ಆ್ಯಪ್ನಗರ

ಟಿಆರ್‌ಪಿ ರೇಸ್‌ನಲ್ಲಿ 'ಮಂಗಳ ಗೌರಿ ಮದುವೆ'ಯನ್ನು ಹಿಂದಿಕ್ಕಿದ 'ನಾಗಿಣಿ 2'! ಯಾರಿಗೆ ಎಷ್ಟನೇ ಸ್ಥಾನ?

ಲಾಕ್‌ಡೌನ್‌ನಿಂದ ಉಂಟಾಗಿದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಕಿರುತೆರೆ ಸೀರಿಯಲ್‌ಗಳು ಮುನ್ನುಗ್ಗುತ್ತಿವೆ. ಜನಪ್ರಿಯ ಧಾರಾವಾಹಿಗಳ ನಡುವೆ ಟಿಆರ್‌ಪಿ ರೇಸ್‌ ಜೋರಾಗಿದೆ. ಕನ್ನಡದ ಟಾಪ್‌ ಧಾರಾವಾಹಿಗಳ ಲೇಟೆಸ್ಟ್‌ ಟಿಆರ್‌ಪಿ ರಿಪೋರ್ಟ್‌ ಇಲ್ಲಿದೆ.

Authored byಟೀನಾ | Vijaya Karnataka Web 28 Nov 2020, 12:27 pm
ಕನ್ನಡ ಕಿರುತೆರೆ ಲೋಕದಲ್ಲಿ ಹಲವು ಧಾರಾವಾಹಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬೇರೆ ಬೇರೆ ತಂತ್ರಗಳ ಮೂಲಕ ವೀಕ್ಷಕರನ್ನು ಸೆಳೆದುಕೊಳ್ಳಲು ಸೀರಿಯಲ್‌ಗಳು ಪ್ರಯತ್ನಿಸುತ್ತಿವೆ. ಲಾಕ್‌ಡೌನ್‌ ನಿಯಮಾವಳಿಗಳನ್ನು ಪಾಲಿಸಿಕೊಂಡು ಚಿತ್ರೀಕರಣ ಮಾಡುತ್ತಲೇ ಟಿಆರ್‌ಪಿ ರೇಸ್‌ನಲ್ಲಿ ಸೆಣಸಾಡುತ್ತಿವೆ.
Vijaya Karnataka Web ಮಂಗಳ ಗೌರಿ ಮದುವೆ, ನಾಗಿಣಿ 2


ಇಷ್ಟು ದಿನ ತನ್ನ ಫಾರ್ಮ್‌ ಕಾಪಾಡಿಕೊಂಡಿದ್ದ 'ಮಂಗಳ ಗೌರಿ ಮದುವೆ' ಸೀರಿಯಲ್‌ಗೆ ಈಗ ಕೊಂಚ ಹಿನ್ನಡೆ ಆಗಿದೆ. ಟಾಪ್‌ 5 ಧಾರಾವಾಹಿಗಳ ಪೈಕಿ ಕೆಲವು ವಾರಗಳಿಂದ ನಾಲ್ಕನೇ ಸ್ಥಾನ ಕಾಯ್ದುಕೊಂಡು ಬಂದಿದ್ದ ಈ ಸೀರಿಯಲ್‌ ಈಗ ಟಾಪ್‌ 5 ರೇಸ್‌ನಿಂದ ಹೊರಬಿದ್ದಿದೆ! ಇತ್ತೀಚೆಗೆ ಟಾಪ್‌ 5 ಪಟ್ಟಿಗೆ ಸೇರಿಕೊಂಡಿದ್ದ 'ಮಹಾನಾಯಕ ಬಿಆರ್‌ ಅಂಬೇಡ್ಕರ್‌' ಧಾರಾವಾಹಿ ಕೂಡ ಈ ಪಟ್ಟಿಯಿಂದ ಹೊರಬಿದ್ದಿದೆ.

'ನಾಗಿಣಿ 2' ಧಾರಾವಾಹಿಗೆ ನಟಿ ದೀಪಿಕಾ ದಾಸ್‌ ಮರಳಿದ್ದಾರೆ. ದೊಡ್ಡದೊಂದು ಗ್ಯಾಪ್‌ ಬಳಿಕ ಅವರು ಮತ್ತೆ ಈ ಸೀರಿಯಲ್‌ಗಾಗಿ ಬಣ್ಣ ಹಚ್ಚುತ್ತಿದ್ದಾರೆ. ಅಮೃತಾ ಪಾತ್ರಧಾರಿಯಾಗಿ ಅವರು ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅವರ ಆಗಮನದ ನಂತರ 'ನಾಗಿಣಿ 2' ಸೀರಿಯಲ್‌ ಟಿಆರ್‌ಪಿ ಏರಿಕೆ ಕಾಣುತ್ತಿದೆ. 'ಮಂಗಳ ಗೌರಿ ಮದುವೆ'ಯನ್ನು ಹಿಂದಿಕ್ಕಿರುವ ಈ ಧಾರಾವಾಹಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

also read: ತಮಿಳುನಾಡಿಗೂ ಹಬ್ಬಿದ 'ಮಂಗಳಗೌರಿ ಮದುವೆ' ಧಾರಾವಾಹಿಯ ಹವಾ!

5ನೇ ಸ್ಥಾನದಲ್ಲಿ 'ಕಮಲಿ' ಧಾರಾವಾಹಿ ಇದೆ. ಈ ಸೀರಿಯಲ್‌ ಪ್ರಸಾರ ನಿಲ್ಲಿಸಬಹುದು ಎಂಬ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಆದರೆ ಇದರ ಟಿಆರ್‌ಪಿಯಲ್ಲಿ ಈಗ ಏರಿಕೆ ಆಗಿದೆ. ನಂ.1 ಪಟ್ಟದಲ್ಲಿ 'ಗಟ್ಟಿಮೇಳ' ಧಾರಾವಾಹಿ ಮುಂದುವರಿಯುತ್ತಿದೆ. ಅನಿರುದ್ಧ-ಮೇಘಾ ಶೆಟ್ಟಿ ನಟನೆಯ 'ಜೊತೆಜೊತೆಯಲಿ' 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 'ಪಾರು' ಧಾರಾವಾಹಿ ಇದೆ.

also read: ನಾಗಿಣಿ 2 ಧಾರಾವಾಹಿಯಲ್ಲಿ ಆದಿಶೇಷ ಯಾರು ಅಂತ ರಿವೀಲ್ ಮಾಡಲಿರುವ ನಟಿ ದೀಪಿಕಾ ದಾಸ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ