ಆ್ಯಪ್ನಗರ

ಸರಿಗಮಪ ವೇದಿಕೆಗೆ ಬರಲಿದ್ದಾರೆ ವೀರೆಂದ್ರ ಹೆಗ್ಗಡೆ

ಖ್ಯಾತ ಸಿಂಗಿಂಗ್‌ ರಿಯಾಲಿಟಿ ಶೋ ಸರಿಗಮಪ ಲಿಟಲ್‌ ಚಾಂಫ್ಸ್‌ ಸೀಸನ್‌-14ಕ್ಕೆ ಈ ವಾರ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಬರಲಿದ್ದಾರೆ.

Vijaya Karnataka 3 Apr 2018, 2:17 pm
ಖ್ಯಾತ ಸಿಂಗಿಂಗ್‌ ರಿಯಾಲಿಟಿ ಶೋ ಸರಿಗಮಪ ಲಿಟಲ್‌ ಚಾಂಫ್ಸ್‌ ಸೀಸನ್‌-14ಕ್ಕೆ ಈ ವಾರ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಬರಲಿದ್ದಾರೆ. ಇತ್ತೀಚೆಗೆ ಈ ಶೋಗೆ ಖ್ಯಾತ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
Vijaya Karnataka Web verendra-heggade


ಚಾನೆಲ್‌ನ ವ್ಯಕ್ತಿಯೊಬ್ಬರು ಮಾತನಾಡಿ 'ವೀರೇಂದ್ರ ಹೆಗ್ಗಡೆಯಂಥವರು ನಮ್ಮ ಶೋಗೆ ವಿಶೇಷ ಅತಿಥಿಯಾಗಿರುವುದು ಒಂದು ಹೆಮ್ಮೆಯ ವಿಷಯ. ಅಂತಹ ಮಹಾನ್‌ ವ್ಯಕ್ತಿಗಳ ಮುಂದೆ ಸ್ಪರ್ಧಿಗಳು ಹಾಡಲಿದ್ದು, ಅವರು ಸಹ ಎಕ್ಸೈಟ್‌ ಆಗಿದ್ದಾರೆ,'ಎಂದು ಚಾನೆಲ್‌ನ ಮೂಲಗಳು ತಿಳಿಸಿವೆ.

ಇದೇ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ಪ್ರಸಾರವಾಗಲಿದೆ. ಕಳೆದ ವಾರ ಹಳೆಯ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚೆನ್ನಪ್ಪ, ಮೆಹಬೂಬ್ ಸಾಬ್, ಸಂಚಿತ್ ಹೆಗಡೆ ಮತ್ತು ಸುಹಾನಾ ಭಾಗಿಯಾಗಿದ್ದರು. ಇವೆಲ್ಲಾ ಸ್ಪರ್ಧಿಗಳಾದ ಲಕ್ಷ್ಮಿ, ಜ್ಞಾನೇಶ್, ರುಚಿತಾ ಮತ್ತು ತೇಜಸ್ ಜತೆಗೆ ಹಾಡಿ ರಂಜಿಸಿದರು. ರಾಜ್ಯದ ಉದಯೋನ್ಮುಖ ಗಾಯಕರನ್ನು ಬೆಳಕಿಗೆ ತರುತ್ತಿರುವ ಈ ಕಾರ್ಯಕ್ರಮದ ತೀರ್ಪುಗಾರರು ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ