ಆ್ಯಪ್ನಗರ

ನನಗೆ ಸಮೀರ್‌ ಅಷ್ಟೊಂದು ಇಷ್ಟವಿಲ್ಲ: ದಯಾಳ್‌

ಮೂರನೇ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿ ದಯಾಳ್‌. ಇತರ ಸ್ಪರ್ಧಿಗಳ ಬಗ್ಗೆ ದಯಾಳ್‌ಗಿರುವ ಅಭಿಪ್ರಾಯವೇನು?

Vijaya Karnataka Web 5 Nov 2017, 4:07 pm
ಮೂರನೇ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿ ದಯಾಳ್‌. ಇತರ ಸ್ಪರ್ಧಿಗಳ ಬಗ್ಗೆ ದಯಾಳ್‌ಗಿರುವ ಅಭಿಪ್ರಾಯವೇನು ಎಂದು ತಿಳಿಯುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ. ಈ ಕಾರಣಕ್ಕಾಗಿ ಕಲರ್ಸ್‌ ಸೂಪರ್‌ ವಾಹಿನಿಯವರು ಒಂದು ಚಿಕ್ಕ ತುಣುಕನ್ನು ಬಿಡುಗಡೆ ಮಾಡಿದ್ದಾರೆ.
Vijaya Karnataka Web dayal opinion about bigg boss contestants
ನನಗೆ ಸಮೀರ್‌ ಅಷ್ಟೊಂದು ಇಷ್ಟವಿಲ್ಲ: ದಯಾಳ್‌


'ಸೂಪರ್‌ ಸಂಡೇ ವಿತ್‌ ಕಿಚ್ಚ' ಎಪಿಸೋಡ್‌ನಲ್ಲಿ ಬಿಗ್‌ ಮನೆಯಿಂದ ಎಲಿಮಿನೇಟ್‌ ಆದ ಸ್ಪರ್ಧಿ ಭಾಗವಹಿಸಿ, ಬಿಗ್‌ಬಾಸ್‌ ಮತ್ತು ಸ್ಪರ್ಧಿಗಳ ಬಗ್ಗೆ ತಮಗಿರುವ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ನಿರ್ದೇಶಕ ದಯಾಳ್‌ ಕೂಡ ಕಿಚ್ಚನ ಮುಂದೆ ಬಿಗ್‌ಬಾಸ್‌ ಸ್ಪರ್ಧಿಗಳ ಕುರಿತು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.



ಈ ವೀಡಿಯೋ ತುಣುಕಿನಲ್ಲಿ ಕಿಚ್ಚ ಸುದೀಪ್‌ ದಯಾಳ್‌ ಅವರಿಗೆ ಒಂದಿಷ್ಟು ಸ್ಪರ್ಧಿಗಳ ಫೋಟೋ ತೋರಿಸಿದ್ದಾರೆ. ಆಯಾ ಸ್ಪರ್ಧಿಗಳ ಫೋಟೋ ನೋಡುತ್ತ ದಯಾಳ್‌ ತಮ್ಮ ಅಭಿಪ್ರಾಯವನ್ನು ಕಿಚ್ಚನ ಮುಂದೆ ಹೇಳಿದ್ದಾರೆ. ದಯಾಳ್‌ ಪ್ರಕಾರ ಸಿಹಿ ಕಹಿ ಚಂದ್ರು ಸೂಪರ್‌ ಗೇಮ್‌ ಪ್ಲೇಯರ್‌ ಅಂತೆ. ಇನ್ನು ಜೆಕೆ ತುಂಬಾ ಕ್ಲೀನಾಗಿ ಬ್ಯಾಟಿಂಗ್‌ ಆಡ್ತಾರೆ ಎಂದ ದಯಾಳ್‌, ಸಮೀರ್‌ ಆಚಾರ್ಯ ಫೋಟೋ ಬಂದಾಗ 'ನನಗಿವರು ಅಷ್ಟೊಂದು ಇಷ್ಟವಾಗಲ್ಲ' ಎಂದು ಹೇಳಿದ್ದಾರೆ. ಇನ್ನು ದಯಾಳ್‌ ಕಂಡಂತೆ ಉಳಿದ ಸ್ಪರ್ಧಿಗಳು ಹೇಗೆ ಎಂಬ ಉತ್ತರಕ್ಕೆ ರವಿವಾರದ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ