ಆ್ಯಪ್ನಗರ

Doresani: ಅಯ್ಯೋ.. ಆನಂದ್ ಇಷ್ಟ ಇಲ್ಲ ಎಂದುಬಿಟ್ಟಳಲ್ಲಾ ದೀಪಿಕಾ..!

‘ದೊರೆಸಾನಿ’ ಧಾರಾವಾಹಿಯ ಕಥೆ ವೇಗವಾಗಿ ಸಾಗುತ್ತಿದ್ದು, ಇದೀಗ ರೋಚಕ ಹಂತ ತಲಿಪಿದೆ. ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲಿಲ್ಲ ಎಂಬಲ್ಲಿಗೆ ಬಂದು ನಿಂತಿದೆ ‘ದೊರೆಸಾನಿ’ ಧಾರಾವಾಹಿಯ ಕಥೆ. ಗೂಬೆ ಬಾಸ್ ವಿಶ್ವನಾಥನ್ ಆನಂದ್‌ ಅವರನ್ನ ಪುರುಷೋತ್ತಮ್ ಮನಸಾರೆ ಕ್ಷಮಿಸಿದ್ದರೂ, ದೀಪಿಕಾ ಅದ್ಯಾಕೋ ಕ್ಷಮಿಸುತ್ತಿಲ್ಲ. ಮದುವೆ ಗಂಡು ವಿಶ್ವನಾಥನ್ ಆನಂದ್ ತನಗೆ ಇಷ್ಟವಿಲ್ಲ ಎಂದು ದೀಪಿಕಾ ಹೇಳಿಬಿಟ್ಟಿದ್ದಾಳೆ..!

Authored byಹರ್ಷಿತಾ ಎನ್ | Vijaya Karnataka Web 5 May 2022, 10:07 pm

ಹೈಲೈಟ್ಸ್‌:

  • ‘ದೊರೆಸಾನಿ’ ಧಾರಾವಾಹಿಯಲ್ಲಿ ರೋಚಕ ತಿರುವು
  • ಆನಂದ್ ಜೊತೆ ಮದುವೆಯಾಗಲು ಇಷ್ಟವಿಲ್ಲ ಎಂದ ದೀಪಿಕಾ
  • ವಿಘ್ನವಿಲ್ಲದೆ ನಡೆಯುತ್ತಾ ಆನಂದ್ - ದೀಪಿಕಾ ಮದುವೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web doresani serial written update deepika rejects anand
Doresani: ಅಯ್ಯೋ.. ಆನಂದ್ ಇಷ್ಟ ಇಲ್ಲ ಎಂದುಬಿಟ್ಟಳಲ್ಲಾ ದೀಪಿಕಾ..!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ದೊರೆಸಾನಿ’ ಕೂಡ ಒಂದು. ‘ದೊರೆಸಾನಿ’ ಧಾರಾವಾಹಿಯ ಕಥೆ ವೇಗವಾಗಿ ಸಾಗುತ್ತಿದ್ದು, ಇದೀಗ ರೋಚಕ ಹಂತ ತಲಿಪಿದೆ. ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲಿಲ್ಲ ಎಂಬಲ್ಲಿಗೆ ಬಂದು ನಿಂತಿದೆ ‘ದೊರೆಸಾನಿ’ ಧಾರಾವಾಹಿಯ ಕಥೆ. ಗೂಬೆ ಬಾಸ್ ವಿಶ್ವನಾಥನ್ ಆನಂದ್‌ ಅವರನ್ನ ಪುರುಷೋತ್ತಮ್ ಮನಸಾರೆ ಕ್ಷಮಿಸಿದ್ದರೂ, ದೀಪಿಕಾ ಅದ್ಯಾಕೋ ಕ್ಷಮಿಸುತ್ತಿಲ್ಲ. ಮದುವೆ ಗಂಡು ವಿಶ್ವನಾಥನ್ ಆನಂದ್ ತನಗೆ ಇಷ್ಟವಿಲ್ಲ ಎಂದು ದೀಪಿಕಾ ಹೇಳಿಬಿಟ್ಟಿದ್ದಾಳೆ..!
ವಿಶ್ವನಾಥನ್ ಆನಂದ್‌ ಅವರನ್ನ ಕ್ಷಮಿಸಿದ ಪುರುಷೋತ್ತಮ್
ಆಫೀಸ್‌ನಲ್ಲಿ ಬಾಸ್ ವಿಶ್ವನಾಥನ್ ಆನಂದ್ ಹಾಗೂ ಪುರುಷೋತ್ತಮ್ ಮಧ್ಯೆ ತಂದಿಟ್ಟು ತಮಾಷೆ ನೋಡಿದ್ದು ಗಿರಿಧರ್. ಈ ವಿಚಾರ ವಿಶ್ವನಾಥನ್ ಆನಂದ್ ಮತ್ತು ಪುರುಷೋತ್ತಮ್‌ ಅವರಿಗೆ ಮನದಟ್ಟಾಗಿದೆ. ಹೀಗಾಗಿ ಪುರುಷೋತ್ತಮ್ ಅವರನ್ನ ವಿಶ್ವನಾಥನ್ ಆನಂದ್ ಕ್ಷಮೆ ಕೇಳಿದರು. ಮೊದಮೊದಲು ಕಿಡಿಕಾರಿದರೂ, ನಂತರ ಪರಿಸ್ಥಿತಿಯನ್ನ ಅರ್ಥೈಸಿಕೊಂಡು, ಬಾಸ್ ವಿಶ್ವನಾಥನ್ ಆನಂದ್ ಅವರನ್ನು ಪುರುಷೋತ್ತಮ್ ಕ್ಷಮಿಸಿದರು.

Doresani Serial: ಓಹ್.. ಗೂಬೆ ಬಾಸ್ ಆನಂದ್‌ನ ಪುರುಷೋತ್ತಮ್ ಕ್ಷಮಿಸಿಬಿಟ್ಟರು!
ಮದುವೆಗೆ ಒಪ್ಪಿಗೆ ಕೊಡಬೇಕಾಗಿರೋದು ದೀಪಿಕಾ
ಬಾಸ್ ವಿಶ್ವನಾಥನ್ ಆನಂದ್ ಅವರನ್ನ ಪುರುಷೋತ್ತಮ್ ಕ್ಷಮಿಸಿದ್ದಾರೆ. ದೀಪಿಕಾಳನ್ನ ನೋಡಲು ಬಂದಿರುವ ಗಂಡು ಇವರೇ ಅಂತ ಗೊತ್ತಾದ್ಮೇಲೂ ಪುರುಷೋತ್ತಮ್ ತಾಳ್ಮೆ ಕಳೆದುಕೊಳ್ಳಲಿಲ್ಲ. ಮದುವೆಗೆ ಒಪ್ಪಿಗೆ ಕೊಡಬೇಕಾಗಿರೋದು ದೀಪಿಕಾ ಅಂತ ನಿರ್ಧಾರವನ್ನ ಮಗಳ ಮೇಲೆ ಬಿಟ್ಟರು ಪುರುಷೋತ್ತಮ್.

Doresani: ಮೊದಲೇ ಪುರುಷೋತ್ತಮ್‌ಗೆ ಹಾರ್ಟ್‌ ವೀಕ್: ಅಂಥದ್ರಲ್ಲಿ ದೀಪಿಕಾ-ಆನಂದ್ ಲವ್ ಮ್ಯಾಟರ್ ಗೊತ್ತಾದ್ರೆ?
ಮೊದಲ ಸತ್ಯ ಹೇಳಬೇಕು!
ಮದುವೆಗೆ ಒಪ್ಪಿಗೆ ಸೂಚಿಸುವ ಮುನ್ನ ಆನಂದ್ ಹಾಗೂ ತನ್ನ ನಡುವಿನ ಲವ್ ಸ್ಟೋರಿಯ ಸತ್ಯವನ್ನ ತಂದೆಗೆ ಹೇಳಬೇಕೆಂದು ದೀಪಿಕಾ ಮನಸ್ಸು ಮಾಡಿದ್ದಳು. ಹೇಳಿ ಕೇಳಿ ದೀಪಿಕಾ ಅಪ್ಪನ ಮಗಳು. ಹೀಗಾಗಿ, ಅಪ್ಪನಿಗೆ ಮೋಸ ಮಾಡಿ, ಸುಳ್ಳು ಹೇಳಿ ಮದುವೆಯಾಗಲು ದೀಪಿಕಾ ಮನಸ್ಸು ಒಪ್ಪುತ್ತಿಲ್ಲ. ಆದ ಕಾರಣ ಎಲ್ಲವನ್ನೂ ತಂದೆಗೆ ಹೇಳಬೇಕೆಂದು ದೀಪಿಕಾ ನಿರ್ಧರಿಸಿದ್ದರು. ಇನ್ನೇನು ತಂದೆಗೆ ದೀಪಿಕಾ ಎಲ್ಲಾ ಹೇಳಿಬಿಟ್ಟಳು ಅನ್ನೋವಾಗಲೇ, ಪುರುಷೋತ್ತಮ್ ಬೇರೆಡೆ ತೆರಳಿಬಿಟ್ಟರು. ಹೀಗಾಗಿ, ತಂದೆಗೆ ದೀಪಿಕಾ ವಿಷಯ ತಿಳಿಯಲಿಲ್ಲ.

Doresani: ಅಯ್ಯೋ.. ತಪ್ಪು ತಿಳಿದುಕೊಂಡ ದೀಪಿಕಾ: ಸಂಕಷ್ಟದಲ್ಲಿ ಆನಂದ್!
ಇಷ್ಟ ಇಲ್ಲ ಎಂದುಬಿಟ್ಟ ದೀಪಿಕಾ
ಪುರುಷೋತ್ತಮ್ ಮನೆಯಲ್ಲಿ ಎಲ್ಲರಿಗೂ ವಿಶ್ವನಾಥನ್ ಆನಂದ್ ಇಷ್ಟವಾಗಿದ್ದಾನೆ. ಮದುವೆಗೆ ಎಲ್ಲರ ಒಪ್ಪಿಗೆ ಇದೆ. ಆದರೆ, ದೀಪಿಕಾ ಮಾತ್ರ ತನಗೆ ಆನಂದ್ ಇಷ್ಟವಿಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಬಿಟ್ಟಿದ್ದಾಳೆ.

ನಡೆಯುತ್ತಾ ದೀಪಿಕಾ - ಆನಂದ್ ಮದುವೆ?
ಇತ್ತ ಮದುವೆಗೆ ದೀಪಿಕಾ ಒಪ್ಪಿಗೆ ಸೂಚಿಸುತ್ತಿಲ್ಲ. ಅತ್ತ ಮದುವೆಯನ್ನ ತಪ್ಪಿಸಬೇಕೆಂದು ಸತ್ಯವತಿ ಬೇರೆ ಪ್ಲಾನ್ ಮಾಡುತ್ತಿದ್ದಾರೆ. ಹೀಗಿರುವಾಗ, ದೀಪಿಕಾ - ಆನಂದ್ ಮದುವೆ ನಡೆಯುತ್ತಾ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.

ಅಂದ್ಹಾಗೆ, ‘ದೊರೆಸಾನಿ’ ಧಾರಾವಾಹಿಯಲ್ಲಿ ದೀಪಿಕಾ ಆಗಿ ನಟಿ ರೂಪಿಕಾ, ಆನಂದ್ ಆಗಿ ನಟ ಪೃಥ್ವಿರಾಜ್, ಪುರುಷೋತ್ತಮ್ ಆಗಿ ನಟ ಜೈದೇವ್ ಮೋಹನ್, ಸತ್ಯವತಿ ಆಗಿ ಭವಾನಿ ಪ್ರಕಾಶ್ ಅಭಿನಯಿಸುತ್ತಿದ್ದಾರೆ.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ