ಆ್ಯಪ್ನಗರ

'ರಾಮಾಯಣ', 'ಮಹಾಭಾರತ' ಬಳಿಕ 'ಶ್ರೀ ಕೃಷ್ಣ' ದರ್ಶನ! ಕಿರುತೆರೆ ವೀಕ್ಷಕರಿಗಾಗಿ ಮತ್ತೊಂದು ಹಳೇ ಧಾರಾವಾಹಿ

ಲಾಕ್‌ಡೌನ್‌ ಸಮಯದಲ್ಲಿ ಜನರನ್ನು ರಂಜಿಸಲು ಹಳೇ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲಾಗುತ್ತಿದೆ. ಆ ಧಾರಾವಾಹಿಗಳ ಸಾಲಿಗೆ 'ಶ್ರೀ ಕೃಷ್ಣ' ಕೂಡ ಸೇರ್ಪಡೆ ಆಗುತ್ತಿದೆ. ಈ ಸುದ್ದಿ ಕೇಳಿದರೆ ಕಿರುತೆರೆ ಪ್ರೇಕ್ಷಕರು ಖುಷಿ ಆಗೋದು ಖಂಡಿತಾ.

Vijaya Karnataka Web 24 Apr 2020, 6:20 pm
ರಾಮಾಯಣ ಮತ್ತು ಮಹಾಭಾರತ ರೀತಿಯೇ ದಶಕಗಳ ಹಿಂದೆ ಭಾರಿ ಜನಪ್ರಿಯತೆ ಪಡೆದ ಧಾರಾವಾಹಿ ಎಂದರೆ ಅದು 'ಶ್ರೀ ಕೃಷ್ಣ'. ರಾಮಾಯಣ ಧಾರಾವಾಹಿಯನ್ನು ನಿರ್ದೇಶಿಸಿದ್ದ ರಮಾನಂದ್‌ ಸಾಗರ್‌ ಅವರೇ 'ಶ್ರೀ ಕೃಷ್ಣ' ಧಾರಾವಾಹಿಗೂ ಆ್ಯಕ್ಷನ್‌-ಕಟ್ ಹೇಳಿದ್ದರು. ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ಮತ್ತೆ ಸಿಗುತ್ತಿದೆ.
Vijaya Karnataka Web dd bharati to re telecast shri krishna serial after the success of ramayan and mahabharat
'ರಾಮಾಯಣ', 'ಮಹಾಭಾರತ' ಬಳಿಕ 'ಶ್ರೀ ಕೃಷ್ಣ' ದರ್ಶನ! ಕಿರುತೆರೆ ವೀಕ್ಷಕರಿಗಾಗಿ ಮತ್ತೊಂದು ಹಳೇ ಧಾರಾವಾಹಿ


ದೂರದರ್ಶನದಲ್ಲಿ ಮರು ಪ್ರಸಾರವಾದ 'ರಾಮಾಯಣ' ಮತ್ತು 'ಮಹಾಭಾರತ' ಧಾರಾವಾಹಿಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ, ಇಂಥ ಕಾರ್ಯಕ್ರಮಗಳಿಗೆ ಜನರಿಂದ ಬೇಡಿಕೆ ಕೂಡ ಬರುತ್ತಿದೆ. ಹಾಗಾಗಿ 'ಶ್ರೀ ಕೃಷ್ಣ' ಧಾರಾವಾಹಿಯನ್ನು ಪ್ರಸಾರ ಮಾಡಲು 'ಡಿಡಿ ಭಾರತಿ' ವಾಹಿನಿ ನಿರ್ಧರಿಸಿದೆ.

ಕೌತುಕ ಮೂಡಿಸಿದ ಪ್ರೋಮೋ
ಈ ಮಾಹಿತಿಯನ್ನು ಪ್ರಸಾರ ಭಾರತಿ ವಾಹಿನಿಯ ಸಿಇಓ ಶಶಿ ಶೇಖರ್‌ ಖಚಿತ ಪಡಿಸಿದ್ದಾರೆ. ಧಾರಾವಾಹಿಯ ಒಂದು ಪ್ರೋಮೋವನ್ನು ವಾಹಿನಿ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ಮೂಲಕ ವೀಕ್ಷಕರಲ್ಲಿ ಕೌತುಕ ಮೂಡಿದೆ. ಆದರೆ ಯಾವಾಗಿನಿಂದ ಪ್ರಸಾರ ಆಗಲಿದೆ ಮತ್ತು ಸಮಯ ಏನು ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

'ಮಹಾಭಾರತ'ದ ದ್ರೌಪದಿ ಮೇಲೂ ಆಗಿತ್ತು ಗುಂಪು ಹಲ್ಲೆ! ಶಾಕಿಂಗ್‌ ಘಟನೆಯ ವಿವರ ಬಹಿರಂಗ!

ಹೊಸ ತಲೆಮಾರಿನ ವೀಕ್ಷಕರಿಗಾಗಿ ಮರುಪ್ರಸಾರ
1993ರಿಂದ 1996ರವರೆಗೆ 'ದೂರದರ್ಶನ' ವಾಹಿನಿಯಲ್ಲಿ 'ಶ್ರೀ ಕೃಷ್ಣ' ಧಾರಾವಾಹಿ ಪ್ರಸಾರ ಆಗಿತ್ತು. ಸ್ವಪ್ನಿಲ್‌ ಜೋಷಿ ಹಾಗೂ ಸರ್ವದಾಮನ್‌ ಬ್ಯಾನರ್ಜಿ ಅವರು ಕೃಷ್ಣನಾಗಿ ಕಾಣಿಸಿಕೊಂಡಿದ್ದರು. ಇಂದಿನ ತಲೆಮಾರಿನ ಕಿರುತೆರೆ ವೀಕ್ಷಕರಿಗೂ ಈ ಧಾರಾವಾಹಿ ಇಷ್ಟ ಆಗಲಿದೆ ಎಂಬ ನಂಬಿಕೆ ಮೇರೆಗೆ 'ಡಿಡಿ ಭಾರತಿ' ವಾಹಿನಿಯು ಶೀಘ್ರದಲ್ಲೇ ಮರುಪ್ರಸಾರ ಆರಂಭಿಸಲಿದೆ.

ದೂರದರ್ಶನ ವಾಹಿನಿಯನ್ನು ನಂಬರ್ ಒನ್ ಸ್ಥಾನಕ್ಕೆ ತಂದ ರಾಮಾಯಣ, ಮಹಾಭಾರತ
--------------------------------------
ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಉತ್ತರಿಸಿ
1. ಲಾಕ್‌ಡೌನ್‌ ಸಮಯದಲ್ಲಿ ನೀವು ನೋಡಿದ ಅತ್ಯುತ್ತಮ ಟಿವಿ ಕಾರ್ಯಕ್ರಮ ಯಾವುದು?

33 ವರ್ಷಗಳ ಬಳಿಕ ಬಂದ ಸೀತಾ ಮಾತೆ! ನಟಿ ದೀಪಿಕಾ ಚಿಕ್ಲಿಯಾ ವಿಶೇಷ ಸಂದರ್ಶನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ