ಬಾಲಿವುಡ್ನ ಬಿಗ್-ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶಿಕ್ಷಕಿಯೊಬ್ಬರು ಭಾಗವಹಿಸಿದ್ದರು. ಅವರ ಹೆಸರು ಅನೂಪಾ ದಾಸ್. ಒಂದು ಕೋಟಿ ರೂ. ಗೆಲ್ಲುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ಆದರೆ 7 ಕೋಟಿ ರೂ. ಮಿಸ್ ಮಾಡಿಕೊಂಡಿದ್ದಾರೆ.
ಛತ್ತೀಸ್ಗಡ ಮೂಲದ ಅನೂಪ್ ದಾಸ್ ಅವರಿಗೆ ಹಣಕಾಸಿನ ಅನಿವಾರ್ಯತೆ ಇದೆ. ಯಾಕೆಂದರೆ, ಅವರ ತಾಯಿ 3ನೇ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅನೂಪಾ ಮತ್ತು ಅವರ ಕುಟುಂಬದ ಸದಸ್ಯರು ಉಳಿತಾಯ ಮಾಡಿಟ್ಟಿದ್ದ ಹಣವೆಲ್ಲ ತಾಯಿಯ ಚಿಕಿತ್ಸೆಗೆ ಖರ್ಚಾಗಿದೆ. ಹಾಗಾಗಿ, KBC ಶೋನಿಂದ ಹಣ ಬಂದರೆ ಚಿಕಿತ್ಸೆಗೆ ಅನುಕೂಲ ಆಗಲಿದೆ ಎಂಬ ಉದ್ದೇಶದಿಂದ ಅವರು ಭಾಗವಹಿಸಿದ್ದರು.
1962ರಲ್ಲಿ ನಡೆದ ರೇಜಾಂಗ್ ಲಾ ಯುದ್ಧದಲ್ಲಿ ಯಾರಿಗೆ 'ಪರಮವೀರ ಚಕ್ರ' ಪ್ರಶಸ್ತಿ ನೀಡಲಾಯಿತು? 50-50 ಲೈಫ್ಲೈನ್ ಬಳಸುವ ಮೂಲಕ ಅನೂಪಾ ದಾಸ್ ಈ ಪ್ರಶ್ನೆಯನ್ನು ಎದುರಿಸಿದರು. ಮೇಜರ್ ಶೈತಾನ್ ಸಿಂಗ್ ಎಂದು ಸರಿ ಉತ್ತರ ಹೇಳಿದ ಅವರಿಗೆ 1 ಕೋಟಿ ರೂ. ಬಹುಮಾನ ಸಿಕ್ಕಿತು. ನಂತರ ಅವರ ಎದುರು ಗೋಚರ ಆಗಿದ್ದು 7 ಕೋಟಿ ರೂ. ಪ್ರಶ್ನೆ! ಆದರೆ ಅವರು ಆಟ ಕ್ವಿಟ್ ಮಾಡಿದರು!
also read: KBC ವೇದಿಕೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ! ಅಮಿತಾಭ್ ಬಚ್ಚನ್ ವಿರುದ್ಧ ಎಫ್ಐಆರ್
'ರಿಯಾಜ್ ಪೂನಾವಾಲಾ ಮತ್ತು ಶೌಕತ್ ದುಕಾನ್ವಾಲಾ ಅವರು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಟೀಮ್ ಯಾವ ದೇಶದ್ದು?' ಉತ್ತರ: ಯುನೈಟೆಡ್ ಅರಬ್ ಎಮಿರೇಟ್ಸ್! ಆಟವನ್ನು ಕ್ವಿಟ್ ಮಾಡಿದ ಬಳಿಕ ಅನೂಪಾ ಅವರು ಈ ಸರಿ ಉತ್ತರ ನೀಡಿದರು. ಹಾಗಾಗಿ ಅವರಿಗೆ 7 ಕೋಟಿ ರೂ. ಸಿಗಲಿಲ್ಲ. 'ಒಂದು ವೇಳೆ ಉತ್ತರ ತಪ್ಪಾಗಿದ್ದರೆ ಈಗಾಗಲೇ ಗಳಿಸಿರುವ ಹಣದಲ್ಲಿ ದೊಡ್ಡ ಮೊತ್ತ ಕಳೆದುಕೊಳ್ಳಬೇಕಾಗುತ್ತಿತ್ತು. ನನ್ನ ಕುಟುಂಬಕ್ಕೆ ಈ ಹಣದ ಅನಿವಾರ್ಯತೆ ಇದೆ. ಹಾಗಂತ 7 ಕೋಟಿ ಸಿಕ್ಕಿಲ್ಲ ಎಂಬುದಕ್ಕೆ ಕಿಂಚಿತ್ತೂ ಬೇಸರ ಇಲ್ಲ' ಎಂದು ಅನೂಪಾ ಹೇಳಿದ್ದಾರೆ.
also read: ರಾಮಾಯಣದ ಈ ಒಂದು ಪ್ರಶ್ನೆಗೆ ಉತ್ತರಿಸಿ 6.4 ಲಕ್ಷ ರೂ. ಗೆದ್ದ KBC ಸ್ಪರ್ಧಿ! ನಿಮಗೂ ಉತ್ತರ ಗೊತ್ತಾ?
ಛತ್ತೀಸ್ಗಡ ಮೂಲದ ಅನೂಪ್ ದಾಸ್ ಅವರಿಗೆ ಹಣಕಾಸಿನ ಅನಿವಾರ್ಯತೆ ಇದೆ. ಯಾಕೆಂದರೆ, ಅವರ ತಾಯಿ 3ನೇ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅನೂಪಾ ಮತ್ತು ಅವರ ಕುಟುಂಬದ ಸದಸ್ಯರು ಉಳಿತಾಯ ಮಾಡಿಟ್ಟಿದ್ದ ಹಣವೆಲ್ಲ ತಾಯಿಯ ಚಿಕಿತ್ಸೆಗೆ ಖರ್ಚಾಗಿದೆ. ಹಾಗಾಗಿ, KBC ಶೋನಿಂದ ಹಣ ಬಂದರೆ ಚಿಕಿತ್ಸೆಗೆ ಅನುಕೂಲ ಆಗಲಿದೆ ಎಂಬ ಉದ್ದೇಶದಿಂದ ಅವರು ಭಾಗವಹಿಸಿದ್ದರು.
1962ರಲ್ಲಿ ನಡೆದ ರೇಜಾಂಗ್ ಲಾ ಯುದ್ಧದಲ್ಲಿ ಯಾರಿಗೆ 'ಪರಮವೀರ ಚಕ್ರ' ಪ್ರಶಸ್ತಿ ನೀಡಲಾಯಿತು? 50-50 ಲೈಫ್ಲೈನ್ ಬಳಸುವ ಮೂಲಕ ಅನೂಪಾ ದಾಸ್ ಈ ಪ್ರಶ್ನೆಯನ್ನು ಎದುರಿಸಿದರು. ಮೇಜರ್ ಶೈತಾನ್ ಸಿಂಗ್ ಎಂದು ಸರಿ ಉತ್ತರ ಹೇಳಿದ ಅವರಿಗೆ 1 ಕೋಟಿ ರೂ. ಬಹುಮಾನ ಸಿಕ್ಕಿತು. ನಂತರ ಅವರ ಎದುರು ಗೋಚರ ಆಗಿದ್ದು 7 ಕೋಟಿ ರೂ. ಪ್ರಶ್ನೆ! ಆದರೆ ಅವರು ಆಟ ಕ್ವಿಟ್ ಮಾಡಿದರು!
also read: KBC ವೇದಿಕೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ! ಅಮಿತಾಭ್ ಬಚ್ಚನ್ ವಿರುದ್ಧ ಎಫ್ಐಆರ್
'ರಿಯಾಜ್ ಪೂನಾವಾಲಾ ಮತ್ತು ಶೌಕತ್ ದುಕಾನ್ವಾಲಾ ಅವರು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಟೀಮ್ ಯಾವ ದೇಶದ್ದು?' ಉತ್ತರ: ಯುನೈಟೆಡ್ ಅರಬ್ ಎಮಿರೇಟ್ಸ್! ಆಟವನ್ನು ಕ್ವಿಟ್ ಮಾಡಿದ ಬಳಿಕ ಅನೂಪಾ ಅವರು ಈ ಸರಿ ಉತ್ತರ ನೀಡಿದರು. ಹಾಗಾಗಿ ಅವರಿಗೆ 7 ಕೋಟಿ ರೂ. ಸಿಗಲಿಲ್ಲ. 'ಒಂದು ವೇಳೆ ಉತ್ತರ ತಪ್ಪಾಗಿದ್ದರೆ ಈಗಾಗಲೇ ಗಳಿಸಿರುವ ಹಣದಲ್ಲಿ ದೊಡ್ಡ ಮೊತ್ತ ಕಳೆದುಕೊಳ್ಳಬೇಕಾಗುತ್ತಿತ್ತು. ನನ್ನ ಕುಟುಂಬಕ್ಕೆ ಈ ಹಣದ ಅನಿವಾರ್ಯತೆ ಇದೆ. ಹಾಗಂತ 7 ಕೋಟಿ ಸಿಕ್ಕಿಲ್ಲ ಎಂಬುದಕ್ಕೆ ಕಿಂಚಿತ್ತೂ ಬೇಸರ ಇಲ್ಲ' ಎಂದು ಅನೂಪಾ ಹೇಳಿದ್ದಾರೆ.
also read: ರಾಮಾಯಣದ ಈ ಒಂದು ಪ್ರಶ್ನೆಗೆ ಉತ್ತರಿಸಿ 6.4 ಲಕ್ಷ ರೂ. ಗೆದ್ದ KBC ಸ್ಪರ್ಧಿ! ನಿಮಗೂ ಉತ್ತರ ಗೊತ್ತಾ?