ಆ್ಯಪ್ನಗರ

'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ 'ಲಕ್ಷ್ಮೀ ಬಾರಮ್ಮ ಸೀರಿಯಲ್' ತಂಡ: ಏನು ವಿಶೇಷ?

ಆರಕ್ಕಿಂತ ಹೆಚ್ಚು ವರ್ಷಗಳ ಕಾಲ ಪ್ರಸಾರವಾಗಿದ್ದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮುಕ್ತಾಯವಾಗಿ ಕೆಲ ತಿಂಗಳುಗಳು ಕಳೆದಿವೆ. ಈ ನಡುವೆ ಈ ಸೀರಿಯಲ್‌ ತಂಡ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದೆ. ಕಾರಣ ಏನು? ಸಂಕ್ತಿಪ್ತ ಮಾಹಿತಿ ಇಲ್ಲಿದೆ.

Vijaya Karnataka Web 25 Oct 2020, 1:18 pm
ದಸರಾ ವಿಶೇಷವಾಗಿ ಈಗಾಗಲೇ ಬಹುತೇಕ ಎಲ್ಲ ಧಾರಾವಾಹಿಗಳಲ್ಲಿ ವಿಶೇಷ ಎಪಿಸೋಡ್ ಪ್ರಸಾರ ಮಾಡಲಾಗಿದೆ. ಅದರ ಜೊತೆಗೆ ಸಿನಿಮಾ ನಟಿಯರು ಧಾರಾವಾಹಿಗಳಲ್ಲಿ ದೇವಿ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಎಪಿಸೋಡ್‌ಗೆ ಮೆರುಗು ನೀಡಲಾಗಿತ್ತು, ಕಥೆಗೂ ಕೂಡ ದೊಡ್ಡ ಟ್ವಿಸ್ಟ್ ಸಿಕ್ಕಿತ್ತು. ಅಂತೆಯೇ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಟಿ ದೀಪ್ತಿ ಮಾನೆ ಆಗಮಿಸಿದ್ದರು. ಈಗ 'ಲಕ್ಷ್ಮೀ ಬಾರಮ್ಮ' ತಂಡ 'ನಮ್ಮನೆ ಯುವರಾಣಿ' ಧಾರಾವಾಹಿಯ ಭಾಗವಾಗಿದೆ.
Vijaya Karnataka Web dasara 2020 lakshmi baramma serial cast enters to nammane yuvarani serial special episode
'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ 'ಲಕ್ಷ್ಮೀ ಬಾರಮ್ಮ ಸೀರಿಯಲ್' ತಂಡ: ಏನು ವಿಶೇಷ?


ರಶ್ಮಿ ಪ್ರಭಾಕರ್ ಅನುಪಸ್ಥಿತಿ

ಹೌದು, 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟ ಚಂದು ಬಿ ಗೌಡ, ನೇಹಾ ರಾಮಕೃಷ್ಣ, ಅನಿಕಾ ಸಿಂಧ್ಯ ಅವರು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಕೂಡ ಮುಕ್ತಾಯವಾಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರಶ್ಮಿ ಪ್ರಭಾಕರ್ ಅವರು ಮಾತ್ರ ಈ ವಿಶೇಷ ಎಪಿಸೋಡ್‌ನಲ್ಲಿ ಭಾಗಿಯಾಗಿರಲಿಲ್ಲ. ಅವರು ಪರಭಾಷೆಗಳಲ್ಲಿ ನಟಿಸುತ್ತಿರುವ ಕಾರಣ ಧಾರಾವಾಹಿಯಲ್ಲಿ ನಟಿಸಲಾಗದಿರುವ ಸಾಧ್ಯತೆಯಿದೆ.

ಈ ತಿಂಗಳೇ ಚಂದು ಬಿ ಗೌಡ ಮದುವೆ

ಇನ್ನು ನಟ ಚಂದು ಬಿ ಗೌಡ ಅವರು ಪರಭಾಷೆಯ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರ ಕೈಯಲ್ಲಿ ಸಿನಿಮಾ, ವೆಬ್‌ಸಿರೀಸ್‌ಗಳಿವೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಚಾಟ್ ಕಾರ್ನರ್' ಎಂಬ ಶೋವನ್ನು ಅವರು ನಿರ್ವಹಣೆ ಮಾಡಲಿದ್ದಾರೆ. ಇನ್ನು ಇದೇ ತಿಂಗಳು ಅವರ ಮದುವೆ ಕೂಡ ನಡೆಯಲಿದೆ. ನೇಹಾ ಗೌಡ ಅವರು ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಅನಿಕಾ ಸಿಂಧ್ಯ ಅವರು 'ಪ್ರೇಮಲೋಕ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು, ಆದರೆ ಕೆಲದಿನಗಳ ಹಿಂದೆ ಆ ಸೀರಿಯಲ್ ಮುಕ್ತಾಯವಾಗಿದೆ.

Also Read-'ಕನ್ನಡತಿ'ಗೆ ಭಾವನಾ, 'ನಮ್ಮನೆ ಯುವರಾಣಿ' ಧಾರಾವಾಹಿಗೆ ದೀಪ್ತಿ ಮಾನೆ ಎಂಟ್ರಿ: ಕಾರಣ?

ಹೊಸ ಪಾತ್ರದ ಎಂಟ್ರಿ!
ಇನ್ನು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗುತ್ತಿವೆ, ಇಷ್ಟುದಿನ ಕಾಪಾಡಿಕೊಂಡು ಬಂದಿದ್ದ ಅಹಲ್ಯಾ ರಹಸ್ಯಗಳೆಲ್ಲ ಈಗ ಒಂದೊಂದಾಗಿ ಹೊರಬರುವಂತೆ ಕಾಣುತ್ತಿವೆ. ಈ ನಡುವೆ ಅಹಲ್ಯಾ ಮುಖವಾಡವನ್ನು ಮೀರಾ, ಅನಿಕೇತ್ ಹೇಗೆ ಕಳಚುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅದರ ಜೊತೆಗೆ ಈ ಸೀರಿಯಲ್‌ಗೆ ಹೊಸ ನಟಿಯ ಎಂಟ್ರಿಯಾಗಿದ್ದು, ಅವರು ಯಾರು? ಈ ಧಾರಾವಾಹಿಯಲ್ಲಿ ಅವರ ಪಾತ್ರವೇನು? ಎಂಬುದನ್ನು ಕಾದು ನೋಡಬೇಕಾಗಿದೆ.

Also Read-ಆ ಪ್ರೀತಿ ನೋಡಿದಾಗ ಎಷ್ಟು ಖುಷಿಯಾಯ್ತೋ ಅಷ್ಟೇ ಬೇಸರವಾಯ್ತು: 'ನಮ್ಮನೆ ಯುವರಾಣಿ' ನಟ ದೀಪಕ್ ಗೌಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ