ಆ್ಯಪ್ನಗರ

ರಾಧಾ ರಮಣ ಧಾರಾವಾಹಿಯ 'ದಿನಕರ' ಇನ್ನಿಲ್ಲ!

ಈ ಧಾರಾವಾಹಿಯಲ್ಲಿ ಆಶಿಕಾ ಚಂದ್ರಪ್ಪ ಅವರು ಆವನಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಆಶಿಕಾ, "ಇನ್ನು ಮುಂದೆ ರಾಧಾ ರಮಣದ ದಿನಕರ ಪಾತ್ರ ಇರಲ್ಲ. ಯಾಕೆಂದರೆ ದಿನಕರ ಇನ್ನಿಲ್ಲ" ಎಂದಿದ್ದಾರೆ.

Vijaya Karnataka Web 5 Mar 2019, 6:03 pm
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಧಾ ರಮಣ. ಈ ಧಾರಾವಾಹಿಯ ಮುಖ್ಯ ಪಾತ್ರ ದಿನಕರನದು. ಇನ್ನು ಮುಂದೆ ಆ ಪಾತ್ರ ಕಾಣಲ್ಲ. ಯಾಕೆಂದರೆ ರಾಧಾ ರಮಣದ ದಿನಕರ ಇನ್ನಿಲ್ಲ. ಈ ಪಾತ್ರವನ್ನು ಪೋಷಿಸುತ್ತಿದ್ದವರು ನೆ ಲ ನರೇಂದ್ರ ಬಾಬು.
Vijaya Karnataka Web radha-ramana


ರಾಧಾ ರಮಣರಿಗೆ ನಿಜವಾದ ಆವನಿ ಯಾರು ಎಂದು ತಿಳಿಸಬೇಕಾಗಿತ್ತು. ಆ ಸಂದರ್ಭದಲ್ಲೇ ದಿನಕರನ ಪಾತ್ರ ಅಂತ್ಯವಾಗಿದೆ. ಮಂಜನಿಗೆ ಸುಪಾರಿ ನೀಡಿ ದಿನಕರ ಮತ್ತು ಆವನಿಯನ್ನು ಮುಗಿಸಲು ಹೇಳಿದ್ದಳು ಸಿತಾರಾದೇವಿ. ಆದರೆ ದಿನಕರನ್ನು ಮುಗಿಸಲು ಮಾತ್ರ ಮಂಜ ಯಶಸ್ವಿಯಾಗಿದ್ದಾನೆ. ಆವನಿ ಬಜಾವ್ ಆಗಿದ್ದಾಳೆ.

ಈ ಧಾರಾವಾಹಿಯಲ್ಲಿ ಆಶಿಕಾ ಚಂದ್ರಪ್ಪ ಅವರು ಆವನಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಆಶಿಕಾ, "ಇನ್ನು ಮುಂದೆ ರಾಧಾ ರಮಣದ ದಿನಕರ ಪಾತ್ರ ಇರಲ್ಲ. ಯಾಕೆಂದರೆ ದಿನಕರ ಇನ್ನಿಲ್ಲ" ಎಂದಿದ್ದಾರೆ.

ರಾಧಾ ರಮಣ ಒಡಹುಟ್ಟಿದವರ ಬಾಂಧವ್ಯ ಬೆಸೆಯುವ ಕತೆ. ಹುಟ್ಟುತ್ತಾ ಒಡಹುಟ್ಟಿದವರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಸದಾ ಸತ್ಯ. ಒಂದೇ ತಾಯಿಯ ಮಡಿಲಿನಲ್ಲಿ ಹುಟ್ಟಿದವರೂ ವರ್ತನೆ, ಸ್ವಭಾವದಲ್ಲಿ ತದ್ವಿರುದ್ಧರಾಗಿರುವುದು ಸಾಮಾನ್ಯ. ಆದರೆ ರಮಣನ ಕುಟುಂಬ ವಿಭಿನ್ನ ಮತ್ತು ವಿಶೇಷ. ಇಲ್ಲಿ ದಾಯಾದಿಗಳ ಹಗೆತನ ಇಲ್ಲ.

ಕನ್ನಡ ಪ್ರಾಧ್ಯಾಪಕಿ ಆರಾಧನಾ ಮತ್ತು ಬ್ಯುಸಿನೆಸ್‍ನಲ್ಲಿ ತೊಡಗಿರುವ ಇಂಗ್ಲಿಷ್ ಹುಡುಗ ರಮಣನ ನಡುವೆ ನಡೆಯುವ ಕತೆ. ಆರಾಧನಾ ಅಣ್ಣ ಮತ್ತು ರಮಣನ ತಂಗಿಗೆ ನಡೆಯುವ ಮದುವೆ ಜೊತೆ ಆರಂಭವಾಗುವ ಈ ಧಾರಾವಾಹಿ, ಕನ್ನಡ ಮನಸುಗಳಿಗೆ ಹತ್ತಿರವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕಲರ್ಸ್ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಹಾರೀಸ್. ಆರಂಭದಲ್ಲಿ ದಿನಕರ್ ಪ್ರಸಾದ್ ಪಾತ್ರವನ್ನು ರಾಜ್ ಗೋಪಾಲ್ ಜೋಷಿ ಪೋಷಿಸುತ್ತಿದ್ದರು. ಬಳಿಕ ನೆ ಲ ನರೇಂದ್ರ ಬಾಬು ಈ ಪಾತ್ರಕ್ಕೆ ಆಗಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ