ಆ್ಯಪ್ನಗರ

ಒಂದು ಕಾಲದಲ್ಲಿ ಊಟಕ್ಕಾಗಿ ಒದ್ದಾಡ್ತಿದ್ದ ನಟಿ, ನಿರ್ದೇಶಕಿ ಶ್ರುತಿ ನಾಯ್ಡು ಈಗ ಹಲವರಿಗೆ ಅನ್ನದಾತೆ !

ನಿರ್ದೇಶಕಿ ಶ್ರುತಿ ನಾಯ್ಡು ಧಾರಾವಾಹಿ, ಸಿನಿಮಾ ಮೂಲಕ ಖ್ಯಾತಿ ಪಡೆದವರು. ನಿರೂಪಕಿ, ನಟಿಯಾಗಿರೂ ಅವರು ಕೆಲಸ ಮಾಡಿದ್ದಾರೆ. ಇಂದು ಅವರು ಮಾಡಿರುವ ಹಣ, ಹೆಸರು ಸುಖಾ ಸುಮ್ಮನೆ ಬಂದಿಲ್ಲ. ಟಿ.ಎನ್.ಸೀತಾರಾಮ್ ನಿರ್ದೇಶನದ 'ಮುಕ್ತಾ' ಧಾರಾವಾಹಿಯಲ್ಲಿ, ವಿನು ಬಳಂಜ ಅವರ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ರಮೇಶ್ ಇಂದಿರಾ ನಿರ್ದೇಶನದ 'ನಮ್ಮಮ್ಮ ಶಾರದೆ' ಧಾರಾವಾಹಿ ಬಳಗವನ್ನು ಸೇರಿದರು ಶ್ರುತಿ. ಹಾಗೆಯೇ ಶ್ರುತಿ ಅವರ ಕಿರುತೆರೆ ಪಯಣ ಸಾಗುತ್ತ ಹೋಯ್ತು.

ಬೆಂಗಳೂರಿನಲ್ಲಿ ಊಟಕ್ಕಾಗಿ ಶ್ರುತಿ ಕಷ್ಟಪಟ್ಟಿದ್ದರು. ಆ ದಿನಗಳು ಇಂದೂ ಅವರಿಗೆ ನೆನಪಿದೆ. ಹೀಗಾಗಿ ಮೈಸೂರಿನಲ್ಲಿ ಮೈಸೂರು ಮಿರ್ಚಿ ಎಂಬ ಹೋಟೆಲ್ ಆರಂಭಿಸಿದ್ದಾರೆ. ಇದನ್ನು ಉದ್ಘಾಟನೆ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಮನೆಯಲ್ಲಿದ್ದಾಗ ಊಟ ಚೆಲ್ಲುತ್ತಿದ್ದ ಇವರು, ಬೆಂಗಳೂರಿಗೆ ಹೋದ್ಮೇಲೆ ಊಟ ಸಿಗೋದು ಎಷ್ಟು ಕಷ್ಟ ಅಂತ ಗೊತ್ತಾಯ್ತು. ಹೀಗಾಗಿ ಇಂದು ಅವರು ಕಡಿಮೆ ಬೆಲೆಗೆ ಆಹಾರ ಸಿಗುವ ಹೋಟೆಲ್ ಆರಂಭಿಸಬೇಕು ಎಂದು ಕನಸು ಕಂಡಿದ್ದರು. ಅದರ ಪ್ರತಿಫಲವೇ 'ಮೈಸೂರು ಮಿರ್ಚಿ' ಹೋಟೆಲ್.

Vijaya Karnataka Web 30 Mar 2020, 4:11 pm
ನಿರ್ದೇಶಕಿ ಶ್ರುತಿ ನಾಯ್ಡು ಧಾರಾವಾಹಿ, ಸಿನಿಮಾ ಮೂಲಕ ಖ್ಯಾತಿ ಪಡೆದವರು. ನಿರೂಪಕಿ, ನಟಿಯಾಗಿರೂ ಅವರು ಕೆಲಸ ಮಾಡಿದ್ದಾರೆ. ಇಂದು ಅವರು ಮಾಡಿರುವ ಹಣ, ಹೆಸರು ಸುಖಾ ಸುಮ್ಮನೆ ಬಂದಿಲ್ಲ. ಟಿ.ಎನ್.ಸೀತಾರಾಮ್ ನಿರ್ದೇಶನದ 'ಮುಕ್ತಾ' ಧಾರಾವಾಹಿಯಲ್ಲಿ, ವಿನು ಬಳಂಜ ಅವರ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ರಮೇಶ್ ಇಂದಿರಾ ನಿರ್ದೇಶನದ 'ನಮ್ಮಮ್ಮ ಶಾರದೆ' ಧಾರಾವಾಹಿ ಬಳಗವನ್ನು ಸೇರಿದರು ಶ್ರುತಿ. ಹಾಗೆಯೇ ಶ್ರುತಿ ಅವರ ಕಿರುತೆರೆ ಪಯಣ ಸಾಗುತ್ತ ಹೋಯ್ತು.
Vijaya Karnataka Web director and producer shruti naidu owned restaurant distributes food to needy people in mysuru
ಒಂದು ಕಾಲದಲ್ಲಿ ಊಟಕ್ಕಾಗಿ ಒದ್ದಾಡ್ತಿದ್ದ ನಟಿ, ನಿರ್ದೇಶಕಿ ಶ್ರುತಿ ನಾಯ್ಡು ಈಗ ಹಲವರಿಗೆ ಅನ್ನದಾತೆ !


ಬೆಂಗಳೂರಿನಲ್ಲಿ ಊಟಕ್ಕಾಗಿ ಶ್ರುತಿ ಕಷ್ಟಪಟ್ಟಿದ್ದರು. ಆ ದಿನಗಳು ಇಂದೂ ಅವರಿಗೆ ನೆನಪಿದೆ. ಹೀಗಾಗಿ ಮೈಸೂರಿನಲ್ಲಿ ಮೈಸೂರು ಮಿರ್ಚಿ ಎಂಬ ಹೋಟೆಲ್ ಆರಂಭಿಸಿದ್ದಾರೆ. ಇದನ್ನು ಉದ್ಘಾಟನೆ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಮನೆಯಲ್ಲಿದ್ದಾಗ ಊಟ ಚೆಲ್ಲುತ್ತಿದ್ದ ಇವರು, ಬೆಂಗಳೂರಿಗೆ ಹೋದ್ಮೇಲೆ ಊಟ ಸಿಗೋದು ಎಷ್ಟು ಕಷ್ಟ ಅಂತ ಗೊತ್ತಾಯ್ತು. ಹೀಗಾಗಿ ಇಂದು ಅವರು ಕಡಿಮೆ ಬೆಲೆಗೆ ಆಹಾರ ಸಿಗುವ ಹೋಟೆಲ್ ಆರಂಭಿಸಬೇಕು ಎಂದು ಕನಸು ಕಂಡಿದ್ದರು. ಅದರ ಪ್ರತಿಫಲವೇ 'ಮೈಸೂರು ಮಿರ್ಚಿ' ಹೋಟೆಲ್.

ಕಿರುತೆರೆ ಲೋಕದ 'ಗಟ್ಟಿಗಿತ್ತಿ' ಶ್ರುತಿ ನಾಯ್ಡು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್ ವಿತರಣೆ!

'ಚಿ.ಸೌ.ಸಾವಿತ್ರಿ' ಧಾರಾವಾಹಿಗೂ ಶ್ರುತಿ ನಿರ್ದೇಶನ ಮಾಡಿದ್ದಾರೆ. ಇಪ್ಪತ್ತು ವರ್ಷದ ಹಿಂದೆ ಬೆಂಗಳೂರಿಗೆ ಬರಿಗೈನಿಂದ ಬಂದಿದ್ದ ಶ್ರುತಿ ನಾಯ್ಡು ಇಂದು ದೊಡ್ಡ ನಿರ್ಮಾಣ ಸಂಸ್ಥೆಯ ಮುಖ್ಯಸ್ಥೆ. ಬಿಎಂಡಬ್ಲ್ಯೂ ಕಾರ್ ಹೊಂದಿದ್ದಾರೆ ಶ್ರುತಿ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್ ವಿತರಣೆ ಮಾಡಿದ್ದಾರೆ ಶ್ರುತಿ. ಈಗ ಅವರು ಮತ್ತೊಂದು ಒಳ್ಳೆಯ ಕೆಲಸ ಮಾಡಲು ಹೊರಟಿದ್ದಾರೆ. ಎಚ್‌ಡಿ ಕೋಟೆಯ ಬಳ್ಳೆಹಾಡು ಗ್ರಾಮದ ಶಾಲೆಯೊಂದರ ಸ್ಥಿತಿ ನೋಡಿ, ಆ ಶಾಲೆ ರಿಪೇರಿ ಮಾಡಿಸಿದ್ದರು, ಅಷ್ಟೇ ಅಲ್ಲದೆ ಅಲ್ಲಿಗೆ ಒಬ್ಬ ಶಿಕ್ಷಕರು ಬರುವಂತೆ ಮಾಡಿದ್ದರು. ಇದರಿಂದ ಆ ಶಾಲಾ ಮಕ್ಕಳಿಗಾದ ಖುಷಿ ಅಷ್ಟಿಷ್ಟಲ್ಲ.

ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಮಾದರಿಯಾದ ಜನಪ್ರಿಯ ಕನ್ನಡ ಕಿರುತೆರೆ ತಾರೆ

ಮೈಸೂರು ಮಿರ್ಚಿ ಹೋಟೆಲ್‌ನಿಂದ ಆಹಾರ ವಿತರಣೆ

ಹೆಚ್ಚು ಹಿರಿಯ ನಾಗರಿಕರನ್ನು ಹೊಂದಿರುವ ಪ್ರಮುಖ ನಗರಗಳಲ್ಲಿ ಮೈಸೂರು ಕೂಡ ಒಂದು. ರಾಷ್ಟ್ರದಲ್ಲಿ ಹೊರಡಿಸಿರುವ ಆಜ್ಞೆಯಂತೆ ಹೋಟೆಲ್‌ಗಳು ಬಂದ್ ಆಗಿವೆ. ಇನ್ನು ಕೆಲ ಸೇವಾ ಕ್ಷೇತ್ರಗಳ ಕಾರ್ಯ ಸ್ಥಗಿತವಾಗಿವೆ. ಇದರ ಸಹಾಯವಿಲ್ಲದೆ ಹಿರಿಯ ನಾಗರಿಕರು ಅಡುಗೆ ಮಾಡಿಕೊಳ್ಳೋದು ಕಷ್ಟ, ಅವರನ್ನು ಅವರು ನೋಡಿಕೊಳ್ಳೋದು ಕೂಡ ಕಷ್ಟವೇ. ಹೀಗಾಗಿ ಅನಾರ್ಥರು, ಮಕ್ಕಳು, ವೃದ್ಧರಿಗೆ ನಾವು ಆಹಾರ ಪೂರೈಕೆ ಮಾಡುತ್ತಿದ್ದೇವೆ ಎನ್ನುತ್ತಾರೆ ಶ್ರುತಿ. ನೋವಲ್ಲಿರುವ ಎಷ್ಟೋ ಜೀವಗಳಿಗೆ ಶ್ರುತಿ ಸಾಂತ್ವನ ಹೇಳಿದ್ದಾರೆ, ಅವಕಾಶ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಪರಿಶ್ರಮ, ಹಠವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಶ್ರುತಿಯೇ ಸಾಕ್ಷಿ.

ಕಿರುತೆರೆ ತಾರೆಯರ ದೀಪಾವಳಿ ಸಂಭ್ರಮ ಹೀಗಿದೆ ನೋಡಿ

ಮೈಸೂರು ಮಿರ್ಚಿ ರೆಸ್ಟೋರೆಂಟ್‌ನಿಂದ ಉಚಿತ ಊಟ ಪೂರೈಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ