತೆಗಿನ ಸಂದರ್ಶನದಲ್ಲಿ ಮಾತನಾಡಿ, 'ನಿಜಕ್ಕೂ ರಂಗನಾಯಕಿ ಒಳ್ಳೆಯ ಧಾರಾವಾಹಿಯಾಗಿತ್ತು. ಟಿಆರ್‌ಪಿಯಲ್ಲೂ ಕೂಡ ಒಳ್ಳೆಯ ಅಂಕ ಪಡೆದಿತ್ತು. ಆದರೆ ಎಲ್ಲವೂ ಅಂದುಕೊಂಡಂತೆ ಆಗೋದಿಲ್ಲ. ಈಗ ಟಿಆರ್‌ಪಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೀಗಾಗಿ ರಂಗನಾಯಕಿಯನ್ನು ಮುಗಿಸಲೇಬೇಕಾಗಿ ಬಂತು' ಎಂದು ಹೇಳಿದ್ದಾರೆ.
ಲಾಕ್ ಡೌನ್ ಕೇವಲ ನೆಪವಷ್ಟೇ!
'ಈ ಸೀರಿಯಲ್ ಮುಗಿಯುವ ಸೂಚನೆ ನನಗೆ ಸಿಕ್ಕಿತ್ತು. ಅಷ್ಟೇ ಅಲ್ಲದೆ ಸಂಬಳ ಕಟ್ ಮಾಡುವ ಬಗ್ಗೆಯೂ ಚರ್ಚೆಯಾಗುತ್ತಿತ್ತು. ಅದರ ಜೊತೆಗೆ ಇನ್ನೊಂದು ಖಾಸಗಿ ವಾಹಿನಿ ಕೂಡ ತಾತ್ಕಾಲಿಕವಾಗಿ ಬಂದ್ ಆಗಿದೆ. ಹೀಗಾಗಿ 'ರಂಗನಾಯಕಿ' ಕೂಡ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಮೊದಲೇ ಸಿಕ್ಕಿತ್ತು. ಲಾಕ್ ಡೌನ್‌ ಇರದಿದ್ದಾಗ್ಯೂ ಕೂಡ ತಯಾರಕರು ಮುಂದಿನ ಕೆಲವು ತಿಂಗಳುಗಳಲ್ಲಿ ಈ ಸೀರಿಯಲ್ ಅಂತ್ಯ ಮಾಡುತ್ತಿದ್ದರು. ಇಷ್ಟು ಬೇಗ ಈ ಧಾರಾವಾಹಿ ಮುಗಿಸಬಾರದಿತ್ತು ಎಂದೂ ಕೂಡ ನನಗನಿಸಿತ್ತು. ಲಾಕ್ ಡೌನ್‌ ಈ ಸೀರಿಯಲ್ ಮುಗಿಯಲು ಕೇವಲ ನೆಪ ಆಗಿದೆ ಅಷ್ಟೇ ' ಎಂದಿದ್ದಾರೆ ಮಿಥುನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ